‘ಕೀಚಕ’: ಕೈಲಾಸಂ ಸ್ಮರಣೆ

ವ್ಯಾಸರ ಪರಂಪರಾಗತ ಕಾಮುಕನಲ್ಲ
ಈ ಕೈಲಾಸಂ ವಿರಚಿತ ಕೀಚಕ
ನಾಟ್ಯ ಕೋವಿದನೀತ ಪ್ರೇಮವೆಂಬ ವಿದ್ಯು-
ದ್ದೀಪದಲಿ ಹೊಳೆವನು ಚಕಚಕ

ಯಾವ ಸ್ತ್ರೀ ರತ್ನವನು ಪ್ರೀತಿಸಿದನೋ
ಅವಳಿಂದಲೇ ಆಗಲವಮಾನ
ತನ್ನ ಸಾವನು ತಾನೇ ಬಯಸಿದವನು
ಹಳಿವನೇನು ಬಲಭೀಮನ?

ತೊಡಲು ಬೇಕಾದಷ್ಟು ಸಮಯ ಬೇಡ
ಕಳಚಿಕೊಳ್ಳುವುದಕ್ಕೆ ವೇಷ
ಕಳಚಿದರೆ ಕೀಚಕನಿಲ್ಲ ವಿರಾಟನಗರಿಯಿಲ್ಲ
ಎಲ್ಲವೂ ನಾಮಾವಶೇಷ

ಎಲ್ಲಿ ಸೈರಂಧ್ರಿ? ಎಲ್ಲಿ ಎಲ್ಲರಿಗೂ
ಹುಚ್ಚೆಬ್ಬಿಸಿ ಕುಣಿದ ಉತ್ತರೆ?
ಒಬ್ಬಳು ತುರುಬು ಕಟ್ಟಿದ್ದಾಳೆ ಇನ್ನೊಬ್ಬಳು
ಬದಲಾಯಿಸಿರುವಳು ಸೀರೆ

ನಿಜವೇಷದಲಿ ನಮ್ಮ ನಾಯಕ ನಟ
ದಪ್ಪ ನಡುವಿನ ಮಧ್ಯವಯಸ್ಕ
ಭೀಮಸೇನನೂ ಹಾಕಿರುವನು
ಎಷ್ಟೋ ಮಂದಿಗೆ ಮಸ್ಕ

ಯೋಗವಿದ್ದರೆ ಸಂಧಿಸುವೆವು ನಾವು
ಇನ್ನೊಂದು ಕಡೆ ಇನ್ನೊಂದು ದಿವಸ
ಅಲ್ಲಿಯತನಕ ಎಲ್ಲರಿಗೂ ಇದ್ದದ್ದೆ
ಅವರವರ ಅಜ್ಞಾತವಾಸ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸ್ಸು ಪ್ರಯಾಣದ ಸುಖದುಃಖಗಳು
Next post ಉದ್ಯೋಗ ಖಾತ್ರಿ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys