ಪ್ರಾರ್‍ಥನೆ

ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ.
ಯಾರೂ ಹೊಡೆಯಲು ಬರುವುದಿಲ್ಲ.
ಶಪಿಸುವುದಿಲ್ಲ, ಬಯಸುವುದಿಲ್ಲ,
ನನ್ನ ತೋಳಿಗೆ ಒರಗಿ ಅಳುವುದಿಲ್ಲ.
ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ.
ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ.
ರೇಲ್ವೆ ಗಾರ್ಡಿನ ವಿಧಿ, ಫ್ಲಾಟ್ ಫಾರಮ್ಮು.
ಯಾರೂ ಹಂಚಿಕೊಳ್ಳುವುದಿಲ್ಲ.
ಮರೆತ ಜಲ್ಲಿ ಕಲ್ಲು, ಜೋಲು ಬಿದ್ದ ದಾರದ ತುಣುಕು.
ಗ್ರಹಬಂಧನಕ್ಕೆ ಯಾರೂ ಜವಾಬ್ದಾರರಲ್ಲ;
ಹೊರಗೆ ಬೆಳಕು, ತೆರೆದ ಕಿಟಕಿ, ನನ್ನ ಬಾಗಿಲು, ಅದರ ದೃಢತೆ, ಮೌನ,
ಇದು ನನ್ನ ವಿಧಿ.
ನನ್ನ ಕಾಪಾಡುವವರು ಯಾರೂ ಇಲ್ಲದ ಈ ಮೌನ, ಭಯ.
ಮುಂದಿನ ಸ್ಟೇಷನ್ನು,
ಅದೂ ಸುಳ್ಳು, ಅಷ್ಟೆ.
*****
ಮೂಲ: ಮಾರಿಯಾ ಎಲೆನಾ ಕ್ರುಝ್ ವಾರೆಲ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು!
Next post ಪತ್ರ – ೫

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…