ಎಷ್ಟೊಂದು ಚಳಿ

ಎಷ್ಟೊಂದು ಚಳಿ ಈ ಕಂಬಳಿ ಹುಳಕೆ
ಕಂಬಳಿ ಹೊದ್ದೇ ಹೊರಡುವುದು
ಮಳೆಗಾಲವಾಗಲಿ ಬೇಸಿಗೆಯಾಗಲಿ
ಕಂಬಳಿಯಿಲ್ಲದೆ ಹೋಗುವಂತಿಲ್ಲ

ಎಷ್ಟೊಂದು ಶೀತ ಈ ಬಸವನ ಹುಳಕೆ
ಮೈ ಕೈ ಶೀತ ಕೊಂಬುಗಳು ಶೀತ
ಯಾವಾಗಲೂ ನೆಗಡಿ-ಇದಕೆ
ಚಳಿಯಾಗಲಿ ಸೆಕೆಯಾಗಲಿ ನಡೆದಲ್ಲೆಲ್ಲಾ ನೆಗಡಿ

ಎಷ್ಟೊಂದು ಉರಿ ಈ ಬೆಂಕಿಯ ಹುಳಕೆ
ರಾತ್ರಿಯೆಲ್ಲಾ ಉರಿದೇ ಉರಿಯುವುದು
ಲೋಕಕೆ ತಾನೇ ಬೆಳಕು ಕೊಡುವ ಹಾಗೆ
ಮಿಣು ಮಿಣುಕಿಸಿ ಮಿನುಗುವುದು

ಎಷ್ಟೊಂದು ಮಧುರ ಈ ತುಂಬಿಗೆ
ರೆಕ್ಕೆಯಲ್ಲಿ ಸ್ವರ ತುಂಬಿ ಪಕ್ಕೆಯಲಿ ಪರಾಗ ತುಂಬಿ
ನಂದನ ವನದಲಿ ತಿರುಗಿಸಿ ಬಿಟ್ಟಂತೆ
ತಿರುಗಾಡುವುದಿದು ಉಲ್ಲಾಸ ತುಂಬಿ

ಎಷ್ಟೊಂದು ಬಣ್ಣ ಪಾತರಗಿತ್ತಿಗೆ
ಆ ಹೂವಿಗೆ ಈ ಹೂವಿಗೆ
ಕೊಟ್ಟೂ ಉಳಿಯಿತು ಇನ್ನೆಷ್ಟೊ
ಕೊಟ್ಟಂತೇ ಅದು ಮೆತ್ತಿಯುಕೊಂಡಿತು
ಆ ಹೂವಿಂದ ಅಷ್ಟು ಈ ಹೂವಿಂದ ಇಷ್ಟು

ಅಗಣಿತ ತಾರಾಗಣ ಅಂತರಿಕ್ಷಕೆ
ಎಲ್ಲ ಗಣಿಸಿದವರಿಲ್ಲ ಎಲ್ಲ ಗುಣಿಸಿದವರಿಲ್ಲ
ನೋಡುವ ಮನ ತನ್ಮಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿಯ ತಾಪದಿಂದ ತಟ್ಟಿಲಿರುವ ಅನಾಹುತಗಳು
Next post ಗುಜರಾತಿನ ಗಲಭೆಗೆ ದಶಕ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…