ಸಂಭ್ರಮದಿ ಹೊತ್ತ ಹೊಟ್ಟೆ
ಬರವಿಲ್ಲ ಕನಸಿಗೆ,
ಹೊಂಬಿಸಿಲ ನೆನಪಲ್ಲೆ ಮುದ್ರೆ
ಇಲ್ಲ, ಅಲ್ಲಿ ಮೇಲುಗೈ ಕನಸ ಸಾಕಾರಕ್ಕಲ್ಲ.
ವಿದ್ವಂಷಕ್ಕೆ-ವಿಧಿಯ ಎಡಗೈಗೆ ಇಲ್ಲ
ಮರುಕ-ಲಲಾಟ ಲಿಖಿತ ಯಾರು
ಬರೆದದ್ದು? ಬ್ರಹ್ಮನೋ ಅಥವಾ ಎಂಡೋ ಸಲ್ಫಾನೋ?
ಎತ್ತಲಾಗದು ಕೈ ಮೇಲಕ್ಕೆ, ವಿರೋಧಕ್ಕೂ ಕೂಡ.
ಉಲಿಯಲಾಗದ ಕಂಠ ಜಿಹ್ವೆ.
ನಿಂತು ಹೋಗಿದೆ ದನಿ
ಅನ್ಯಾಯವಿಂದು ನ್ಯಾಯವಾದಾಗ
ಕಣ್ಣಕೋಟೆಯ ಒಳಗೆ ನೆತ್ತರಿನ ಮಡು
ತಿರುಚಿದ ಮುಂಡ, ಸೊಟ್ಟ ಕೈಕಾಲು
ಮರು ಮಸೆಯುವ ಮರುಕ
ತೆವಳುತ್ತಿವೆ ದೇಹ ಉರಗ ಚಲನೆ
ದಾತನಾರು? ಯಾರೀ ವೈರಿ?
ವೈಕಲ್ಯಕ್ಕೆ ನಾಂದಿ ಯಾರ ಹಾಡು?
ಸಾವಲ್ಲ ಮತ್ತು ಬದುಕು ಅಲ್ಲ
ಮರಣಶಯ್ಯೆ- ಆದರಿವರು ಭೀಷ್ಮರಲ್ಲ
ಬಾಳು ಬತ್ತಿದ ಅಂಗ ಭಂಗಿತರು
ಹೆತ್ತೊಡಲ ಹುರಿದು ಮುಕ್ಕುತಿದೆ
ಹತಾಶೆ ಅನಲು
*****
Related Post
ಸಣ್ಣ ಕತೆ
-
ಕತೆಗಾಗಿ ಜತೆ
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…