ಕಣ್ಣು

ಕುಂತವರಿಗೇನು ತಿಳಿಯುವುದು
ನಿಂತವರ ಶಾಪ
ನಿಂತವರ ನೆರಳಲಿ ಅವರು
ತೂಕಡಿಸುವರು ಪಾಪ!

ನಿಂತು ಮರವಾಗಿ ಬೆಳೆಯುವುವು
ಹೂ ಕಾಯಿ ಹಣ್ಣು
ಕುಳಿತವರು ಆಗ ತೆರೆಯುವರು
ತಮ್ಮ ಒಂದು ಕಣ್ಣು

ಉಂಡವರಿಗೇನು ತಿಳಿಯುವುದು
ಉಣದವರ ಹಸಿವು
ಉಂಡ ಮೇಲೆ ಬರುವುದು ತಾನೆ
ಮೈ ಮೇಲೆ ಮರೆವು

ಉಣದವರು ಅಗೆದು ಮಾಡುವರು
ಫಲ ಬಿಡುವ ಮಣ್ಣು
ಉಂಡವರು ಆಗ ತೆರೆಯುವರು
ತಮ್ಮ ಇನ್ನೊಂದು ಕಣ್ಣು

ಉಳ್ಳವರಿಗೇನು ತಿಳಿಯುವುದು
ಇಲ್ಲದವರ ಕಷ್ಪ
ಉಳ್ಳವರು ಉಳಿಸಿಕೊಳ್ಳಲು
ತೊಡಗಿರುವುದು ಸ್ಪಷ್ಟ

ಇಲ್ಲದವರೆಡೆಯಲ್ಲಿ ಹಾಡುವಳು
ತನ್ನ ಪಾಡಿಗೆ ಹೆಣ್ಣು
ಉಳ್ಳವರು ಆಗ ತೆಗೆಯುವರು
ಜೇಬಿನಿಂದ ಹೊನ್ನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಪು ಕತ್ತಲೆಯಲ್ಲೊಂದು ಹಸಿರು ಮನಸ್ಸು
Next post ಎನಿಮಿ ಎಂಡೋಸಲ್ಫಾನ್

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys