ಮೂರ್ಛೆ ಬಂದಿತ್ತು

ಮೂರ್ಛೆ ಬಂದಿತ್ತು!
ಮೂರ್ಛೆ ಬಂದಿತ್ತು!
ಕಾಂಪೋಂಡು ಬಂಗ್ಲಿ
ಕಂಕಮ್ಮಂಗೆ
ಮೂರ್ಛೆ ಬಂದಿತ್ತು

ಮದಿವೊ ಏನೋ ಆಗುತಿತ್ತಂತೆ
ಚಪ್ಪರ ಕಂಬ ವರಗಿದ್ದರಂತೆ
ಮದವಣಗನ್ನೇ ನೋಡುತಿದ್ದರಂತೆ
ಯಾಕೋ ಏನೋ ಬಂದವರಂತೆ
ಯಾರೋ ಏನೋ ಉಸಿರಿದರಂತೆ
ಕೂತಿದ್ದ ಹಾಗೇ ಕನಕಂನೋರು
ಇದ್ದಿದ್ದ ಹಾಗೇ ನಿಟ್ಟುಸಿರಿಟ್ಟು
ಕಂಬ ಬಿಟ್ಟು ಜಾರಿದರಂತೆ
ಕಂಕಂಮ್ಮ
ಕಾಂಪೋಂಡು ಬಂಗ್ಲಿ ಕಂಕಂಮ್ಮ

ಏಕಾ ಏಕೀ ಉಸಿರೇ ನಿಂತು
ಉರುಡಿದರಂತೆ ಎಚ್ಚರ ತಪ್ಪಿ
ಯಾರಾರೆಲ್ಲ ಕೂಗಿದರಂತೆ
ಹೆಸರೇ ಹಿಡಿದು ಅರಚಿದರಂತೆ
ಏನೇನೆಲ್ಲ ಮಾಡಿದರಂತೆ
ಎಚ್ಚರ ತಪ್ಪಿ ಅರಿವೇ ಇಲ್ಲ
ಚಪ್ಪರವೆಲ್ಲಾ ಚಾಮರ ಬೀಸೆ
ಮೂರ್ಛೆ ಬಂದಿತ್ತು
ಕನಕಮ್ಮಂಗೆ
ಮೂರ್ಛೆ ಬಂದಿತ್ತು

ಆಕಾಶಪುರದ ಅಚ್ಛೋದ್ಯಪ್ಪ
ಎಲ್ಲಿಂದೆಲ್ಲೊ ಓಡೋಡಿ ಬಂದು
ಯಾಕೆ? ಏನು? ಯಾರು? ಎತ್ತ?
ಎಂದು ಬಂದು ಹಿಡಿದು ಎತ್ತಿ
ಮೆತ್ತನ್ನೇಯ ಕುರ್ಚಿಲಿಟ್ಟು
ಬೆಚ್ಚನ್ನೇಯ ಕಾಫಿ ಕುಡಿಸಿ
ಪನ್ನೀರೆರಚಿ ಗಾಳಿಹಾಕಿ
ಯಾಕೇ ಕನಕ
ಏನಾಯ್ತಮ್ಮ?
ಎಂದುನಿಂದು
ನುಡಿಸಿದರಾಗ!

ತೆಗೆದು ಉಸಿರ
ಹಚ್ಚಿದೃಷ್ಟಿ
ಕಂಗಳ ತುಂಬಿ
ಬಿಕ್ಕಳಿಸುತ್ತ
ಹೇಳಿದರಾಗ ಕನಕಮ್ಮ
ಎಚ್ಚರ ಬಂದು ಕನಕಮ್ಮ
ಮೂರ್ಛೆ ತಿಳಿದು ಕನಕಮ್ಮ
ಜ್ಞಾನ ನಿಂದು ಕನಕಮ್ಮ
ಕಾಂಪೊಂಡು ಬಂಗ್ಲಿ
ಕಂಕಂಮ್ಮ

ನಾನಂತೆ ಮುದುಕಿ
ಕೆಣಕತಾರೆ ಕದಕಿ
ಚಾಳೀಸೆಲ್ಲಾ ಷೋಕೀಗಂತೆ
ಗಲ್ಲಗಳೆರಡೂ ಸುಕ್ಕಿವೆಯಂತೆ
ಇದ್ದಲ್ಲೆಲ್ಲ ಬಿದ್ದಿವೆಯಂತೆ
ಇದ್ದದ್ದೆಲ್ಲ ಬದ್ಧಲ್ಲಂತೆ
ನಾನಂತೆ ಮುದುಕಿ
ಕೆಣಕತಾರೆ ಕೆದಕಿ
ಹೇಡೀ ಕೂಡೀ ಕಾಡೀ ಬೇಡೀ
ಮೋಡೀ ಆಡೀ ಛೋಡೀ ಮಾಡೀ
ಚಾಡೀ ಹಾಡಿದ ರೂಢೀ ಕೇಡೀ
ನಾನಂತೇ
ಕೆಣಕತಾರೆ ಕೆದಕಿ
ನಾನಂತೆ ಮುದುಕೀ

ನಕ್ಕರು ಕೆಲವರು
ಅತ್ತರು ಕೆಲವರು
ಎಲ್ಲವರೆಂದರು
ಅಯ್ಯೋ ಪಾಪ
ಅಯ್ಯೋ ಪಾಪ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ಯೋಗ ಖಾತ್ರಿ
Next post ಮಳೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys