Home / ಕವನ / ಕವಿತೆ / ಮೂರ್ಛೆ ಬಂದಿತ್ತು

ಮೂರ್ಛೆ ಬಂದಿತ್ತು

ಮೂರ್ಛೆ ಬಂದಿತ್ತು!
ಮೂರ್ಛೆ ಬಂದಿತ್ತು!
ಕಾಂಪೋಂಡು ಬಂಗ್ಲಿ
ಕಂಕಮ್ಮಂಗೆ
ಮೂರ್ಛೆ ಬಂದಿತ್ತು

ಮದಿವೊ ಏನೋ ಆಗುತಿತ್ತಂತೆ
ಚಪ್ಪರ ಕಂಬ ವರಗಿದ್ದರಂತೆ
ಮದವಣಗನ್ನೇ ನೋಡುತಿದ್ದರಂತೆ
ಯಾಕೋ ಏನೋ ಬಂದವರಂತೆ
ಯಾರೋ ಏನೋ ಉಸಿರಿದರಂತೆ
ಕೂತಿದ್ದ ಹಾಗೇ ಕನಕಂನೋರು
ಇದ್ದಿದ್ದ ಹಾಗೇ ನಿಟ್ಟುಸಿರಿಟ್ಟು
ಕಂಬ ಬಿಟ್ಟು ಜಾರಿದರಂತೆ
ಕಂಕಂಮ್ಮ
ಕಾಂಪೋಂಡು ಬಂಗ್ಲಿ ಕಂಕಂಮ್ಮ

ಏಕಾ ಏಕೀ ಉಸಿರೇ ನಿಂತು
ಉರುಡಿದರಂತೆ ಎಚ್ಚರ ತಪ್ಪಿ
ಯಾರಾರೆಲ್ಲ ಕೂಗಿದರಂತೆ
ಹೆಸರೇ ಹಿಡಿದು ಅರಚಿದರಂತೆ
ಏನೇನೆಲ್ಲ ಮಾಡಿದರಂತೆ
ಎಚ್ಚರ ತಪ್ಪಿ ಅರಿವೇ ಇಲ್ಲ
ಚಪ್ಪರವೆಲ್ಲಾ ಚಾಮರ ಬೀಸೆ
ಮೂರ್ಛೆ ಬಂದಿತ್ತು
ಕನಕಮ್ಮಂಗೆ
ಮೂರ್ಛೆ ಬಂದಿತ್ತು

ಆಕಾಶಪುರದ ಅಚ್ಛೋದ್ಯಪ್ಪ
ಎಲ್ಲಿಂದೆಲ್ಲೊ ಓಡೋಡಿ ಬಂದು
ಯಾಕೆ? ಏನು? ಯಾರು? ಎತ್ತ?
ಎಂದು ಬಂದು ಹಿಡಿದು ಎತ್ತಿ
ಮೆತ್ತನ್ನೇಯ ಕುರ್ಚಿಲಿಟ್ಟು
ಬೆಚ್ಚನ್ನೇಯ ಕಾಫಿ ಕುಡಿಸಿ
ಪನ್ನೀರೆರಚಿ ಗಾಳಿಹಾಕಿ
ಯಾಕೇ ಕನಕ
ಏನಾಯ್ತಮ್ಮ?
ಎಂದುನಿಂದು
ನುಡಿಸಿದರಾಗ!

ತೆಗೆದು ಉಸಿರ
ಹಚ್ಚಿದೃಷ್ಟಿ
ಕಂಗಳ ತುಂಬಿ
ಬಿಕ್ಕಳಿಸುತ್ತ
ಹೇಳಿದರಾಗ ಕನಕಮ್ಮ
ಎಚ್ಚರ ಬಂದು ಕನಕಮ್ಮ
ಮೂರ್ಛೆ ತಿಳಿದು ಕನಕಮ್ಮ
ಜ್ಞಾನ ನಿಂದು ಕನಕಮ್ಮ
ಕಾಂಪೊಂಡು ಬಂಗ್ಲಿ
ಕಂಕಂಮ್ಮ

ನಾನಂತೆ ಮುದುಕಿ
ಕೆಣಕತಾರೆ ಕದಕಿ
ಚಾಳೀಸೆಲ್ಲಾ ಷೋಕೀಗಂತೆ
ಗಲ್ಲಗಳೆರಡೂ ಸುಕ್ಕಿವೆಯಂತೆ
ಇದ್ದಲ್ಲೆಲ್ಲ ಬಿದ್ದಿವೆಯಂತೆ
ಇದ್ದದ್ದೆಲ್ಲ ಬದ್ಧಲ್ಲಂತೆ
ನಾನಂತೆ ಮುದುಕಿ
ಕೆಣಕತಾರೆ ಕೆದಕಿ
ಹೇಡೀ ಕೂಡೀ ಕಾಡೀ ಬೇಡೀ
ಮೋಡೀ ಆಡೀ ಛೋಡೀ ಮಾಡೀ
ಚಾಡೀ ಹಾಡಿದ ರೂಢೀ ಕೇಡೀ
ನಾನಂತೇ
ಕೆಣಕತಾರೆ ಕೆದಕಿ
ನಾನಂತೆ ಮುದುಕೀ

ನಕ್ಕರು ಕೆಲವರು
ಅತ್ತರು ಕೆಲವರು
ಎಲ್ಲವರೆಂದರು
ಅಯ್ಯೋ ಪಾಪ
ಅಯ್ಯೋ ಪಾಪ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...