Home / ಕವನ / ಕವಿತೆ / ಬೆಳಕನೆರಚು!

ಬೆಳಕನೆರಚು!

ಬೆಳಕನೆರಚು, ಚಳಕನೆರಳು,
ಯುಗ-ಯುಗಾಂತ ತೊಳಗಲಿ!
ಇಳೆಯ ಕವಿದ ಕಳ್ತಲೆಯನು
ಕಳೆದೊಗೆ ದೀಪಾವಳಿ!


ಬರಿಯ ಒಂದೆ ಇರುಳು ಬಂದೆ
ಮುಗಿಯಿತೇನು ಕಾರ್‍ಯ?
ವರುಷದಿ ನೂರಾರು ತಮಸಿ-
ನಿರುಳಿವೆ ಅನಿವಾರ್ಯ!
ಅಂದಂದಿನ ಕತ್ತಲಿಂದೆ
ಮಂದಿಯ ಮನವಿಡಿದು ಮುಂದೆ
ಕರೆದೊಯ್ಯುವರಾರ್ ಅನಂದೆ-
ಮರೆದು ಸರಿಯೆ ನೀನು ?
ಮಿರುಗಿ ಮಾಯವಾಗುತಿರುವ
ಮಿಂಚಿಗೆ ಬೆಲೆಯೇನು?


ನಿನಗಾಗಿಯೆ ಹೊಲ-ನೆಲಗಳು
ಬೆಳೆಯೊಳೇರಿ ನಿಂತಿವೆ;
ನಿನಗಾಗಿಯೆ ಹೊಳೆ-ಕೊಳಗಳು
ತಿಳಿಯ ನೀರನಾಂತಿವೆ.
ಬಿಳಿಯ ಹೊನ್ನ ಸೇವಂತಿಗೆ
ಹೊಳೆದು ನಿನ್ನ ಮೈಕಾಂತಿಗೆ
ಸವಿಗಾರರ ಬಗೆಯ ಸೆಳೆವ
ತವಕದಿ ಬಾಯ್‌ದೆರೆದಿವೆ-
ಬುವಿಯ ಜೀವಕುಲವೆ ದೇವ-
ದಿನವ ನಿನ್ನ ಕರೆದಿವೆ!


ಬರುವುದು ದೀವಳಿಗೆಯೆಂದು
ತಿರೆಯೇ ಕುಣಿ-ಕುಣಿಯಿತು!
ತರುವುದು ಹಿರಿಬೆಳಕನೆಂದು
ಜನವು ದಿನವು ನೆನೆಯಿತು!
ಸಂತೆಗೆ ಹಸರಿಗನು ಬಂದು
ಸಂತೆ ಹರಡಿ ದಿನವದೊಂದು
ಕಂತೆ ಹೇರಿ ಮತ್ತೆ ದಾರಿ
ಹಿಡಿದೆಲ್ಲಿಗೊ ನಡೆವನು;
ಅಂತೆ ನಿನ್ನ ಆಗಮವಿರೆ
ಹಿರಿಮೆ ನಿನ್ನದೇನು?


ಕುರುಡಗೆರಡು ನಿಮಿಷ ಕಣ್ಣ
ನೋಟಗಳನೆ ನೀಡಿ,
ಧರೆಯ ಚನ್ನ ಸೊಬಗಿನನ್ನ-
ವೂಡುವಂತೆ ಮಾಡಿ,
ಮರಳಿ ಕಣ್ಣ ಕಳೆದೊಡವಗೆ
ಇರುವುದೇನು ಬರಿ ತಗುಬಗೆ!
ವರುಷಕೊಂದು ಬಾರಿ ಬಂದು
ಬೆಳಕಕರೆವೆ ನೀನು….
ಉಳಿದ ಇರುಳ ತಮಸಿನುರುಳ
ಕಳೆಯೆ ದಾರಿಯೇನು?
* * *
ಬೆಳಕನೆರಚು, ಬೆಳಕನೆರಚು,
ಯುಗ-ಯುಗವನು ಬೆಳಗಿಸು,
ಇಳೆಯ ಕವಿವ ಕಳ್ತಲೆಗಳ
ಕಳೆದೇಗಲು ತೊಳಗಿಸು !
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...