Home / ಕವನ / ಕವಿತೆ / ಮಹಾಭಾರತ

ಮಹಾಭಾರತ

ತಂತಿಯಲಿ ತೇಲಿ ಬಂದ ಅವರ
ಧ್ವನಿ ಕಂಪನಗಳು ನೇರವಾಗಿ
ನನ್ನೆದೆಯೊಳಗೆ ಇಳಿದಾಗ ಆಗಸದಲ್ಲಿ
ಸೂರ್ಯ ಕ್ರಮಿಸಲು ಶುರುವಿಟ್ಟುಕೊಂಡಿದ್ದಾನೆ.
ದಿನದ ಉಲ್ಲಾಸಗಳೆಲ್ಲಾ ಸಾಂದ್ರವಾಗಿ
ಕೆನೆಗಟ್ಟದ ಹಾಲು, ನಡೆದಾಡುವ, ಇತಿಹಾಸಕ್ಕೆ ಸಾಕ್ಷಿ.
ಸೆರಗ ತುಂಬಾ ಕೆಂಡ ಕಟ್ಟಿಕೊಂಡ ದ್ರೌಪದಿ.

ಬಯಲಾಟ ವೇಷಗಳಿಗೆ ಕಾಮನ ಬಿಲ್ಲಿನ
ರಂಗಗಳು ತುಂಬ ವೇಷಕಟ್ಟು ವರ ನಿಜದಲಿ
ನಿನ್ನ ನೆನಪಿನ ಹಣತೆಗಳ ಹಚ್ಚಿ ದೀಪಾವಳಿ
ಬೆಂಕಿಯಂತೆ ಸುಡುವ ರಾತ್ರಿ ಜೂಜಾಟದಲಿ
ಪಗಡೆಯಾಡಿ ಸೋತ ವೀರ್ಯವಂತರ ಸೇನೆ
ದಾಳಗಳ ದಾಳಿಗೆ ದೃಷ್ಟಿ ಕಳೆದುಕೊಂಡ ಗಾಂಧಾರಿ.

ಎಲ್ಲಿಯೂ ಕೊಡಲಿಲ್ಲ ಸೂತಕದ ನೆರಳು
ಪುನಕರಗಿ ದ್ರವವಾದ ಸುಯೋಧನ
ಕಣ್ಣ ತುಂಬ ಹೆಪ್ಪುಗಟ್ಟದ ವೈಶಾಂಪಾಯನ
ಬಿಕ್ಷಾಪಾತ್ರೆಯಲಿ ತುಂಬಿ ತೇಲಿದ ಅಪರಾಧ
ತಿಳಿದ ದಾರಿಯ ತುಳಿಯ ಹೊರಟ ಪಾಂಚಾಲಿ.

ಭಾರತದಲಿ ಮಹಾಭಾರತ ಯಾವುದು
ಎತಕ್ಕೆ ಎಂಬುದು ತಿಳಿಯದೇ ಹರಿಹಾಯ್ದ
ಮಂಡೆ ಕಾಯಿಸಿಕೊಂಡ ಎಣ್ಣೆ ದೀಪ ಉರಿಸಿದ
ವ್ಯಾಸ ಹೀಗೆ ದಣಿಯುತ್ತ ನಡೆಯುವ ದೇಹ
ಕೈಗೆ ಸಿಕ್ಕಿ ಬೀಜಗಳ ಉದುರಿಸಿ ಗಿಡ, ಮರ
ಬಳ್ಳಿಗಳ ಹಬ್ಬಿಸಿ ಕಳೆದ ಜನ್ಮಾಂತರ
ಲೋಕದ ಏಕಾಂತವೆಲ್ಲಾ ಬಣ್ಣದಲ್ಲಿ ಅದ್ದಿದ್ದ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...