ತಟ್ಟಿಯೊಳಗಿನ ಹಾಡು

ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ
ತತ್ವಾರ ತಟ್ಟಿ ತಬ್ಬಲಿಯ ಗೂಡು
ಎಂದು ನಿಟ್ಟುಸಿರೇ ಉಸಿರಾಗಿತ್ತು.

ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ
ಸಮಯವೆಲ್ಲಾ ಹನಿಹನಿಯ ಉದುರಿಸಿ
ನಯನಗಳು ಕೊಳಗಳಾಗಿತ್ತು.

ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು
ಬೆರಣಿ ತಟ್ಟಿಟ್ಟು, ಅಕ್ಕಚ್ಚು ಬಾನಿಗೆ ಹೊಯ್ದು
ಎಮ್ಮೆ ಮೇಯಿಸ ಹೊರಟರೆ
ದಾಂಬು ಬಿಚ್ಚುವ ತ್ವರೆಗೆ
ಕೈಬಳೆಯ ಗಾಜುನಟ್ಟಿತ್ತು
ಮುಂಗೈಯ ಸೆರೆಯುಬ್ಬಿ ರಕ್ತ ಒಸರಿತ್ತು

ಏರುಗುಡ್ಡವ ಹತ್ತಿ
ತರಕ ರಾಶಿಯ ಗುಡಿಸಿ ಕಲ್ಲಿತುಂಬಿಸಿಕೊಂಡು
ಇಳಿಜಾರಿಗೆ ಊರುಗೋಲನು ಹಿಡಿದು
ಹೊತ್ತು ಬರುವಾಗ ಎಡಗಾಲು ಎಡವಿ
ಬಾತುಕೊಂಡಿತ್ತು

ಮನೆಯ ಹೊಲೆಯನು ತೊಳೆದು
ಒಲೆಗೆ ಉರಿಯನು ಹಚ್ಚಿ ಗಂಜಿ ಬೇಯಿಸಿ
ದುಡಿದು [ಕುಡಿದು] ಬರುವ ಗಂಡನಿಗಾಗಿ
ನಾ ಹೈರಾಣು ಹೆಣವಾಗಿ
ಕಾದು ಕೂತಿದ್ದೆ.

ಆಗಸದ ಅಂಚಿನ ಮಂಜಿನ ಪೊರೆ
ಎಂದಿಗೆ ಕಳಚಿ ಬೀಳುವುದು
ಸುಟ್ಟ ಚರ್ಮದ ಕಲೆಯು ಎಂತು
ಮಾಯುವುದು ಕಾಯುತ್ತಿದ್ದೆ,
ಕಾಯುತ್ತಲೇ ಇದ್ದೇನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ತವರು ನಮ್ಮಿಂದ ಬಯಸುವುದೇನನ್ನು?
Next post ವಿಜಯ ವಿಲಾಸ – ಪ್ರಥಮ ತರಂಗ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys