ಮಹಾಭಾರತ

ತಂತಿಯಲಿ ತೇಲಿ ಬಂದ ಅವರ
ಧ್ವನಿ ಕಂಪನಗಳು ನೇರವಾಗಿ
ನನ್ನೆದೆಯೊಳಗೆ ಇಳಿದಾಗ ಆಗಸದಲ್ಲಿ
ಸೂರ್ಯ ಕ್ರಮಿಸಲು ಶುರುವಿಟ್ಟುಕೊಂಡಿದ್ದಾನೆ.
ದಿನದ ಉಲ್ಲಾಸಗಳೆಲ್ಲಾ ಸಾಂದ್ರವಾಗಿ
ಕೆನೆಗಟ್ಟದ ಹಾಲು, ನಡೆದಾಡುವ, ಇತಿಹಾಸಕ್ಕೆ ಸಾಕ್ಷಿ.
ಸೆರಗ ತುಂಬಾ ಕೆಂಡ ಕಟ್ಟಿಕೊಂಡ ದ್ರೌಪದಿ.

ಬಯಲಾಟ ವೇಷಗಳಿಗೆ ಕಾಮನ ಬಿಲ್ಲಿನ
ರಂಗಗಳು ತುಂಬ ವೇಷಕಟ್ಟು ವರ ನಿಜದಲಿ
ನಿನ್ನ ನೆನಪಿನ ಹಣತೆಗಳ ಹಚ್ಚಿ ದೀಪಾವಳಿ
ಬೆಂಕಿಯಂತೆ ಸುಡುವ ರಾತ್ರಿ ಜೂಜಾಟದಲಿ
ಪಗಡೆಯಾಡಿ ಸೋತ ವೀರ್ಯವಂತರ ಸೇನೆ
ದಾಳಗಳ ದಾಳಿಗೆ ದೃಷ್ಟಿ ಕಳೆದುಕೊಂಡ ಗಾಂಧಾರಿ.

ಎಲ್ಲಿಯೂ ಕೊಡಲಿಲ್ಲ ಸೂತಕದ ನೆರಳು
ಪುನಕರಗಿ ದ್ರವವಾದ ಸುಯೋಧನ
ಕಣ್ಣ ತುಂಬ ಹೆಪ್ಪುಗಟ್ಟದ ವೈಶಾಂಪಾಯನ
ಬಿಕ್ಷಾಪಾತ್ರೆಯಲಿ ತುಂಬಿ ತೇಲಿದ ಅಪರಾಧ
ತಿಳಿದ ದಾರಿಯ ತುಳಿಯ ಹೊರಟ ಪಾಂಚಾಲಿ.

ಭಾರತದಲಿ ಮಹಾಭಾರತ ಯಾವುದು
ಎತಕ್ಕೆ ಎಂಬುದು ತಿಳಿಯದೇ ಹರಿಹಾಯ್ದ
ಮಂಡೆ ಕಾಯಿಸಿಕೊಂಡ ಎಣ್ಣೆ ದೀಪ ಉರಿಸಿದ
ವ್ಯಾಸ ಹೀಗೆ ದಣಿಯುತ್ತ ನಡೆಯುವ ದೇಹ
ಕೈಗೆ ಸಿಕ್ಕಿ ಬೀಜಗಳ ಉದುರಿಸಿ ಗಿಡ, ಮರ
ಬಳ್ಳಿಗಳ ಹಬ್ಬಿಸಿ ಕಳೆದ ಜನ್ಮಾಂತರ
ಲೋಕದ ಏಕಾಂತವೆಲ್ಲಾ ಬಣ್ಣದಲ್ಲಿ ಅದ್ದಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳ್ಳುಳ್ಳಿ ಸೇವನೆ ಮತ್ತು ಆರೋಗ್ಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೫

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…