Home / ಕವನ / ಕವಿತೆ / ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಶಿಶುಗಿಳಿಯಂತ ಹಸುಗೂಸ
ಏನೇ ಕಾರಣ ವಿರಲಿ
ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ
ಅವರ ತೆಕ್ಕೆಗೆ ಸರಿಸಿ
ಹಾಲು, ಹಣ್ಣು ಉಣಿಸಿ
ನುಡಿಗಲಿಸಿ, ನಡೆಗಲಿಸಿ
ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ
ಪ್ರೀತಿ ಕೊಟ್ಟಂತಾಗುವುದೇ?

ನಸುಕಿಗೆ ಎದ್ದ ಪಕ್ಷಿಗಳು
ಇದ್ದಲ್ಲಿಯೇ ಕೂಟ ನಡೆಸಿ
ಗೋಷ್ಠಿ ಕಲರವವ ನಡೆಸುವಂತೆ
ಆಡುವರು ಪುಟ್ಟ ಪುಟ್ಟ ಮಕ್ಕಳು
ಓಣಿಯೊಳಗೆ.

ಅರೆಕ್ಷಣ ಕಣ್ತಪ್ಪಿದರೆ ಸಾಕು
ಆತಂಕಪಡುವ, ಕೂಗಿ ಕರೆವ
ಹುಡುಕಿ ಬರುವ
ಹೆತ್ತವರ ಉಲಿಗೆ ಸ್ಪಂದಿಸಿ
ಹಾರುತ್ತಾ ಹೋಗಿ
ತೆಕ್ಕೆಯನು ಸೇರಿ
ಮುದ್ದುಗರೆಯಲಿ ತೇಲಿ ಮುಳುಗುವ
ಓರಗೆಯ ಮಕ್ಕಳನ್ನು
ಪರಿತ್ಯಕ್ತನಂತೆ
ಒಂಟಿ ಒಂಟಿಯಾಗಿ
ನಿಂತು ನೋಡುವ ಮಗುವ ನೋಡಿ
ಚೂರಿಯಾಡಿಸಿದಂತಾಗುವುದು ಕರುಳಿನಲಿ.

ಅಡವಿಗೆ ತೆರಳಿ
ಕಣ್ಣಿ ಹರಿವುದನೆ ಕಾದು
ಜಗ್ಗಿ ಎಳೆದರೂ… ಅಡ್ಡಗಟ್ಟಿದರೂ… ಬಗ್ಗದೆ
ಅಂಬಾ! ಎಂದು ಮೊರೆಯುತ್ತಾ
ಓಡೋಡಿ ಬಂದು
ಕೊಟ್ಟಿಗೆಯ ಹೊಕ್ಕು
ಕಂದನ ಬಾಯಿಗೆ ಕೆಚ್ಚಲನ್ನೊಡ್ಡಿ ನಿಂತು
ವಾತ್ಸಲ್ಯಪೂರದಲಿ
ಮೈ ಪೂರ ನೆಕ್ಕಿ
ತಣಿವ ತಾಯಿ ಹಸುವ ನೆನಪಿಗೆ ತರುವಳು
ಕಂದನನು ನೋಡಲು ಬರು ಅಮ್ಮ.

ಹಾಯ್! ಹಾಯ್!
ಮೂರು ಕಡೆಗಳಲಿ
ನೋವಿನ ಮಡುಗಳನು ಸೃಜಿಸಿ
ಜೀವ ಹಿಂಡುವ ಸ್ಥಿತಿಯು
ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...