Home / ಕವನ / ಕವಿತೆ / ಕಾಡಿನ ದಾವೇದಾರ

ಕಾಡಿನ ದಾವೇದಾರ

ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು
ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ
ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು
ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು.

ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ
ಜಿನುಗುವ ನೀರ ಒರತೆಯಾಗಿ
ಹುಟ್ಟು ಸಾವುಗಳ ಜಾಡು ಹಿಡಿದವನು
ಕಾಡಿನ ಏಕಾಂತದಲ್ಲಿ ಹಕ್ಕಿಗಳ ಹುಡುಕಾಡಿದವನು.

ಬೊಚ್ಚು ಬಾಯಿಯಲ್ಲಿ ಹಲ್ಲುಗಳು ಹುಟ್ಟಲು
ಗಿಡಮೂಲಿಕೆಗಳ ಶೋಧಿಸಿದವನು.
ಆಗಸದಲ್ಲಿ ಫೈಯಿಂಗ್ ಸಾಸರ್ಸ್ ಹಾರಿಸಿ,
ಮಾಯಾ ಲೋಕದಲ್ಲಿ ಚಂದ್ರನ ಚೂರು ಕಂಡವನು.

ಕಾಡಿನ ಸಂತನ ಪಯಣ ಹುಲಿಯೂರಿನಿಂದ
ಆರಂಭ, ಜುಗಾರಿ ಕ್ರಾಸ್‌ನಲ್ಲಿ ನಿಂತು ನಿರೀಕ್ಷಣೆ,
ಚಿದಂಬರ ರಹಸ್ಯ ಭೇದಿಸುವ ತವಕದಲ್ಲಿ
ಅಬಚೂರಿನ ಪೋಸ್ಟಾಫೀಸಿನ ನಿರ್ಣಾಯಕ ಘಟ್ಟದಲ್ಲಿ.

ಮನುಷ್ಯ ನಿರ್ಮಿತ ನಾಗರೀಕ ಗೋಡೆಗಳಾಚೆ
ತಬರನಿಗಾಗಿ ತುಡಿದು ಚಿಟ್ಟೆ ಏರೋಪ್ಲೇನ್ ಹತ್ತಿದವನು.
ಕಾರ್ವಾಲೋದಿಂದ ಕಿರಗೂರಿನ ಗಯ್ಯಾಳಿಯ ಬಳಿಗೆ
ಭಾವಲೋಕದಲ್ಲಿ ಬ್ರಹ್ಮಾಂಡ ಮೇಳ.

ದೇವರು ದರ್ಮಗಳಿಲ್ಲದ ಲೋಕದಲಿ ವಿಹಾರ,
ಚೀಂಕ್ರನಿಂದ ಅರಿಸ್ಟಾಟಲ್‌ನವರೆಗೆ
ಮನುಷ್ಯರ ಮಿಸ್ಸಿಂಗ್ ಲಿಂಕ್ಸ್ ಜೋಡಿಸುತ್ತ
ವಿಜ್ಞಾನಿ, ಋಷಿಗಳ ಮುಖಾಮುಖಿ ಮಾಡುತ್ತ
ಬದುಕು ಸವೆಸಿದ ನೀನು ಪ್ರವಾದಿಯಲ್ಲ,
ಸಂತನಲ್ಲದ ಸಂತ ಕಾಡಿನ ದಾವೇದಾರ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...