ವೇಮುಲನಿಗೊಂದು ಪ್ರಶ್ನೆ

ಜಗದೊಳಗೆ ಹುಟ್ಟಿಬೆಳೆದರೂ
ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ.

ಇಲ್ಲದ ಮೂಲದಲ್ಲೇ ಹುಟ್ಟಿದರೂ
ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು
ಇದ್ದರಮನೆಯ ಮಾರಿ ತಿಂದವರು ಇಹರು
ಪರಿಪರಿಯ ಪಂಡಿತರು, ಪಾಮರರು,
ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದು
ನಮ್ಮತನದ ಮೂಲ ಮಂತ್ರ. ವಿವಿಧತೆಯಲ್ಲಿ ಏಕತೆ
ರಾಷ್ಟ್ರ ಭಾವೈಕ್ಯತೆ
ಅಂಬೇಡ್ಕರ ನನಸಾದ ಕನಸಲ್ಲವೇ ಸಂವಿಧಾನ

ಓದಿಕೊಂಡಿರಲಿಲ್ಲವೇ ವೇಮುಲ
ನೀನು ಬಾಬಾ ಸಾಹೇಬರ?
ಓದಿದಿದ್ದರೆ ಓಡಿಹೋಗುತ್ತಿರಲಿಲ್ಲ
ಹೀಗೆ ಹೇಡಿಯಾಗಿ.
ಹೆತ್ತ ಹೊಟ್ಟೆಗೆ ಉರಿ‌ಅಟ್ಟಿ
ಬೇಯಿಸಿಕೊಳ್ಳುವುದಾದರೂ
ಏನಿತ್ತು ನಿನಗೆ?
ಹೆಸರಿಗಷ್ಟೇ ನೀನು ಹೋರಾಟಗಾರ ಅಂಬೇಡ್ಕರರಂತೆ ಎನಿಸಿಕೊಂಡೆ.
ಅವರ ನೋವಿನ ಹನಿ ರವವಷ್ಟೇ ಇರಬೇಕು
ನಿನಗೆ ತಗುಲಿದ ನೋವು
ಇರಲಿಲ್ಲ ಬಿಡು ನಿನ್ನಲ್ಲಿ ತಾಳಿಕೊಳ್ಳುವ
ತಾಕತ್ತು, ಅಪಮಾನ ಗೆಲ್ಲುವ ಗತ್ತು
ಇದ್ದರೆ ನೀನು ಮತ್ತೊಬ್ಬ ಬಾಬಾಸಾಹೇಬ ಆಗುತ್ತಿದ್ದೆ.
ಕೂಳನ್ನು ಕಸಿದುಕೊಂಡರಲ್ಲವೇ ಅವರು
ಅಸ್ಪೃಶ್ಯನೆಂದು ಕಪ್ಪು ಪಟ್ಟಿಯ ಸಿದ್ಧ ಮಾಡಿದರೆಂದೆ.
ಇತ್ತಿದ್ದರು ನೆಲೆ ನೀನು ಈ ನೆಲದ ಕುಡಿಯೆಂದು
ನಾಡ ಬೀಜವೆಂದು. ಉಗ್ರನಲ್ಲವೆಂದು
ವ್ಯಗ್ರನಾಗನೆಂದು.
ಹೊಟ್ಟೆಗೆ ಹಿಟ್ಟಿಲ್ಲದ ಹಟ್ಟಿಯಲ್ಲಿ ಹುಟ್ಟಿದೆ ನೀನು
ಹೋರಾಟದ ಬಿಂಬವ ಎದೆಯೊಳಗಿಟ್ಟುಕೊಂಡು
ತಣ್ಣೀರ ಬಟ್ಟೆ ಹೊಟ್ಟೆಗಿಟ್ಟು
ನಿನ್ನ ಮೆದುಳ ಪುಷ್ಟಿಗೊಳಿಸಬೇಕೆಂದರು ನಿನ್ನ
ಒಡಲಲ್ಲಿ ಹೊತ್ತವರು
ಅಡ್ಡಕಸುಬಿಗಳಿಗೆ ಅನುಯಾಯಿಯಾದೆ ನೀನು
ದೇಶ ಭಕ್ತಿಯ ಕುಡಿಗಳು ನೀವು
ದುಷ್ಟಸರ್ಪಗಳಿಗೇಕೆ ಹಾಲೆರೆದಿರಿ?
ಬದುಕಿದ್ದರೆ ಉತ್ತರಿಸುತ್ತಿದ್ದೆಯಾ?
ಅಥವಾ ಸರ್ಪಸಂಕುಲಕ್ಕೆ ಹಾಸುಗಂಬಳಿಯಾಗುತ್ತಿದ್ದೆಯಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಿಲ್ ನ ವಿಧಾನ
Next post ಶಬರಿ – ೧೨

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys