ನೆನಪು

ಹೊಳೆದಂಡೆಯ ಮುಟ್ಟಲು ಮರುಕಿ
ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ
ರಕ್ತ ಬಂತು ನಿನ್ನ ನೆನಪಾಗಿ
ಹಿತ್ತಲದ ನಂದಿ ಬಟ್ಟಲು ಹೂಗಳು
ಗಂಧ ಯಾಕೋ ಪರಿಮಳ ಸೂಸಲು
ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು.

ಯಾರು ಎಲ್ಲಿ ಯಾವ ಭಾವಕೆ
ಬಸಿರಾದರೂ, ನದಿ ಸುಮ್ಮನೆ
ಹರಿಯುತ್ತದೆ ಸಾಗರದ ಸೆಳುವಿಗೆ
ಮುಂಜಾನೆ ಅರಳಿದ ಹೂ ಸಂಜೆ ಬಾಡಿ
ಮಬ್ಬು ಕತ್ತಲೆ ಕೋಣೆಯಲ್ಲಿ ನಿನ್ನ ಕರಿ
ನೆರಳು ದಾಟಿ ಬರುವುದಿಲ್ಲ ಅಂಗಳದಿಂದ
ಕೋಣೆಯವರೆಗೆ ಹೊರಗೆ ಸ್ವಲ್ಪ
ತಿಳಿ ಬೆಳದಿಂಗಳು ಮಾತ್ರ ಹರಡಿದೆ ಮುಸುಕಾಗಿ.

ಎಲ್ಲೆಲ್ಲೋ ಹಾರಾಡಿದ ಚಿಟ್ಟೆ ಹೀರಿದ
ಮಕರಂದ ಜೇನು ಗೂಡಾಗಿ ನನ್ನೆದೆ
ಸಿಹಿ ಹನಿಯ ತುಂಬಿದೆ ಬರೀ ಬೆವರ
ಹನಿಗಳು ಸಾರುತ್ತಿವೆ; ತಂಗಾಳಿ ಬೀಸದ
ಉರಿ ಹಗಲಿನಲಿ ಎಲ್ಲೆಲ್ಲೋ ಆಸ್ಪತ್ರೆಯ
ವಾಸನೆ ನೀನು ಮುಖ ತೋರಿಸದೆ
ಜಡಿ ಹೋದ ಸೂರ್ಯ ತಾಪದಿಂದ
ಕುದಿದ ಹಗಲು ಹೈರಾಣವಾಗಿದೆ ನಿನ್ನಿಂದ.

ಎಲ್ಲ ಕಾಲಕ್ಕೂ, ಎಲ್ಲರಂತೆ ಇಲ್ಲದ ಸಂಬಂಧ
ನೆನಪಿನಕೊಂಡಿ ಅಲ್ಲ ನಿನ್ನ ಇಲ್ಲಿ ನನ್ನ
ಅಬ್ಬೆ ಪಾರಿಯಂತೆ ನಿಲ್ಲಿಸಿ ಬಿಟ್ಟಿವೆ ಬಯಲಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣಕ ಸಸ್ಯಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೯

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…