ಕರ್ಣಬಂದು ಕರ್ಬಲದಲಿ ಪಾರ್ಥಾ

ಕರ್ಣಬಂದು ಕರ್ಬಲದಲಿ ಪಾರ್ಥಾ
ವರ್ನಕಂಡು ಕದನಕ ನಿಂತ ಸು-       ||ಪ||
ವರ್ಣಪೀಠ ಮದೀನ ಶಾರದಿ
ಪರ್ವ ಅಶ್ವನೇರಿದನೆಂತು             ||ಅ.ಪ.||

ಭಾಪುರೆ ಅರ್ಜುನ ತಪ್ಪಿಸಿ ಹರಿತ
ವರ್ನ ಕೋಪ ತಿಳಿ ಕುರುಕ್ಷೇತ್ರದಲಿ
ಭಾಪುರೆ ನಿನ್ನನು ಹುಡಕುತ ಬಂದೆನು
ಛೇತಕಿ ಪಾತಕಿ ಕ್ಷತ್ರಿಯರಲ್ಲಿ            ||೧||

ಹಸೇನಿ ಹುಸೇನಿ ಎರಡರ ಮಧ್ಯದಿ
ಬಂದು ಸಿಕ್ಕಿಯೋ ಸಮರದಲಿ
ಸಮ್ಮುಖದಿ ಕೇಶವನ ಸಹಾಯಕೆ
ಬಂದನು ಏಕಕಾಲದಲ್ಲಿ                || ೨ ||

ಹ್ಯಾಂಗ ಮರಣ ತರಬೇಕೆನುತಲಿ ಹರಿ
ಬ್ಯಾಗ ಬ್ರಾಹ್ಮಣನ ರೂಪಾಗಿ
ಆಗ ಬಾಕಿಲಿಂದ ಬಗಿದು ಚಲ್ಲಿದನು
ಆರ್ಜುನ ಶರದಿ                     || ೩ ||

ವಸುಧಿಯೊಳಗ ಹೊಸದಾದ ರಿವಾಯತ
ಕರ್ಣಪರ್ವ ಐಸುರದಿ
ರಸಿಕರೆಲ್ಲರು ಕರ್ಬಲದಾಟಕ
ದಶದಿನ ಹಾಡಿರಿ ಸಂತೋಷದಿ
ಉಸುರಿದ ಮೊಹರಮ್ಮ ಹಬ್ಬದೊಳಗೆ
ಶಿಶುನಾಳಧೀಶನ ಹೆಸರುಗೊಂಡು ಪೇಳರಿ ಮುದದಿ ||೪|

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಬರು ನಿನ್ನ ಮರೆತೇಬಿಟ್ರಲ್ಲೋ ಕನಕ…!
Next post ನಗೆ ಡಂಗುರ – ೫೮

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…