Home / ಕವನ / ಕವಿತೆ / ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಶಿಶುಗಿಳಿಯಂತ ಹಸುಗೂಸ
ಏನೇ ಕಾರಣ ವಿರಲಿ
ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ
ಅವರ ತೆಕ್ಕೆಗೆ ಸರಿಸಿ
ಹಾಲು, ಹಣ್ಣು ಉಣಿಸಿ
ನುಡಿಗಲಿಸಿ, ನಡೆಗಲಿಸಿ
ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ
ಪ್ರೀತಿ ಕೊಟ್ಟಂತಾಗುವುದೇ?

ನಸುಕಿಗೆ ಎದ್ದ ಪಕ್ಷಿಗಳು
ಇದ್ದಲ್ಲಿಯೇ ಕೂಟ ನಡೆಸಿ
ಗೋಷ್ಠಿ ಕಲರವವ ನಡೆಸುವಂತೆ
ಆಡುವರು ಪುಟ್ಟ ಪುಟ್ಟ ಮಕ್ಕಳು
ಓಣಿಯೊಳಗೆ.

ಅರೆಕ್ಷಣ ಕಣ್ತಪ್ಪಿದರೆ ಸಾಕು
ಆತಂಕಪಡುವ, ಕೂಗಿ ಕರೆವ
ಹುಡುಕಿ ಬರುವ
ಹೆತ್ತವರ ಉಲಿಗೆ ಸ್ಪಂದಿಸಿ
ಹಾರುತ್ತಾ ಹೋಗಿ
ತೆಕ್ಕೆಯನು ಸೇರಿ
ಮುದ್ದುಗರೆಯಲಿ ತೇಲಿ ಮುಳುಗುವ
ಓರಗೆಯ ಮಕ್ಕಳನ್ನು
ಪರಿತ್ಯಕ್ತನಂತೆ
ಒಂಟಿ ಒಂಟಿಯಾಗಿ
ನಿಂತು ನೋಡುವ ಮಗುವ ನೋಡಿ
ಚೂರಿಯಾಡಿಸಿದಂತಾಗುವುದು ಕರುಳಿನಲಿ.

ಅಡವಿಗೆ ತೆರಳಿ
ಕಣ್ಣಿ ಹರಿವುದನೆ ಕಾದು
ಜಗ್ಗಿ ಎಳೆದರೂ… ಅಡ್ಡಗಟ್ಟಿದರೂ… ಬಗ್ಗದೆ
ಅಂಬಾ! ಎಂದು ಮೊರೆಯುತ್ತಾ
ಓಡೋಡಿ ಬಂದು
ಕೊಟ್ಟಿಗೆಯ ಹೊಕ್ಕು
ಕಂದನ ಬಾಯಿಗೆ ಕೆಚ್ಚಲನ್ನೊಡ್ಡಿ ನಿಂತು
ವಾತ್ಸಲ್ಯಪೂರದಲಿ
ಮೈ ಪೂರ ನೆಕ್ಕಿ
ತಣಿವ ತಾಯಿ ಹಸುವ ನೆನಪಿಗೆ ತರುವಳು
ಕಂದನನು ನೋಡಲು ಬರು ಅಮ್ಮ.

ಹಾಯ್! ಹಾಯ್!
ಮೂರು ಕಡೆಗಳಲಿ
ನೋವಿನ ಮಡುಗಳನು ಸೃಜಿಸಿ
ಜೀವ ಹಿಂಡುವ ಸ್ಥಿತಿಯು
ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...