ಚದುರೆ ನೀನಿರದ ಆಟ

ಚದುರೆ ನೀನಿರದಾಟ
ಅದೆಂತು ಚದುರಂಗದಾಟ
ನೀ ಸದರ ಮಾಡಿ ಮದಿರಂಗಿ ಕೈಗಳಲಿ
ಕುದುರೆ ನಡೆಸುವಾಟ
ಅದುವ ಚದುರಂಗದಾಟ

ಬಟ್ಟ ಕಂಗಳ ಅಂಗಳದಾಟ
ಕೂದಲ ಸುಳಿಯಲಿ ಬೆರಳುಗಳಾಟ
ಅಂಗಾಂಗವೆಲ್ಲಾ ಕಚಗುಳಿಯಾಟ
ರಕ್ಷಣಾಭಂಗ ತಕ್ಷಣದಾಟ

ತದೇಕ ಚಿತ್ತ ನೋಡುವಾಟ
ಚಿತ್ತವೃತ್ತಿಯ ಮರೆಸುವಾಟ
ಜುಮ್ಮನೆ ದಾಳಿ ಮಾಡುವಾಟ
ಅಮ್ಮಯ್ಯ ಎಂದು ಸೋಲೊಪ್ಪುವಾಟ
ಸೋತರು ಗೆದ್ದರು ನಗು ತಪ್ಪದಾಟ

ಆಟದ ಹೊತ್ತು ಕಳೆಯುವಾಟ
ಕೋಟೆ ಕೊತ್ತಲ ಹಿಡಿಯುವಾಟ
ಇಟ್ಟಡಿ ಹಿಂದಕ್ಕೆ ತೆಗೆಯದಾಟ
ಅರೆ! ಆಟವೊಂದು ನೆಪದಾಟ

ಮಾಗಿಯ ಚಳಿಗೆ ನಿಟ್ಟುಸಿರಾಟ
ಸಾಗಿದ ದಿನಗಳ ನೆನಪಿಸುವಾಟ
ಆಗಾಗ ದೇವರ ಕೋರುವ ಆಟ
ಸ್ವರ್‍ಗವ ಭೂಮಿಗೆ ಕರೆತರುವಾಟ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಾಲ್ ಬಹದ್ದೂರ್ ಶಾಸ್ತ್ರಿ
Next post ಕಾಡಿನ ದಾವೇದಾರ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…