Home / ಕವನ / ಕವಿತೆ / ಆರೋಹ

ಆರೋಹ

೧ ಮೌನ

ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ
ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ
ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ
ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ
ಫೂಃ! ಪಿಸುಪಿಸು ಮಾತೋ ಮಾತು, ಇರುಳಿರುಳಿನ ಭುಂಭೋದ್ಗಾರಾ
ಕರೆ, ಕರೆನರೆ ಕಿರಿಕಿರಿ ಲೋಕಾ
ಬಿಡು ಶೋಕಾ, ಉಳಿದೊದ್ದಾಟಾ
ಚಿರಮೌನದಿ ಹೊಗು ಹೊಗು ಏಗೂ ಮೇಗೂ.
ವಿಶಾಲಾ, ಅಚಲಾ, ಅಕ್ಷರಾ, ಅರೂಪಾ, ಅದ್ಭುತಭೂತಾ
ಸ್ವರ್ಗೋಪರಿ ಸ್ವರ್ಗಾ, ಅಗಲಾ ಬ್ರಹ್ಮಾಂಡಕು ಮಿಗಿಲಾ,
ಶುದ್ಧಾ, ವಿಶುದ್ಧಾ, ಸತ್ತ್ವಾ ಮಹಿಮಾಮಗ್ನ
ಸ್ವಾನ್ವೀಕ್ಷಕ ಸೋಜ್ವಲ ಸ್ತಿಮಿತಾ
ಅಸೀಮಾ, ನಿರೋದ್ಗಾರಾ, ಸಾಕ್ಷಾತ್ ಸಂವಾದನಶೀಲಾ
ಮಾಡೈ ವಿಚಾರಾತೀತಜ್ಞಾನಾ, ಪಡೆ ಅಕ್ಷೋಭ್ಯಗಭೀರಾಮೋದಾ
ಅವಿಕಾರಿತ ಜ್ಯೋತಿಯೊಳಿರು ವಿಶ್ರಾಂತಾ, ಮೂಕಾ,
ನಿಶ್ಯಬ್ದಿತಸಾಕ್ಷಾತ್ಕಾರಾ
ನಿನ್ನನ್ನೇ ಮೀರೈ ಆತ್ಮಾ, ಪ್ರಕೃತ್ಯೋತ್ತರಪುರುಷಾ
ಓ ಸಾಕ್ಷೀ, ಕಳೆದುಳಿ ಉಳಿ ಕಂಡದ್ದೆಲ್ಲಾ
ಕಾಣೈ, ಕೇವಲಾ, ಬ್ರಹ್ಮಾ, ಶಾಶ್ವತಾ
ಸನಾತನ ಮಾತ್ರಾ, ಶಾಂತಾ, ಮೌನೋನ್ಮೌನ
ಓ ಲೋಕೋತ್ತಮ ನಾಮಾತೀತಾ, ಏಕಾ
ಭೌಮಾಮೃತ ಆತ್ಮಾ.

೨ ಮೌನಾತೀತ

ಉನ್ಮಜ್ಜೋನ್ಮಜ್ಜ, ಹೇ ಮೌನನಿಮಗ್ನಾ,
ಅವರ್ಣ್ಯದ್ರವ್ಯಸ್ವಭಾವಾ,
ಪ್ರಭಾವಾ, ವಿಭಾವಾ, ಸಹಿತಾ
ರೋಹಿಸು ಭೋ ಅಮೃತಾತ್ಮಾ
ಕಾಲಕೆ ಕೊಡು ಚಿರತರ ಅರ್ಥಾ
ಕಾಲಾತೀತಾಲಿಂಗಿತಾ ಭವ ಮಾಧುರ್ಯೊದರ ಪ್ರವಿಷ್ಟಾ
ಶಾಶ್ವತಿಯಲಿ ಬಾಳೈ ಜಾಗೃತಾ, ಅನಂತಪ್ರೇಮೋದ್ಭೂತಾ
ಪೂರ್ಣಾಪೂರ್ಣಾಪೂರ್ಣಾ ಸ್ವಪ್ರಾಪ್ತಾ ಆಪ್ತಾ ಪೂರ್ತಾ
ಪ್ರಿಯಹೃದಯೇ ಸಂಪ್ಲುತಸ್ವರಸಾ
ಇದು ಯಾವುದೊ ಬ್ರಹ್ಮಾತೀತಾ, ಬ್ರಹ್ಮಾಂತರ್ಜಾತಾ, ತ್ರಾತಾ
ಸ್ವರೂಪಾ, ರೂಪಾರೂಪಾರೂಪಾ, ಬಹುರೂಪಾ, ಭೂಪಾ, ಜೇತಾ
ಲೀಲಾವಿಗ್ರಹಾ, ಆಹಾ ಚಿರಸಂತತಿ ಸಂತತಜನಿತಾ
ಪ್ರಕೃತಾ ವಿಕೃತಾ ಕೃತಕಾ ಕೃತಕೃತ್ಯಾ ಧನ್ಯಾಮೂರ್ತಾ
ಸುಂದರಾ, ಸುಬಂಧಾ, ಸುಗಮಾ, ನಿಗಮಾತೀತಾ
ಹೃದಯೇ ಹೃದಯಾಂತಹೃದಯೇ ಲಗ್ನಃ ಪರಮಾತ್ಮೇಮಗ್ನಃ
ಸಾಕ್ಷಿನ್, ದೃಷ್ಟಂ ತ್ಯಜ, ದೃಷ್ಟಂ ತ್ಯಜ
ಭಜ ಸ್ವಾಂತಂ ಏಕಾಂತಂ ಏಕಂ ಬ್ರಹ್ಮಚಿರಂತನಂ
ಆಃ ಲೋಕಾತೀತಾ, ಅನಾಮಾ ಏಕೈಕಾ
ಓ ಮಹದ್ಭೂತಾ, ಅಮೃತಾ!
ಭವಮೌನೀ, ಶಾಂತೋನಂತನಂತಃ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...