ಕಾಡಿನ ದಾವೇದಾರ

ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು
ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ
ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು
ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು.

ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ
ಜಿನುಗುವ ನೀರ ಒರತೆಯಾಗಿ
ಹುಟ್ಟು ಸಾವುಗಳ ಜಾಡು ಹಿಡಿದವನು
ಕಾಡಿನ ಏಕಾಂತದಲ್ಲಿ ಹಕ್ಕಿಗಳ ಹುಡುಕಾಡಿದವನು.

ಬೊಚ್ಚು ಬಾಯಿಯಲ್ಲಿ ಹಲ್ಲುಗಳು ಹುಟ್ಟಲು
ಗಿಡಮೂಲಿಕೆಗಳ ಶೋಧಿಸಿದವನು.
ಆಗಸದಲ್ಲಿ ಫೈಯಿಂಗ್ ಸಾಸರ್ಸ್ ಹಾರಿಸಿ,
ಮಾಯಾ ಲೋಕದಲ್ಲಿ ಚಂದ್ರನ ಚೂರು ಕಂಡವನು.

ಕಾಡಿನ ಸಂತನ ಪಯಣ ಹುಲಿಯೂರಿನಿಂದ
ಆರಂಭ, ಜುಗಾರಿ ಕ್ರಾಸ್‌ನಲ್ಲಿ ನಿಂತು ನಿರೀಕ್ಷಣೆ,
ಚಿದಂಬರ ರಹಸ್ಯ ಭೇದಿಸುವ ತವಕದಲ್ಲಿ
ಅಬಚೂರಿನ ಪೋಸ್ಟಾಫೀಸಿನ ನಿರ್ಣಾಯಕ ಘಟ್ಟದಲ್ಲಿ.

ಮನುಷ್ಯ ನಿರ್ಮಿತ ನಾಗರೀಕ ಗೋಡೆಗಳಾಚೆ
ತಬರನಿಗಾಗಿ ತುಡಿದು ಚಿಟ್ಟೆ ಏರೋಪ್ಲೇನ್ ಹತ್ತಿದವನು.
ಕಾರ್ವಾಲೋದಿಂದ ಕಿರಗೂರಿನ ಗಯ್ಯಾಳಿಯ ಬಳಿಗೆ
ಭಾವಲೋಕದಲ್ಲಿ ಬ್ರಹ್ಮಾಂಡ ಮೇಳ.

ದೇವರು ದರ್ಮಗಳಿಲ್ಲದ ಲೋಕದಲಿ ವಿಹಾರ,
ಚೀಂಕ್ರನಿಂದ ಅರಿಸ್ಟಾಟಲ್‌ನವರೆಗೆ
ಮನುಷ್ಯರ ಮಿಸ್ಸಿಂಗ್ ಲಿಂಕ್ಸ್ ಜೋಡಿಸುತ್ತ
ವಿಜ್ಞಾನಿ, ಋಷಿಗಳ ಮುಖಾಮುಖಿ ಮಾಡುತ್ತ
ಬದುಕು ಸವೆಸಿದ ನೀನು ಪ್ರವಾದಿಯಲ್ಲ,
ಸಂತನಲ್ಲದ ಸಂತ ಕಾಡಿನ ದಾವೇದಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚದುರೆ ನೀನಿರದ ಆಟ
Next post ನಾನು ಮೀನಾಗಿದ್ದಿದ್ರೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…