ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಶಿಶುಗಿಳಿಯಂತ ಹಸುಗೂಸ
ಏನೇ ಕಾರಣ ವಿರಲಿ
ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ
ಅವರ ತೆಕ್ಕೆಗೆ ಸರಿಸಿ
ಹಾಲು, ಹಣ್ಣು ಉಣಿಸಿ
ನುಡಿಗಲಿಸಿ, ನಡೆಗಲಿಸಿ
ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ
ಪ್ರೀತಿ ಕೊಟ್ಟಂತಾಗುವುದೇ?

ನಸುಕಿಗೆ ಎದ್ದ ಪಕ್ಷಿಗಳು
ಇದ್ದಲ್ಲಿಯೇ ಕೂಟ ನಡೆಸಿ
ಗೋಷ್ಠಿ ಕಲರವವ ನಡೆಸುವಂತೆ
ಆಡುವರು ಪುಟ್ಟ ಪುಟ್ಟ ಮಕ್ಕಳು
ಓಣಿಯೊಳಗೆ.

ಅರೆಕ್ಷಣ ಕಣ್ತಪ್ಪಿದರೆ ಸಾಕು
ಆತಂಕಪಡುವ, ಕೂಗಿ ಕರೆವ
ಹುಡುಕಿ ಬರುವ
ಹೆತ್ತವರ ಉಲಿಗೆ ಸ್ಪಂದಿಸಿ
ಹಾರುತ್ತಾ ಹೋಗಿ
ತೆಕ್ಕೆಯನು ಸೇರಿ
ಮುದ್ದುಗರೆಯಲಿ ತೇಲಿ ಮುಳುಗುವ
ಓರಗೆಯ ಮಕ್ಕಳನ್ನು
ಪರಿತ್ಯಕ್ತನಂತೆ
ಒಂಟಿ ಒಂಟಿಯಾಗಿ
ನಿಂತು ನೋಡುವ ಮಗುವ ನೋಡಿ
ಚೂರಿಯಾಡಿಸಿದಂತಾಗುವುದು ಕರುಳಿನಲಿ.

ಅಡವಿಗೆ ತೆರಳಿ
ಕಣ್ಣಿ ಹರಿವುದನೆ ಕಾದು
ಜಗ್ಗಿ ಎಳೆದರೂ… ಅಡ್ಡಗಟ್ಟಿದರೂ… ಬಗ್ಗದೆ
ಅಂಬಾ! ಎಂದು ಮೊರೆಯುತ್ತಾ
ಓಡೋಡಿ ಬಂದು
ಕೊಟ್ಟಿಗೆಯ ಹೊಕ್ಕು
ಕಂದನ ಬಾಯಿಗೆ ಕೆಚ್ಚಲನ್ನೊಡ್ಡಿ ನಿಂತು
ವಾತ್ಸಲ್ಯಪೂರದಲಿ
ಮೈ ಪೂರ ನೆಕ್ಕಿ
ತಣಿವ ತಾಯಿ ಹಸುವ ನೆನಪಿಗೆ ತರುವಳು
ಕಂದನನು ನೋಡಲು ಬರು ಅಮ್ಮ.

ಹಾಯ್! ಹಾಯ್!
ಮೂರು ಕಡೆಗಳಲಿ
ನೋವಿನ ಮಡುಗಳನು ಸೃಜಿಸಿ
ಜೀವ ಹಿಂಡುವ ಸ್ಥಿತಿಯು
ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ರಾತ್ರಿ
Next post ಎಲ್ಲ ಹಸುರೂ ಹಣ್ಣು ಕೊಡದಿದ್ದರೇನಂತೆ?

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…