Home / ಕವನ / ಕವಿತೆ / ಯುದ್ಧ ಮತ್ತು ಶಾಂತಿ

ಯುದ್ಧ ಮತ್ತು ಶಾಂತಿ

ಸಾಕು ಸಮರದ ದಿನಗಳು
ಕರಾಳ ಸಾವು ನೋವುಗಳು
ಯುಗಯುಗಗಳ ಜೀವರಾಶಿಯನು
ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ
ಸಮರವನು ಸಾರುವದು ಬೇಡ.

ನೋಡುತ್ತಿದೆ ಜಗತ್ತು
ತತ್ತರಿಸಿ ಕಣ್ಣು ಬಿಟ್ಟು
ಯುದ್ಧಭೀತಿಯಿಂದ.
ನೋವಿನಿಂದ ಬಿಕ್ಕಳಿಸಿ
ಅಳುತಿವೆ ನಕ್ಷತ್ರಗಳು.
ಆಕಾಶವೆಲ್ಲ ಥರಗುಟ್ಟಿ
ನಡಗುತ್ತಿದೆ.
ಭೂಮಿ ಬಾಯ್ತೆರೆದು ಬೇಡುತ್ತಿದೆ.
“ನಮಗೆ ಯುದ್ಧ ಬೇಡ,
ಶಾಂತಿ ಬೇಕು, ಶಾಂತಿ” ಎಂದು.
ನೆಲ, ಜಲವನ್ನು ವಿಷವಾಗಿಸುವ,
ಮನುಕುಲವನು ನಾಶ ಮಾಡುವ
ಬರದ ಭೀಕರ ವಿಷಬೀಜ ಬಿತ್ತುವ,
ವಿಶ್ವವನ್ನೇ ಸ್ಮಶಾನವನ್ನಾಗಿಸುವ,
ಸಮರಗಳು ನಮಗೆ ಬೇಡ
ಹಿರೋಷಿಮಾ ನಾಗಾಸಾಕಿಗಳ
ಕತ್ತಲೆಯ ಕರಿ ನೆರಳುಗಳು
ಕೂಗಿ ಕೂಗಿ ಹೇಳುತ್ತಿವೆ.
“ಯುದ್ಧ ಬೇಡ – ಶಾಂತಿ ಬೇಕು” ಎಂದು

ಸಾಮ್ರಾಜ್ಯಶಾಹಿಗಳ ಪ್ರತಿಷ್ಠೆಗೆ
ವಿಶ್ವವನ್ನೇ ಗೋರಿ ಮಾಡುವುದು ಬೇಡ
ನೀಲಿ ಕಣ್ಣಿನ ಗಿಡುಗನ ನೀತಿಯಲಿ
ಮಾನವೀಯತೆಯ ಹುಡುಕುವದು ಬೇಡ
ದುಡ್ಡಿನ ಧಣಿಗಳ ಡಾಲರ್‌ಗಳಿಂದ
ಕೈಗಳನ್ನು ಕಟ್ಟಿಸಿಕೊಂಡು
ಮಾನವೀಯತೆಯ ಮಾರಿಕೊಂಡು
ದುರಂತವನ್ನಪ್ಪುವದು ಬೇಡ.
ಸದ್ದಿಲ್ಲದೇ ಮನುಕುಲವ ನಾಶಮಾಡುವ
ಯುದ್ಧ ಢಾಕಿಣಿಗೆ ಶರಣಾಗುವದು ಬೇಡ.
ತೈಲ ಸಮುದ್ರದಲ್ಲಿ ಸಿಕ್ಕ ಹಕ್ಕಿಗಳು
ಕಂಗೆಟ್ಟು ಕೇಳುತ್ತಿವೆ –
ನೋವಿನಿಂದ ಬೇಡುತ್ತಿವೆ –
“ನಮಗೆ ಯುದ್ಧ ಬೇಡ
ಶಾಂತಿ ಬೇಕು – ಶುದ್ಧ ಪರಿಸರಬೇಕು” ಎಂದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...