ನೆನಪು

ಹೊಳೆದಂಡೆಯ ಮುಟ್ಟಲು ಮರುಕಿ
ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ
ರಕ್ತ ಬಂತು ನಿನ್ನ ನೆನಪಾಗಿ
ಹಿತ್ತಲದ ನಂದಿ ಬಟ್ಟಲು ಹೂಗಳು
ಗಂಧ ಯಾಕೋ ಪರಿಮಳ ಸೂಸಲು
ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು.

ಯಾರು ಎಲ್ಲಿ ಯಾವ ಭಾವಕೆ
ಬಸಿರಾದರೂ, ನದಿ ಸುಮ್ಮನೆ
ಹರಿಯುತ್ತದೆ ಸಾಗರದ ಸೆಳುವಿಗೆ
ಮುಂಜಾನೆ ಅರಳಿದ ಹೂ ಸಂಜೆ ಬಾಡಿ
ಮಬ್ಬು ಕತ್ತಲೆ ಕೋಣೆಯಲ್ಲಿ ನಿನ್ನ ಕರಿ
ನೆರಳು ದಾಟಿ ಬರುವುದಿಲ್ಲ ಅಂಗಳದಿಂದ
ಕೋಣೆಯವರೆಗೆ ಹೊರಗೆ ಸ್ವಲ್ಪ
ತಿಳಿ ಬೆಳದಿಂಗಳು ಮಾತ್ರ ಹರಡಿದೆ ಮುಸುಕಾಗಿ.

ಎಲ್ಲೆಲ್ಲೋ ಹಾರಾಡಿದ ಚಿಟ್ಟೆ ಹೀರಿದ
ಮಕರಂದ ಜೇನು ಗೂಡಾಗಿ ನನ್ನೆದೆ
ಸಿಹಿ ಹನಿಯ ತುಂಬಿದೆ ಬರೀ ಬೆವರ
ಹನಿಗಳು ಸಾರುತ್ತಿವೆ; ತಂಗಾಳಿ ಬೀಸದ
ಉರಿ ಹಗಲಿನಲಿ ಎಲ್ಲೆಲ್ಲೋ ಆಸ್ಪತ್ರೆಯ
ವಾಸನೆ ನೀನು ಮುಖ ತೋರಿಸದೆ
ಜಡಿ ಹೋದ ಸೂರ್ಯ ತಾಪದಿಂದ
ಕುದಿದ ಹಗಲು ಹೈರಾಣವಾಗಿದೆ ನಿನ್ನಿಂದ.

ಎಲ್ಲ ಕಾಲಕ್ಕೂ, ಎಲ್ಲರಂತೆ ಇಲ್ಲದ ಸಂಬಂಧ
ನೆನಪಿನಕೊಂಡಿ ಅಲ್ಲ ನಿನ್ನ ಇಲ್ಲಿ ನನ್ನ
ಅಬ್ಬೆ ಪಾರಿಯಂತೆ ನಿಲ್ಲಿಸಿ ಬಿಟ್ಟಿವೆ ಬಯಲಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣಕ ಸಸ್ಯಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೯

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…