Home / ಕವನ / ಕವಿತೆ / ಯುದ್ಧ ಮತ್ತು ಶಾಂತಿ

ಯುದ್ಧ ಮತ್ತು ಶಾಂತಿ

ಸಾಕು ಸಮರದ ದಿನಗಳು
ಕರಾಳ ಸಾವು ನೋವುಗಳು
ಯುಗಯುಗಗಳ ಜೀವರಾಶಿಯನು
ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ
ಸಮರವನು ಸಾರುವದು ಬೇಡ.

ನೋಡುತ್ತಿದೆ ಜಗತ್ತು
ತತ್ತರಿಸಿ ಕಣ್ಣು ಬಿಟ್ಟು
ಯುದ್ಧಭೀತಿಯಿಂದ.
ನೋವಿನಿಂದ ಬಿಕ್ಕಳಿಸಿ
ಅಳುತಿವೆ ನಕ್ಷತ್ರಗಳು.
ಆಕಾಶವೆಲ್ಲ ಥರಗುಟ್ಟಿ
ನಡಗುತ್ತಿದೆ.
ಭೂಮಿ ಬಾಯ್ತೆರೆದು ಬೇಡುತ್ತಿದೆ.
“ನಮಗೆ ಯುದ್ಧ ಬೇಡ,
ಶಾಂತಿ ಬೇಕು, ಶಾಂತಿ” ಎಂದು.
ನೆಲ, ಜಲವನ್ನು ವಿಷವಾಗಿಸುವ,
ಮನುಕುಲವನು ನಾಶ ಮಾಡುವ
ಬರದ ಭೀಕರ ವಿಷಬೀಜ ಬಿತ್ತುವ,
ವಿಶ್ವವನ್ನೇ ಸ್ಮಶಾನವನ್ನಾಗಿಸುವ,
ಸಮರಗಳು ನಮಗೆ ಬೇಡ
ಹಿರೋಷಿಮಾ ನಾಗಾಸಾಕಿಗಳ
ಕತ್ತಲೆಯ ಕರಿ ನೆರಳುಗಳು
ಕೂಗಿ ಕೂಗಿ ಹೇಳುತ್ತಿವೆ.
“ಯುದ್ಧ ಬೇಡ – ಶಾಂತಿ ಬೇಕು” ಎಂದು

ಸಾಮ್ರಾಜ್ಯಶಾಹಿಗಳ ಪ್ರತಿಷ್ಠೆಗೆ
ವಿಶ್ವವನ್ನೇ ಗೋರಿ ಮಾಡುವುದು ಬೇಡ
ನೀಲಿ ಕಣ್ಣಿನ ಗಿಡುಗನ ನೀತಿಯಲಿ
ಮಾನವೀಯತೆಯ ಹುಡುಕುವದು ಬೇಡ
ದುಡ್ಡಿನ ಧಣಿಗಳ ಡಾಲರ್‌ಗಳಿಂದ
ಕೈಗಳನ್ನು ಕಟ್ಟಿಸಿಕೊಂಡು
ಮಾನವೀಯತೆಯ ಮಾರಿಕೊಂಡು
ದುರಂತವನ್ನಪ್ಪುವದು ಬೇಡ.
ಸದ್ದಿಲ್ಲದೇ ಮನುಕುಲವ ನಾಶಮಾಡುವ
ಯುದ್ಧ ಢಾಕಿಣಿಗೆ ಶರಣಾಗುವದು ಬೇಡ.
ತೈಲ ಸಮುದ್ರದಲ್ಲಿ ಸಿಕ್ಕ ಹಕ್ಕಿಗಳು
ಕಂಗೆಟ್ಟು ಕೇಳುತ್ತಿವೆ –
ನೋವಿನಿಂದ ಬೇಡುತ್ತಿವೆ –
“ನಮಗೆ ಯುದ್ಧ ಬೇಡ
ಶಾಂತಿ ಬೇಕು – ಶುದ್ಧ ಪರಿಸರಬೇಕು” ಎಂದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...