Home / ಕವನ / ಕವಿತೆ / ಮೂರ್ಛೆ ಬಂದಿತ್ತು

ಮೂರ್ಛೆ ಬಂದಿತ್ತು

ಮೂರ್ಛೆ ಬಂದಿತ್ತು!
ಮೂರ್ಛೆ ಬಂದಿತ್ತು!
ಕಾಂಪೋಂಡು ಬಂಗ್ಲಿ
ಕಂಕಮ್ಮಂಗೆ
ಮೂರ್ಛೆ ಬಂದಿತ್ತು

ಮದಿವೊ ಏನೋ ಆಗುತಿತ್ತಂತೆ
ಚಪ್ಪರ ಕಂಬ ವರಗಿದ್ದರಂತೆ
ಮದವಣಗನ್ನೇ ನೋಡುತಿದ್ದರಂತೆ
ಯಾಕೋ ಏನೋ ಬಂದವರಂತೆ
ಯಾರೋ ಏನೋ ಉಸಿರಿದರಂತೆ
ಕೂತಿದ್ದ ಹಾಗೇ ಕನಕಂನೋರು
ಇದ್ದಿದ್ದ ಹಾಗೇ ನಿಟ್ಟುಸಿರಿಟ್ಟು
ಕಂಬ ಬಿಟ್ಟು ಜಾರಿದರಂತೆ
ಕಂಕಂಮ್ಮ
ಕಾಂಪೋಂಡು ಬಂಗ್ಲಿ ಕಂಕಂಮ್ಮ

ಏಕಾ ಏಕೀ ಉಸಿರೇ ನಿಂತು
ಉರುಡಿದರಂತೆ ಎಚ್ಚರ ತಪ್ಪಿ
ಯಾರಾರೆಲ್ಲ ಕೂಗಿದರಂತೆ
ಹೆಸರೇ ಹಿಡಿದು ಅರಚಿದರಂತೆ
ಏನೇನೆಲ್ಲ ಮಾಡಿದರಂತೆ
ಎಚ್ಚರ ತಪ್ಪಿ ಅರಿವೇ ಇಲ್ಲ
ಚಪ್ಪರವೆಲ್ಲಾ ಚಾಮರ ಬೀಸೆ
ಮೂರ್ಛೆ ಬಂದಿತ್ತು
ಕನಕಮ್ಮಂಗೆ
ಮೂರ್ಛೆ ಬಂದಿತ್ತು

ಆಕಾಶಪುರದ ಅಚ್ಛೋದ್ಯಪ್ಪ
ಎಲ್ಲಿಂದೆಲ್ಲೊ ಓಡೋಡಿ ಬಂದು
ಯಾಕೆ? ಏನು? ಯಾರು? ಎತ್ತ?
ಎಂದು ಬಂದು ಹಿಡಿದು ಎತ್ತಿ
ಮೆತ್ತನ್ನೇಯ ಕುರ್ಚಿಲಿಟ್ಟು
ಬೆಚ್ಚನ್ನೇಯ ಕಾಫಿ ಕುಡಿಸಿ
ಪನ್ನೀರೆರಚಿ ಗಾಳಿಹಾಕಿ
ಯಾಕೇ ಕನಕ
ಏನಾಯ್ತಮ್ಮ?
ಎಂದುನಿಂದು
ನುಡಿಸಿದರಾಗ!

ತೆಗೆದು ಉಸಿರ
ಹಚ್ಚಿದೃಷ್ಟಿ
ಕಂಗಳ ತುಂಬಿ
ಬಿಕ್ಕಳಿಸುತ್ತ
ಹೇಳಿದರಾಗ ಕನಕಮ್ಮ
ಎಚ್ಚರ ಬಂದು ಕನಕಮ್ಮ
ಮೂರ್ಛೆ ತಿಳಿದು ಕನಕಮ್ಮ
ಜ್ಞಾನ ನಿಂದು ಕನಕಮ್ಮ
ಕಾಂಪೊಂಡು ಬಂಗ್ಲಿ
ಕಂಕಂಮ್ಮ

ನಾನಂತೆ ಮುದುಕಿ
ಕೆಣಕತಾರೆ ಕದಕಿ
ಚಾಳೀಸೆಲ್ಲಾ ಷೋಕೀಗಂತೆ
ಗಲ್ಲಗಳೆರಡೂ ಸುಕ್ಕಿವೆಯಂತೆ
ಇದ್ದಲ್ಲೆಲ್ಲ ಬಿದ್ದಿವೆಯಂತೆ
ಇದ್ದದ್ದೆಲ್ಲ ಬದ್ಧಲ್ಲಂತೆ
ನಾನಂತೆ ಮುದುಕಿ
ಕೆಣಕತಾರೆ ಕೆದಕಿ
ಹೇಡೀ ಕೂಡೀ ಕಾಡೀ ಬೇಡೀ
ಮೋಡೀ ಆಡೀ ಛೋಡೀ ಮಾಡೀ
ಚಾಡೀ ಹಾಡಿದ ರೂಢೀ ಕೇಡೀ
ನಾನಂತೇ
ಕೆಣಕತಾರೆ ಕೆದಕಿ
ನಾನಂತೆ ಮುದುಕೀ

ನಕ್ಕರು ಕೆಲವರು
ಅತ್ತರು ಕೆಲವರು
ಎಲ್ಲವರೆಂದರು
ಅಯ್ಯೋ ಪಾಪ
ಅಯ್ಯೋ ಪಾಪ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...