ಸತ್ತವರು ನಮ್ಮಿಂದ ಬಯಸುವುದೇನನ್ನು?

ರಸ್ತೆ ಬದಿಯಲ್ಲಿ ಕುಳಿತಿದ್ದ ಆತ್ಮವೊಂದನ್ನು
ಕೇಳಿದೆ-ಸತ್ತವರು ಉಳಿದವರಿಂದ
ಬಯಸುವುದಾದರೂ ಏನನ್ನು?

ಆತ್ಮ ನುಡಿಯಿತು-ತಿಳಿದವರ ಹಾಗೆ
ಮಾತಾಡದಿರುವುದು ತಿಳಿಯದ
ಸಂಗತಿಗಳ ಬಗ್ಗೆ

ಮುಖ್ಯವಾಗಿ ನಮ್ಮ ಕುರಿತು ನಿಜಕ್ಕೂ
ನಾವು ಉತ್ತರಿಸಲಾರದ ಸಂದೇಹಗಳನ್ನು
ಎತ್ತದಿದ್ದರೆ ಸಾಕು

ನಾನೆಂದೆ-ಇಷ್ಟು ಮಾತ್ರವೆ ?
ನಿಮ್ಮ ಕೈಗೂಡದ ಅನೇಕ ಆಸೆಗಳನ್ನು
ಕೈಗೂಡಿಸುವುದು ಬೇಡವೆ?

ನಿಮ್ಮ ಪ್ರಕ್ಷುಬ್ಧ ಮನಕ್ಕೆ ಶಾಂತಿ
ಪೂಜೆ ತರ್ಪಣ ಚಿರಸ್ಮರಣೆ ಹಾಗೂ
ಸಾಮಾಜಿಕ ಕ್ರಾಂತಿ ?

ಆತ್ಮ ನುಡಿಯಿತು-ದೇವರಾಣೆ
ಅದೆಲ್ಲಾ ಮತ್ತೆ; ಬೇಕಾದ್ದೀಗ
ಬಸ್ಸಿಗೆ ಎಂಟಾಣೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಣ್ಣ ತಪ್ಪುಗಳು
Next post ತಟ್ಟಿಯೊಳಗಿನ ಹಾಡು

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys