ನಾಟಕವೊಂದರ ಹಾಡುಗಳು – ೧

ಹಾಡು – ೧

ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ
ಡಯೋನಿಸಸ್ಸನು ಸತ್ತಾಗ,
ಅವನ ಮೈಯಿಂದ ಹೃದಯವ ಕಿತ್ತು
ಕೈಯೊಳು ಅದನ್ನು ಹಿಡಿದಾಗ,
ಹಾಡಿದರೆಲ್ಲಾ ಕಲಾದೇವಿಯರು
ಮಹಾಯುಗಾದಿಯ ಚೈತ್ರದಲಿ,
ದೇವರ ಸಾವೂ ಆಟ ಎಂಬಂತೆ
ಕೂಡಿ ಹಾಡಿದರು ಖುಷಿಯಲ್ಲಿ.

ಮೂಡಿ ಮುಳುಗುವುದು ಟ್ರಾಯ್ ಇನ್ನೊಮ್ಮೆ
ವೀರರುಣಿಸುವರು ನರಿಗಳಿಗೆ,
ಹೊನ್ನ ತುಪ್ಪಟಕ ಬಣ್ಣದ ಆರ್‍ಗೋ –
ದೋಣಿ ಹಾಯುವುವು ಸಾಗರಕೆ.
ರೋಮನ್ ರಾಜ್ಯ ಸ್ತಂಭಿತವಾಯಿತು
ಶಾಂತಿಯುದ್ಧ ಸೂತ್ರವ ಒಗೆದು,
ಮೂಲತಮದಿಂದ ಉಗ್ರಕನ್ನಿಕೆಯ
ಜೊತೆಗೇ ಚಿಕ್ಕೆಯು ಮೂಡಿರಲು
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಪೂರ್‍ಣವಾಗಿ ತಿಳಿಯದಾಗಲೂ ನಮ್ಮನ್ನು ಸೆಳೆಯಬಲ್ಲ ನಿಗೂಢ ಮೋಹಕತೆ ಈ ಹಾಡುಗಳಲ್ಲಿದೆ. ಈ ಎರಡು ಹಾಡುಗಳನ್ನು ಏಟ್ಸನ ‘ರಿಸರೆಕ್ಷನ್’ ಎಂಬ ನಾಟಕದಿಂದ
ಆರಿಸಲಾಗಿದೆ.
(೧) ದಿಟ್ಟಿಸಿ ನೋಡುವ ಕನ್ನಿಕೆ ಗ್ರೀಕ್‌ ದೇವತೆ ಅಥೀನಾ.
(೨) ಡಯೋನಿಸಸ್ ಮರ್‍ತ್ಯಾಮರ್‍ತ್ಯ ಶಕ್ತಿಗಳ ಮಿಲನದಿಂದ ಬಂದವನು. ಇವನ ತಂದೆ ದೇವತೆಗಳ ಒಡೆಯ ಸ್ಯೂಸ್, ತಾಯಿ ಮರ್‍ತ್ಯಳಾದ ಪರ್‍ಸೆಫೋನ್. ಸ್ಯೂಸನ ಹಿರಿಯ ಪತ್ನಿಯಾದ ಹೀರಾಳನ್ನು ಮೆಚ್ಚಿಸಲು ಶತ್ರುಗಳು ಅವನನ್ನು ಕತ್ತರಿಸಿ ಹಾಕುತ್ತಾರೆ. ಅಥೀನಾ ಡಯೋನಿಸಸ್ಸಿನ ಹೃದಯವನ್ನು ಅವರಿಂದ ಕಸಿದು ತಂದು ಸ್ಯೂಸನಿಗೆ ಕೊಡುತ್ತಾಳೆ, ಸ್ಯೂಸ್ ಅದನ್ನು ನುಂಗಿ ಪುನಃ ಅವನನ್ನು ಇಡಿಯಾಗಿ ಪಡೆಯುತ್ತಾನೆ. ಡಯೋನಿಸಸ್ ಋತುಶಕ್ತಿಯನ್ನು ಪ್ರತಿನಿಧಿಸುವ ದೇವತೆ. ಅವನ ಹುಟ್ಟು ಸಾವುಗಳೆರಡೂ ಋತುಚಕ್ರದ ಆರಂಭಕ್ಕೆ ಅಗತ್ಯವಾದವು. ಅವನು ಸತ್ತರೂ ಮತ್ತೆ ಹುಟ್ಟುತ್ತಾನೆನ್ನುವುದು ಗೊತ್ತಿರುವುದರಿಂದ ಕಲಾದೇವಿಯರು ಸಂತೋಷಚಿತ್ತರಾಗಿ ಹಾಡುತ್ತಾರೆ.
(೮-೧೨) ಹಿಂದೆ ನಡೆದ ಟ್ರೋಜನ್ ಯುದ್ಧ ಮತ್ತೆ ನಡೆಯುತ್ತದೆ. ಆರ್‍ಗೋದೋಣಿ= ಗ್ರೀಕ್‌ ದೋಣಿ, ಉಗ್ರಕನ್ನಿಕೆ ಮತ್ತು ಚಿಹ್ನೆಗಳು ಮೇರಿ ಹಾಗೂ ಕ್ರಿಸ್ತನನ್ನು ಸೂಚಿಸುತ್ತವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೬
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬೧

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…