ಸೋನೆ

ಹನಿಹನಿ ಬಿದ್ದು ಲಯ ಭೋರೆಂದು
ಸುರಿದಾಗ ಬೀದಿಯಲಿ ಹರಿಯುವ
ಧಾರೆ ಹಳ್ಳವಾಗಿ ನದಿಯಾಗಿ
ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ
ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ
ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ.

ಸಾಲು ಸಾಲು ಪಾಠವ ಮುಗಿಸಿದ ಮೇಷ್ಟ್ರು
ಕೈಯಲ್ಲಿ ಕೋಲು ನೋಡಿದ ಪಿಳಿಪಿಳಿ ಕಣ್ಣುಗಳು
ಬೆರಳು ಸಂದಿ ಪೆನ್ಸಿಲ್ಲು ಗೀಚುವ ಗಣಿತ
ಬೀಜ ಬಿತ್ತುವ ಬಿಕ್ಕುವ ನೆಲದಲಿ
ಚಿಗುರಿ ಚಿಮ್ಮುವ ಕನಸಿನ ಸದ್ದು
ಗರಿಕೆದರಿ ಹಾರುವ ಗುಬ್ಬಿ ಹನಿಗೆ ಮುದುರಿ
ನಿಟ್ಟುಸಿರು ಬಿಟ್ಟ ಸಮಯ ಅಕ್ಷರಗಳು ತೂಗುತ್ತವೆ
ಮೋಡಗಳಲ್ಲಿ ಹನಿಯಾಗಿ.

ಕಾಲು ಮುರಿದು ಬಿದ್ದಿವೆ ಹಾರುವ ಚಿಟ್ಟೆಗಳು
ನಿನ್ನೆ ನಾಳೆಗಳ ಕಲಿಸಿ ಈ ದಿನದಲ್ಲಿ ಸುರಿದ
ಮಳೆಗೆ ಬಣ್ಣ ತೊಳೆದು ರಾಡಿ ನೀರು ಎಲ್ಲೆಲ್ಲೂ
ಜೋಗುಳದ ಹಾಡಿನಲಿ ಚಿಕ್ಕಳಿಕೆ ಅಡುಗೆ
ಒಲೆ ಉರಿಯಲಿಲ್ಲ ಒಳಗೆ, ಮಾಡಿನ
ಮೇಲೆ ಜಿನುಗಿದ ಹನಿಗಳು ಅಂಗಳದ
ತುಂಬೆಲ್ಲಾ ತೂತು ತೂತು ಹೂಡಿವೆ.

ಸೋಗಲಾಡಿ ಸೋನೆ ಮತ್ತದೇಧಾವಂತ ಹೊತ್ತು
ಬರುತ್ತಾಳೆ ಕವಿತೆ ಹುಟ್ಟುವ ತವಕದ ಇಳಿಸಂಜೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿದ್ಯಾರ್ಥಿಗಳ ಸಮಸ್ಯಾತ್ಮಕ ನಡವಳಿಕೆಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೬

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys