ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಶಿಶುಗಿಳಿಯಂತ ಹಸುಗೂಸ
ಏನೇ ಕಾರಣ ವಿರಲಿ
ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ
ಅವರ ತೆಕ್ಕೆಗೆ ಸರಿಸಿ
ಹಾಲು, ಹಣ್ಣು ಉಣಿಸಿ
ನುಡಿಗಲಿಸಿ, ನಡೆಗಲಿಸಿ
ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ
ಪ್ರೀತಿ ಕೊಟ್ಟಂತಾಗುವುದೇ?

ನಸುಕಿಗೆ ಎದ್ದ ಪಕ್ಷಿಗಳು
ಇದ್ದಲ್ಲಿಯೇ ಕೂಟ ನಡೆಸಿ
ಗೋಷ್ಠಿ ಕಲರವವ ನಡೆಸುವಂತೆ
ಆಡುವರು ಪುಟ್ಟ ಪುಟ್ಟ ಮಕ್ಕಳು
ಓಣಿಯೊಳಗೆ.

ಅರೆಕ್ಷಣ ಕಣ್ತಪ್ಪಿದರೆ ಸಾಕು
ಆತಂಕಪಡುವ, ಕೂಗಿ ಕರೆವ
ಹುಡುಕಿ ಬರುವ
ಹೆತ್ತವರ ಉಲಿಗೆ ಸ್ಪಂದಿಸಿ
ಹಾರುತ್ತಾ ಹೋಗಿ
ತೆಕ್ಕೆಯನು ಸೇರಿ
ಮುದ್ದುಗರೆಯಲಿ ತೇಲಿ ಮುಳುಗುವ
ಓರಗೆಯ ಮಕ್ಕಳನ್ನು
ಪರಿತ್ಯಕ್ತನಂತೆ
ಒಂಟಿ ಒಂಟಿಯಾಗಿ
ನಿಂತು ನೋಡುವ ಮಗುವ ನೋಡಿ
ಚೂರಿಯಾಡಿಸಿದಂತಾಗುವುದು ಕರುಳಿನಲಿ.

ಅಡವಿಗೆ ತೆರಳಿ
ಕಣ್ಣಿ ಹರಿವುದನೆ ಕಾದು
ಜಗ್ಗಿ ಎಳೆದರೂ… ಅಡ್ಡಗಟ್ಟಿದರೂ… ಬಗ್ಗದೆ
ಅಂಬಾ! ಎಂದು ಮೊರೆಯುತ್ತಾ
ಓಡೋಡಿ ಬಂದು
ಕೊಟ್ಟಿಗೆಯ ಹೊಕ್ಕು
ಕಂದನ ಬಾಯಿಗೆ ಕೆಚ್ಚಲನ್ನೊಡ್ಡಿ ನಿಂತು
ವಾತ್ಸಲ್ಯಪೂರದಲಿ
ಮೈ ಪೂರ ನೆಕ್ಕಿ
ತಣಿವ ತಾಯಿ ಹಸುವ ನೆನಪಿಗೆ ತರುವಳು
ಕಂದನನು ನೋಡಲು ಬರು ಅಮ್ಮ.

ಹಾಯ್! ಹಾಯ್!
ಮೂರು ಕಡೆಗಳಲಿ
ನೋವಿನ ಮಡುಗಳನು ಸೃಜಿಸಿ
ಜೀವ ಹಿಂಡುವ ಸ್ಥಿತಿಯು
ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ರಾತ್ರಿ
Next post ಎಲ್ಲ ಹಸುರೂ ಹಣ್ಣು ಕೊಡದಿದ್ದರೇನಂತೆ?

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…