ಸೋನೆ

ಹನಿಹನಿ ಬಿದ್ದು ಲಯ ಭೋರೆಂದು
ಸುರಿದಾಗ ಬೀದಿಯಲಿ ಹರಿಯುವ
ಧಾರೆ ಹಳ್ಳವಾಗಿ ನದಿಯಾಗಿ
ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ
ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ
ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ.

ಸಾಲು ಸಾಲು ಪಾಠವ ಮುಗಿಸಿದ ಮೇಷ್ಟ್ರು
ಕೈಯಲ್ಲಿ ಕೋಲು ನೋಡಿದ ಪಿಳಿಪಿಳಿ ಕಣ್ಣುಗಳು
ಬೆರಳು ಸಂದಿ ಪೆನ್ಸಿಲ್ಲು ಗೀಚುವ ಗಣಿತ
ಬೀಜ ಬಿತ್ತುವ ಬಿಕ್ಕುವ ನೆಲದಲಿ
ಚಿಗುರಿ ಚಿಮ್ಮುವ ಕನಸಿನ ಸದ್ದು
ಗರಿಕೆದರಿ ಹಾರುವ ಗುಬ್ಬಿ ಹನಿಗೆ ಮುದುರಿ
ನಿಟ್ಟುಸಿರು ಬಿಟ್ಟ ಸಮಯ ಅಕ್ಷರಗಳು ತೂಗುತ್ತವೆ
ಮೋಡಗಳಲ್ಲಿ ಹನಿಯಾಗಿ.

ಕಾಲು ಮುರಿದು ಬಿದ್ದಿವೆ ಹಾರುವ ಚಿಟ್ಟೆಗಳು
ನಿನ್ನೆ ನಾಳೆಗಳ ಕಲಿಸಿ ಈ ದಿನದಲ್ಲಿ ಸುರಿದ
ಮಳೆಗೆ ಬಣ್ಣ ತೊಳೆದು ರಾಡಿ ನೀರು ಎಲ್ಲೆಲ್ಲೂ
ಜೋಗುಳದ ಹಾಡಿನಲಿ ಚಿಕ್ಕಳಿಕೆ ಅಡುಗೆ
ಒಲೆ ಉರಿಯಲಿಲ್ಲ ಒಳಗೆ, ಮಾಡಿನ
ಮೇಲೆ ಜಿನುಗಿದ ಹನಿಗಳು ಅಂಗಳದ
ತುಂಬೆಲ್ಲಾ ತೂತು ತೂತು ಹೂಡಿವೆ.

ಸೋಗಲಾಡಿ ಸೋನೆ ಮತ್ತದೇಧಾವಂತ ಹೊತ್ತು
ಬರುತ್ತಾಳೆ ಕವಿತೆ ಹುಟ್ಟುವ ತವಕದ ಇಳಿಸಂಜೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿದ್ಯಾರ್ಥಿಗಳ ಸಮಸ್ಯಾತ್ಮಕ ನಡವಳಿಕೆಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೬

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…