ನೆನಪು

ಹೊಳೆದಂಡೆಯ ಮುಟ್ಟಲು ಮರುಕಿ
ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ
ರಕ್ತ ಬಂತು ನಿನ್ನ ನೆನಪಾಗಿ
ಹಿತ್ತಲದ ನಂದಿ ಬಟ್ಟಲು ಹೂಗಳು
ಗಂಧ ಯಾಕೋ ಪರಿಮಳ ಸೂಸಲು
ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು.

ಯಾರು ಎಲ್ಲಿ ಯಾವ ಭಾವಕೆ
ಬಸಿರಾದರೂ, ನದಿ ಸುಮ್ಮನೆ
ಹರಿಯುತ್ತದೆ ಸಾಗರದ ಸೆಳುವಿಗೆ
ಮುಂಜಾನೆ ಅರಳಿದ ಹೂ ಸಂಜೆ ಬಾಡಿ
ಮಬ್ಬು ಕತ್ತಲೆ ಕೋಣೆಯಲ್ಲಿ ನಿನ್ನ ಕರಿ
ನೆರಳು ದಾಟಿ ಬರುವುದಿಲ್ಲ ಅಂಗಳದಿಂದ
ಕೋಣೆಯವರೆಗೆ ಹೊರಗೆ ಸ್ವಲ್ಪ
ತಿಳಿ ಬೆಳದಿಂಗಳು ಮಾತ್ರ ಹರಡಿದೆ ಮುಸುಕಾಗಿ.

ಎಲ್ಲೆಲ್ಲೋ ಹಾರಾಡಿದ ಚಿಟ್ಟೆ ಹೀರಿದ
ಮಕರಂದ ಜೇನು ಗೂಡಾಗಿ ನನ್ನೆದೆ
ಸಿಹಿ ಹನಿಯ ತುಂಬಿದೆ ಬರೀ ಬೆವರ
ಹನಿಗಳು ಸಾರುತ್ತಿವೆ; ತಂಗಾಳಿ ಬೀಸದ
ಉರಿ ಹಗಲಿನಲಿ ಎಲ್ಲೆಲ್ಲೋ ಆಸ್ಪತ್ರೆಯ
ವಾಸನೆ ನೀನು ಮುಖ ತೋರಿಸದೆ
ಜಡಿ ಹೋದ ಸೂರ್ಯ ತಾಪದಿಂದ
ಕುದಿದ ಹಗಲು ಹೈರಾಣವಾಗಿದೆ ನಿನ್ನಿಂದ.

ಎಲ್ಲ ಕಾಲಕ್ಕೂ, ಎಲ್ಲರಂತೆ ಇಲ್ಲದ ಸಂಬಂಧ
ನೆನಪಿನಕೊಂಡಿ ಅಲ್ಲ ನಿನ್ನ ಇಲ್ಲಿ ನನ್ನ
ಅಬ್ಬೆ ಪಾರಿಯಂತೆ ನಿಲ್ಲಿಸಿ ಬಿಟ್ಟಿವೆ ಬಯಲಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣಕ ಸಸ್ಯಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೯

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…