ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ.
ಯಾರೂ ಹೊಡೆಯಲು ಬರುವುದಿಲ್ಲ.
ಶಪಿಸುವುದಿಲ್ಲ, ಬಯಸುವುದಿಲ್ಲ,
ನನ್ನ ತೋಳಿಗೆ ಒರಗಿ ಅಳುವುದಿಲ್ಲ.
ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ.
ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ.
ರೇಲ್ವೆ ಗಾರ್ಡಿನ ವಿಧಿ, ಫ್ಲಾಟ್ ಫಾರಮ್ಮು.
ಯಾರೂ ಹಂಚಿಕೊಳ್ಳುವುದಿಲ್ಲ.
ಮರೆತ ಜಲ್ಲಿ ಕಲ್ಲು, ಜೋಲು ಬಿದ್ದ ದಾರದ ತುಣುಕು.
ಗ್ರಹಬಂಧನಕ್ಕೆ ಯಾರೂ ಜವಾಬ್ದಾರರಲ್ಲ;
ಹೊರಗೆ ಬೆಳಕು, ತೆರೆದ ಕಿಟಕಿ, ನನ್ನ ಬಾಗಿಲು, ಅದರ ದೃಢತೆ, ಮೌನ,
ಇದು ನನ್ನ ವಿಧಿ.
ನನ್ನ ಕಾಪಾಡುವವರು ಯಾರೂ ಇಲ್ಲದ ಈ ಮೌನ, ಭಯ.
ಮುಂದಿನ ಸ್ಟೇಷನ್ನು,
ಅದೂ ಸುಳ್ಳು, ಅಷ್ಟೆ.
*****
ಮೂಲ: ಮಾರಿಯಾ ಎಲೆನಾ ಕ್ರುಝ್ ವಾರೆಲ
Related Post
ಸಣ್ಣ ಕತೆ
-
ಕನಸುಗಳಿಗೆ ದಡಗಳಿರುದಿಲ್ಲ
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ಮೇಷ್ಟ್ರು ಮುನಿಸಾಮಿ
ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…