ಅಂತರಂಗ-ಬಹಿರಂಗ

ಹೊರಗೆ ಹತ್ತಿತು ಬೆಂಕಿ
ಒಳಗೆ ತುಂಬಿತು ಹೂಗೆ
ಒಳಗು-ಹೊರಗು ಬೇರಾಯಿತು ಹೇಗೆ?
ಹೊರಗಡೆ ತೋಡುವ
ವೈರದ-ಪಾಯಕೆ
ಬೆಳೆಯಿತು ಒಳಗಡೆ ಉದ್ದನೆ ಗೋಡೆ!

ಭೂಪಟ ಗೆರೆಗಳು
ಭೂಮಿಗೇ ಅಲ್ಲ
ಗರಗಸವಾಗಿವೆ ಮನಸಿನಲಿ
ಜಾಲದ ಜಾತಿ
ಸೀಳಿದ ವರ್‍ಗ
ಸಲಗದ ಸದ್ದು ಸೆಣಸಿನಲಿ.

ಮೈಯೇ ಮುಟ್ಟದ
ಜಾತಿಜಾರರು
ಮುಟ್ಟುವುದೆಂದಿಗೆ ಮನಸನ್ನು ?
ಮನಸಿಗೆ ತಟ್ಟುವ
ಮಾತಿನ ಮಲ್ಲರು
ಮುಟ್ಟುವುದೆಂದಿಗೆ ಮೈಯ್ಯನ್ನು?

ಅನುಭವದಕ್ಷರ
ಸಾಲಿನ ಜೋಡಣೆ
ನಡೆಯುವುದು ಬಹಿರಂಗದಲಿ
ತಪ್ಪು ಒಪ್ಪುಗಳ
ತಿದ್ದಿದ ಕರಡು
ಅಚ್ಚಾಗುವುದು ಆಂತರ್‍ಯದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ
Next post ಸದಾ ನಿನ್ನ ಧ್ಯಾನಿಪೆ

ಸಣ್ಣ ಕತೆ

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…