ಉದ್ಯೋಗ ಖಾತ್ರಿ

ವಿರಳವಾಗಿಹರು ಇಂದು
ಒಪ್ಪತ್ತು ಕೆಲಸಕ್ಕೂ ಆಳು
ಗದ್ದೆಯಲಿ ಕಳೆ ಬೆಳೆದು
ಬೆಳೆಯಂತೂ ಹಾಳು.

ದುಂಬಾಲು ಬಿದ್ದರೂ
ದರಕಾರೇ ಇಲ್ಲ:
ಉದ್ಯೋಗ ಖಾತರಿಯ
ಯೋಜನೆಯೇ ಬೆಲ್ಲ.

ಕೆಲಸ ಮಾಡದಿರೂ
ಬರಿಯ ಹೆಸರ ದಾಖಲೆ ಫೈಲು
ಶುಕ್ರ, ಸೋಮ ಜೊತೆಗೆ
ಮಾದನಿಗೂ ಡೌಲು.

ಜೇಬಿನಲಿ ಜಣಜಣ
ದಿನಕ್ಕೆ ನೂರಿಪ್ಪತ್ತು
ಹೆಂಡದಂಗಡಿ ಒಡೆಯ
ಹಣ ಎಣಿಸಿ ಸುಸ್ತು.

ಸರಕಾರಿ ಸವಲತ್ತು
ಅನುಭವಿಸಿ ದೌಲತ್ತು
ಕ್ರೀಮು, ಪೇಸ್ಟು, ಸೆಂಟು
ಇವನಿಂಗು ಗಮ್ಮತ್ತು.

ಕಾಯಕ ಹೊರೆಯಾಯ್ತು
ಖಾತರಿ ಕರಾಮತ್ತು
ಹೆಂಡದ ಗುಂಡಿಲಿ ಬಿದ್ದ
ಹೆಣ ಎತ್ತೋ….!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಕೀಚಕ’: ಕೈಲಾಸಂ ಸ್ಮರಣೆ
Next post ಮೂರ್ಛೆ ಬಂದಿತ್ತು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…