ಪತ್ರ ವಾಹಿನಿ

ದೂರದ ಗೋವೆಯಿಂದ ವಧು ಬಂದಿತ್ತು
ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು.
ಕಣ್ಗಳೇ ಆಡಿದವು ನೂರಾರು ಮಾತು,
ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು.
ಬಾಂಧವ್ಯಕೆ ಭಾಷೆಯ ಬಂಧನವಿಲ್ಲ
ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ
ವ್ಯವಸ್ಥಿತ ಮದುವೆ ಆಯಿತು ಪ್ರೇಮ ವಿವಾಹ
ನಿಶ್ಚಿತದ ಬಳಿಕ ಉಳಿದಿದ್ದುದು
ನೂರು ದೀರ್ಘ ದಿನಗಳು, ಬರೆದುದು ನೂರೇ ಪತ್ರ!
ಇಬ್ಬರದೂ ಸೇರಿ ಸಾವಿರ ಪುಟಗಳು ಮಾತ್ರ
ಕಥೆ, ಕವನ, ಕನಸು, ಹಗಲುಗನಸು,
ನಾಟಕ, ರೂಪಕ, ಧಾರಾವಾಹಿ…
ಏನೆಲ್ಲ ರೂಪಗಳಲ್ಲಿ ಹರಿಯಿತು ಪತ್ರಧಾರೆ.
ದಿನ ದಿನವೂ ಕಾಯುತ್ತಿದ್ದೆವು ಪತ್ರಕ್ಕಾಗಿ
ರಾಮನಿಗಾಗಿ ಕಾದ ಶಬರಿಯಂತೆ
ಮಳೆಗಾಗಿ ಕಾದ ಚಾತಕ ಪಕ್ಷಿಯಂತೆ.
ಆಫೀಸಿನಲ್ಲಿ ಮನೆಯಲ್ಲಿ ಎಲ್ಲೆಲ್ಲೂ
ಅದೇ ಮಾತು – ಗುಲ್ಲೋ ಗುಲ್ಲು.
ಯಾರೂ ಆಗದ ಲಗ್ನ ಇವರೇ ಆದಂತೆ
ಎಂದವರ ಅಸೂಯಾಗ್ನಿಗೆ ತುಪ್ಪ ಹುಯ್ದಂತೆ
ಪತ್ರ ರೂಪದಿ ಭಾವಗಳು ಹೊರ ಹೊಮ್ಮಿ ಪಸರಿಸಿ
ವಿರಹ ವೇದನೆಯ ತಣಿಸಿತ್ತು
ಮನಕೆ-ಮನವ ತಲುಪಿಸಿತ್ತು
ಸುಂದರ ವೈವಾಹಿಕ ಜೀವನಕೆ
ಭದ್ರ ಬುನಾದಿಯ ಹಾಕಿತ್ತು
ಮಧುರ ಮಿಲನವು ಹೃದಯಗಳ ಬೆಸೆದಿತ್ತು
*****
೨೦-೦೩-೧೯೮೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕಾರಣ ಮತ್ತು ಇನ್ನೊಂದು ಕಾರಣ
Next post ಹಕ್ಕಿ

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…