ಮಹಾಭಾರತ

ತಂತಿಯಲಿ ತೇಲಿ ಬಂದ ಅವರ
ಧ್ವನಿ ಕಂಪನಗಳು ನೇರವಾಗಿ
ನನ್ನೆದೆಯೊಳಗೆ ಇಳಿದಾಗ ಆಗಸದಲ್ಲಿ
ಸೂರ್ಯ ಕ್ರಮಿಸಲು ಶುರುವಿಟ್ಟುಕೊಂಡಿದ್ದಾನೆ.
ದಿನದ ಉಲ್ಲಾಸಗಳೆಲ್ಲಾ ಸಾಂದ್ರವಾಗಿ
ಕೆನೆಗಟ್ಟದ ಹಾಲು, ನಡೆದಾಡುವ, ಇತಿಹಾಸಕ್ಕೆ ಸಾಕ್ಷಿ.
ಸೆರಗ ತುಂಬಾ ಕೆಂಡ ಕಟ್ಟಿಕೊಂಡ ದ್ರೌಪದಿ.

ಬಯಲಾಟ ವೇಷಗಳಿಗೆ ಕಾಮನ ಬಿಲ್ಲಿನ
ರಂಗಗಳು ತುಂಬ ವೇಷಕಟ್ಟು ವರ ನಿಜದಲಿ
ನಿನ್ನ ನೆನಪಿನ ಹಣತೆಗಳ ಹಚ್ಚಿ ದೀಪಾವಳಿ
ಬೆಂಕಿಯಂತೆ ಸುಡುವ ರಾತ್ರಿ ಜೂಜಾಟದಲಿ
ಪಗಡೆಯಾಡಿ ಸೋತ ವೀರ್ಯವಂತರ ಸೇನೆ
ದಾಳಗಳ ದಾಳಿಗೆ ದೃಷ್ಟಿ ಕಳೆದುಕೊಂಡ ಗಾಂಧಾರಿ.

ಎಲ್ಲಿಯೂ ಕೊಡಲಿಲ್ಲ ಸೂತಕದ ನೆರಳು
ಪುನಕರಗಿ ದ್ರವವಾದ ಸುಯೋಧನ
ಕಣ್ಣ ತುಂಬ ಹೆಪ್ಪುಗಟ್ಟದ ವೈಶಾಂಪಾಯನ
ಬಿಕ್ಷಾಪಾತ್ರೆಯಲಿ ತುಂಬಿ ತೇಲಿದ ಅಪರಾಧ
ತಿಳಿದ ದಾರಿಯ ತುಳಿಯ ಹೊರಟ ಪಾಂಚಾಲಿ.

ಭಾರತದಲಿ ಮಹಾಭಾರತ ಯಾವುದು
ಎತಕ್ಕೆ ಎಂಬುದು ತಿಳಿಯದೇ ಹರಿಹಾಯ್ದ
ಮಂಡೆ ಕಾಯಿಸಿಕೊಂಡ ಎಣ್ಣೆ ದೀಪ ಉರಿಸಿದ
ವ್ಯಾಸ ಹೀಗೆ ದಣಿಯುತ್ತ ನಡೆಯುವ ದೇಹ
ಕೈಗೆ ಸಿಕ್ಕಿ ಬೀಜಗಳ ಉದುರಿಸಿ ಗಿಡ, ಮರ
ಬಳ್ಳಿಗಳ ಹಬ್ಬಿಸಿ ಕಳೆದ ಜನ್ಮಾಂತರ
ಲೋಕದ ಏಕಾಂತವೆಲ್ಲಾ ಬಣ್ಣದಲ್ಲಿ ಅದ್ದಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳ್ಳುಳ್ಳಿ ಸೇವನೆ ಮತ್ತು ಆರೋಗ್ಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೫

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…