Home / ಕವನ / ಕವಿತೆ / ಸೋನೆ

ಸೋನೆ

ಹನಿಹನಿ ಬಿದ್ದು ಲಯ ಭೋರೆಂದು
ಸುರಿದಾಗ ಬೀದಿಯಲಿ ಹರಿಯುವ
ಧಾರೆ ಹಳ್ಳವಾಗಿ ನದಿಯಾಗಿ
ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ
ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ
ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ.

ಸಾಲು ಸಾಲು ಪಾಠವ ಮುಗಿಸಿದ ಮೇಷ್ಟ್ರು
ಕೈಯಲ್ಲಿ ಕೋಲು ನೋಡಿದ ಪಿಳಿಪಿಳಿ ಕಣ್ಣುಗಳು
ಬೆರಳು ಸಂದಿ ಪೆನ್ಸಿಲ್ಲು ಗೀಚುವ ಗಣಿತ
ಬೀಜ ಬಿತ್ತುವ ಬಿಕ್ಕುವ ನೆಲದಲಿ
ಚಿಗುರಿ ಚಿಮ್ಮುವ ಕನಸಿನ ಸದ್ದು
ಗರಿಕೆದರಿ ಹಾರುವ ಗುಬ್ಬಿ ಹನಿಗೆ ಮುದುರಿ
ನಿಟ್ಟುಸಿರು ಬಿಟ್ಟ ಸಮಯ ಅಕ್ಷರಗಳು ತೂಗುತ್ತವೆ
ಮೋಡಗಳಲ್ಲಿ ಹನಿಯಾಗಿ.

ಕಾಲು ಮುರಿದು ಬಿದ್ದಿವೆ ಹಾರುವ ಚಿಟ್ಟೆಗಳು
ನಿನ್ನೆ ನಾಳೆಗಳ ಕಲಿಸಿ ಈ ದಿನದಲ್ಲಿ ಸುರಿದ
ಮಳೆಗೆ ಬಣ್ಣ ತೊಳೆದು ರಾಡಿ ನೀರು ಎಲ್ಲೆಲ್ಲೂ
ಜೋಗುಳದ ಹಾಡಿನಲಿ ಚಿಕ್ಕಳಿಕೆ ಅಡುಗೆ
ಒಲೆ ಉರಿಯಲಿಲ್ಲ ಒಳಗೆ, ಮಾಡಿನ
ಮೇಲೆ ಜಿನುಗಿದ ಹನಿಗಳು ಅಂಗಳದ
ತುಂಬೆಲ್ಲಾ ತೂತು ತೂತು ಹೂಡಿವೆ.

ಸೋಗಲಾಡಿ ಸೋನೆ ಮತ್ತದೇಧಾವಂತ ಹೊತ್ತು
ಬರುತ್ತಾಳೆ ಕವಿತೆ ಹುಟ್ಟುವ ತವಕದ ಇಳಿಸಂಜೆಯಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...