Home / ಕವನ / ಅನುವಾದ / ನಾಟಕವೊಂದರ ಹಾಡುಗಳು – ೧

ನಾಟಕವೊಂದರ ಹಾಡುಗಳು – ೧

ಹಾಡು – ೧

ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ
ಡಯೋನಿಸಸ್ಸನು ಸತ್ತಾಗ,
ಅವನ ಮೈಯಿಂದ ಹೃದಯವ ಕಿತ್ತು
ಕೈಯೊಳು ಅದನ್ನು ಹಿಡಿದಾಗ,
ಹಾಡಿದರೆಲ್ಲಾ ಕಲಾದೇವಿಯರು
ಮಹಾಯುಗಾದಿಯ ಚೈತ್ರದಲಿ,
ದೇವರ ಸಾವೂ ಆಟ ಎಂಬಂತೆ
ಕೂಡಿ ಹಾಡಿದರು ಖುಷಿಯಲ್ಲಿ.

ಮೂಡಿ ಮುಳುಗುವುದು ಟ್ರಾಯ್ ಇನ್ನೊಮ್ಮೆ
ವೀರರುಣಿಸುವರು ನರಿಗಳಿಗೆ,
ಹೊನ್ನ ತುಪ್ಪಟಕ ಬಣ್ಣದ ಆರ್‍ಗೋ –
ದೋಣಿ ಹಾಯುವುವು ಸಾಗರಕೆ.
ರೋಮನ್ ರಾಜ್ಯ ಸ್ತಂಭಿತವಾಯಿತು
ಶಾಂತಿಯುದ್ಧ ಸೂತ್ರವ ಒಗೆದು,
ಮೂಲತಮದಿಂದ ಉಗ್ರಕನ್ನಿಕೆಯ
ಜೊತೆಗೇ ಚಿಕ್ಕೆಯು ಮೂಡಿರಲು
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಪೂರ್‍ಣವಾಗಿ ತಿಳಿಯದಾಗಲೂ ನಮ್ಮನ್ನು ಸೆಳೆಯಬಲ್ಲ ನಿಗೂಢ ಮೋಹಕತೆ ಈ ಹಾಡುಗಳಲ್ಲಿದೆ. ಈ ಎರಡು ಹಾಡುಗಳನ್ನು ಏಟ್ಸನ ‘ರಿಸರೆಕ್ಷನ್’ ಎಂಬ ನಾಟಕದಿಂದ
ಆರಿಸಲಾಗಿದೆ.
(೧) ದಿಟ್ಟಿಸಿ ನೋಡುವ ಕನ್ನಿಕೆ ಗ್ರೀಕ್‌ ದೇವತೆ ಅಥೀನಾ.
(೨) ಡಯೋನಿಸಸ್ ಮರ್‍ತ್ಯಾಮರ್‍ತ್ಯ ಶಕ್ತಿಗಳ ಮಿಲನದಿಂದ ಬಂದವನು. ಇವನ ತಂದೆ ದೇವತೆಗಳ ಒಡೆಯ ಸ್ಯೂಸ್, ತಾಯಿ ಮರ್‍ತ್ಯಳಾದ ಪರ್‍ಸೆಫೋನ್. ಸ್ಯೂಸನ ಹಿರಿಯ ಪತ್ನಿಯಾದ ಹೀರಾಳನ್ನು ಮೆಚ್ಚಿಸಲು ಶತ್ರುಗಳು ಅವನನ್ನು ಕತ್ತರಿಸಿ ಹಾಕುತ್ತಾರೆ. ಅಥೀನಾ ಡಯೋನಿಸಸ್ಸಿನ ಹೃದಯವನ್ನು ಅವರಿಂದ ಕಸಿದು ತಂದು ಸ್ಯೂಸನಿಗೆ ಕೊಡುತ್ತಾಳೆ, ಸ್ಯೂಸ್ ಅದನ್ನು ನುಂಗಿ ಪುನಃ ಅವನನ್ನು ಇಡಿಯಾಗಿ ಪಡೆಯುತ್ತಾನೆ. ಡಯೋನಿಸಸ್ ಋತುಶಕ್ತಿಯನ್ನು ಪ್ರತಿನಿಧಿಸುವ ದೇವತೆ. ಅವನ ಹುಟ್ಟು ಸಾವುಗಳೆರಡೂ ಋತುಚಕ್ರದ ಆರಂಭಕ್ಕೆ ಅಗತ್ಯವಾದವು. ಅವನು ಸತ್ತರೂ ಮತ್ತೆ ಹುಟ್ಟುತ್ತಾನೆನ್ನುವುದು ಗೊತ್ತಿರುವುದರಿಂದ ಕಲಾದೇವಿಯರು ಸಂತೋಷಚಿತ್ತರಾಗಿ ಹಾಡುತ್ತಾರೆ.
(೮-೧೨) ಹಿಂದೆ ನಡೆದ ಟ್ರೋಜನ್ ಯುದ್ಧ ಮತ್ತೆ ನಡೆಯುತ್ತದೆ. ಆರ್‍ಗೋದೋಣಿ= ಗ್ರೀಕ್‌ ದೋಣಿ, ಉಗ್ರಕನ್ನಿಕೆ ಮತ್ತು ಚಿಹ್ನೆಗಳು ಮೇರಿ ಹಾಗೂ ಕ್ರಿಸ್ತನನ್ನು ಸೂಚಿಸುತ್ತವೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...