Home / ಕವನ / ಕವಿತೆ / ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು!

ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು!

ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು
ಪರರ ಎಂಜಲು ತಿಂಬ ದಾಹಬೇಡ
ಗುರುಬರಲಿ ಹರಬರಲಿ ಶಿವಬರಲಿ ಯಾರಿರಲಿ
ಬೆವರಿಲ್ಲದಾ ಅನ್ನ ಅರುಹು ಬೇಡ
ಶ್ರಮವಿಲ್ಲದಾ ದೇವ ಧರ್ಮಬೇಡಽಽಽಽ

ಗುರುವಿರಲಿ ದೊರೆಯಿರಲಿ ಅರಮನೆಯ ಅರಸಿರಲಿ
ಭೂಮಿತಾಯಿಗೆ ಶರಣು ಶರಣು ಶರಣೋ

ಮಣ್ಣು ಕೂಡಲಸಂಗ ಕಲ್ಲು ಕೂಡಲಸಂಗ
ಬೆವರು ಸುರಿಸಿದ ಜನಕೆ ಶರಣು ಶರಣೋ

ನಿನ್ನ ದೀಕ್ಷೆಗೆ ಶರಣು ನಿನ್ನ ರಕ್ಷೆಗೆ ಶರಣು
ಮಣ್ಣು ಬೆಣ್ಣೆಯ ಗೈದ ಗುರುವೆ ಶರಣು

ಮಣ್ಣು ಜಂಗಮಲಿಂಗ ರಟ್ಟೆ ಕೂಡಲಸಂಗ
ಜಗವೆ ರೈತನ ಗಾನ ಗುಡಿಯು ಶರಣು

ಓಂ ಶರಣು ಕಾಯಕಕೆ ಓಂ ಶರಣು ಕಾಯಕ್ಕೆ
ದುಡಿಮೆಯೆ ಗುರುಲಿಂಗ ನಂಬಿ ಬರಲಿ

ಸಿಕ್ಕಷ್ಟು ಶಿವಭಾವ ಕೊಟ್ಟಷ್ಟು ಗುರುಭಾವ
ಬದುಕೀಗೆ ಶಿವಜ್ಞಾನ ಗಾನ ತರಲಿಽಽಽಽ
*****

ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬರೆದ ಕರ್ನಾಟಕದ ರೈತ ಸಮಸ್ಯೆಯ ಪ್ರಾಸಂಗಿಕ ಕವನ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...