Home / ಕವನ / ಕವಿತೆ / ವೇಮುಲನಿಗೊಂದು ಪ್ರಶ್ನೆ

ವೇಮುಲನಿಗೊಂದು ಪ್ರಶ್ನೆ

ಜಗದೊಳಗೆ ಹುಟ್ಟಿಬೆಳೆದರೂ
ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ.

ಇಲ್ಲದ ಮೂಲದಲ್ಲೇ ಹುಟ್ಟಿದರೂ
ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು
ಇದ್ದರಮನೆಯ ಮಾರಿ ತಿಂದವರು ಇಹರು
ಪರಿಪರಿಯ ಪಂಡಿತರು, ಪಾಮರರು,
ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದು
ನಮ್ಮತನದ ಮೂಲ ಮಂತ್ರ. ವಿವಿಧತೆಯಲ್ಲಿ ಏಕತೆ
ರಾಷ್ಟ್ರ ಭಾವೈಕ್ಯತೆ
ಅಂಬೇಡ್ಕರ ನನಸಾದ ಕನಸಲ್ಲವೇ ಸಂವಿಧಾನ

ಓದಿಕೊಂಡಿರಲಿಲ್ಲವೇ ವೇಮುಲ
ನೀನು ಬಾಬಾ ಸಾಹೇಬರ?
ಓದಿದಿದ್ದರೆ ಓಡಿಹೋಗುತ್ತಿರಲಿಲ್ಲ
ಹೀಗೆ ಹೇಡಿಯಾಗಿ.
ಹೆತ್ತ ಹೊಟ್ಟೆಗೆ ಉರಿ‌ಅಟ್ಟಿ
ಬೇಯಿಸಿಕೊಳ್ಳುವುದಾದರೂ
ಏನಿತ್ತು ನಿನಗೆ?
ಹೆಸರಿಗಷ್ಟೇ ನೀನು ಹೋರಾಟಗಾರ ಅಂಬೇಡ್ಕರರಂತೆ ಎನಿಸಿಕೊಂಡೆ.
ಅವರ ನೋವಿನ ಹನಿ ರವವಷ್ಟೇ ಇರಬೇಕು
ನಿನಗೆ ತಗುಲಿದ ನೋವು
ಇರಲಿಲ್ಲ ಬಿಡು ನಿನ್ನಲ್ಲಿ ತಾಳಿಕೊಳ್ಳುವ
ತಾಕತ್ತು, ಅಪಮಾನ ಗೆಲ್ಲುವ ಗತ್ತು
ಇದ್ದರೆ ನೀನು ಮತ್ತೊಬ್ಬ ಬಾಬಾಸಾಹೇಬ ಆಗುತ್ತಿದ್ದೆ.
ಕೂಳನ್ನು ಕಸಿದುಕೊಂಡರಲ್ಲವೇ ಅವರು
ಅಸ್ಪೃಶ್ಯನೆಂದು ಕಪ್ಪು ಪಟ್ಟಿಯ ಸಿದ್ಧ ಮಾಡಿದರೆಂದೆ.
ಇತ್ತಿದ್ದರು ನೆಲೆ ನೀನು ಈ ನೆಲದ ಕುಡಿಯೆಂದು
ನಾಡ ಬೀಜವೆಂದು. ಉಗ್ರನಲ್ಲವೆಂದು
ವ್ಯಗ್ರನಾಗನೆಂದು.
ಹೊಟ್ಟೆಗೆ ಹಿಟ್ಟಿಲ್ಲದ ಹಟ್ಟಿಯಲ್ಲಿ ಹುಟ್ಟಿದೆ ನೀನು
ಹೋರಾಟದ ಬಿಂಬವ ಎದೆಯೊಳಗಿಟ್ಟುಕೊಂಡು
ತಣ್ಣೀರ ಬಟ್ಟೆ ಹೊಟ್ಟೆಗಿಟ್ಟು
ನಿನ್ನ ಮೆದುಳ ಪುಷ್ಟಿಗೊಳಿಸಬೇಕೆಂದರು ನಿನ್ನ
ಒಡಲಲ್ಲಿ ಹೊತ್ತವರು
ಅಡ್ಡಕಸುಬಿಗಳಿಗೆ ಅನುಯಾಯಿಯಾದೆ ನೀನು
ದೇಶ ಭಕ್ತಿಯ ಕುಡಿಗಳು ನೀವು
ದುಷ್ಟಸರ್ಪಗಳಿಗೇಕೆ ಹಾಲೆರೆದಿರಿ?
ಬದುಕಿದ್ದರೆ ಉತ್ತರಿಸುತ್ತಿದ್ದೆಯಾ?
ಅಥವಾ ಸರ್ಪಸಂಕುಲಕ್ಕೆ ಹಾಸುಗಂಬಳಿಯಾಗುತ್ತಿದ್ದೆಯಾ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...