ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್ ಬಹದ್ದೂರ್ ಶಾಸ್ತ್ರಿ

ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು… ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು ಯುದ್ಧ ಮಾಡಲು ಶುರುವಾಯಿತು….!

ಅನಿವಾರ್‍ಯವಾಗಿ ಯುದ್ಧ ಮಾಡಲು ಭಾರತ ಮುಂದಾಯಿತು. ಹೊಸದಾಗಿ ಅಧಿಕಾರ ಸ್ವೀಕರಿಸಿದ ಶಾಸ್ತ್ರೀಜಿಯವರು ಇಡೀ ಸೈನ್ಯವೇನು ಇಡೀ ದೇಶವನ್ನೇ ಹುರಿದುಂಬಿಸಿದರು.

ಇದೇ ಸಮಯದಲ್ಲಿ- ಸುದ್ದಿ ಮಾಧ್ಯಮದವರು ಗಣ್ಯರು ಪ್ರಮುಖರು ಎಲ್ಲರೂ ಪ್ರಧಾನಿಯವರನ್ನು ಮುತ್ತಿ “ನಿಮ್ಮ ಮುಂದಿನ ಸವಾಲ್ ಯಾವುದು?” ಎಂದು ಎಲ್ಲರೂ ಕೇಳಿದರು.

ಲಾಲ್‌ಬಹದ್ದೂರ್ ಶಾಸ್ತ್ರಿಯವರು ಕ್ಷಣ ಹೊತ್ತು ಗಂಭೀರವಾಗಿ ಚಿಂತಿಸಿದರು. ಅವರೇ ಮಾತಿಗೆ ತೊಡಗಿದರು…

“ನನ್ನ ಮುಂದಿರುವ ಸವಾಲು ಎಂದರೆ… ನಮ್ಮ ದೇಶವನ್ನು ಬಲಿಷ್ಠವನ್ನಾಗಿಸುವುದು” ಎಂದರು.

ಅಲ್ಲಿದ್ದವರೆಲ್ಲ ಅವಕ್ಕಾಗಿ ಕುಳಿತರು.

ತುಸು ಹೊತ್ತು ಗಂಭೀರತೆಯಿಂದ ಚಿಂತಿಸಿದ ಸುದ್ದಿ ಮಾಧ್ಯಮದವರೆಲ್ಲ “ಸಾರ್, ಒಂದೋ ಎರಡೋ ಮೂರೋ ಸಮಸ್ಯೆಗಳಿದ್ದರೆ ನೀವು ಎದುರಿಸುವಿರೆಂದು ಭಾವಿಸಬಹುದಾಗಿತ್ತು! ಆದರೆ…. ಬಲಿಷ್ಠ ಶತ್ರು ರಾಷ್ಟ್ರ ಚೀನಾ ಆಕ್ರಮಣದ ಜೊತೆಗೆ ದೇಶ, ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆಯಲ್ಲಾ? ಹೇಗೆ ಮುನ್ನಡೆಸುವಿರಿ?” ಎಂದು ಮತ್ತೊಂದು ಪ್ರಶ್ನೆ ಎಸೆದರು.

ಆಗ ಯೋಚಿಸುವ ಮೌನ ವಹಿಸುವ ಗೋಜಿಗೇ ಹೋಗದೆ ಥಟ್ಟನೆ- “ನಾನು ನನ್ನ ಜನರನ್ನು ನಂಬಿದ್ದೇನೆ. ಅವರ ಬಲವನ್ನು ಅರಿತಿದ್ದೇನೆ. ಜೈಜವಾನ್, ಜೈಕಿಸಾನ್ ಎಂದು ರೈತಣ್ಣವನ್ನು ಬಡಿದೆಬ್ಬಿಸುತ್ತೇನೆ. ಇಡೀ ದೇಶವಾಸಿಯು ಪ್ರತಿ ಸೋಮವಾರ ರಾತ್ರಿ ಒಂದು ಊಟ ದೇಶಕ್ಕಾಗಿ ಬಿಡಲು ವಿನಂತಿಸುತ್ತೇನೆ. ಭಾರತೀಯ ಸೇನೆಯಲ್ಲಿ ಒಂದು ರಾಷ್ಟ್ರೀಯತೆ ಐಕ್ಯಮಂತ್ರ ರಾಷ್ಟ್ರ ಪ್ರೇಮ ದೇಶಭಕ್ತಿ ಮೆರೆಯಲು ಕರೆ ಕೊಡುವೆ… ದೇಶದ ಅತ್ಯುನ್ನತ ಸೇವಕನಾಗಿ ನಾನೂ ರಾತ್ರಿ ಊಟ ತ್ಯಜಿಸಿರುವೆ. ಅದನ್ನು ಅಭ್ಯಾಸ ಮಾಡಿ ಎಲ್ಲರಿಗೆ ವಿನಂತಿಸಿರುವೆ. ನನ್ನ ಜನ ನನ್ನ ಮಾತುಗಳನ್ನು ದೇಶವನ್ನು ಮರೆಯಲಾಗದು… ವಿಜಯಪಥ, ಜಯಪಥ, ಪ್ರಗತಿಪಥ ನಮ್ಮದು. ಬರೀ ಒಂದು ಚೀನಾವಲ್ಲ ಅಂಥಾ ನೂರು ಚೀನಾ ದೇಶಗಳು ದಾಳಿ ಮಾಡಿದರೂ ನಮ್ಮ ಸೈನ್ಯ ಬಲವನ್ನು ಎದುರಿಸಲಾರವು” ಎಂದು ಶಾಸ್ತ್ರೀಜಿಯವರು ಅಂದರು.

ಅಲ್ಲಿದ್ದವರೆಲ್ಲ ದಂಗುಬಡಿದು ಹೋದರು. “ಸಾರ್….. ನಿಮ್ಮ ಮಾತು ಕೃತಿ ಆದರ್ಶ ಸರಳ ಸಜ್ಜನಿಕೆ ಖಂಡಿತ ದೇಶವನ್ನು ಮುನ್ನಡೆಸುವವು.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ನಿಮ್ಮ ಜೊತೆಗೆ ನಾವೊಂದೇ ಇಲ್ಲ! ಇಡೀ ದೇಶದ ಜನತೆಯೇ ಇದೆ…” ಎಂದು ಹೃದಯ ತುಂಬಿ ಅಂದರಲ್ಲದೆ, ನಮಸ್ಕರಿಸಿ, ಹರ್ಷದಿ ಹೊರಟುಹೋದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊರವಂಜೀ ಹಾಡು
Next post ಚದುರೆ ನೀನಿರದ ಆಟ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys