ಎಷ್ಟೊಂದು ಚಳಿ

ಎಷ್ಟೊಂದು ಚಳಿ ಈ ಕಂಬಳಿ ಹುಳಕೆ
ಕಂಬಳಿ ಹೊದ್ದೇ ಹೊರಡುವುದು
ಮಳೆಗಾಲವಾಗಲಿ ಬೇಸಿಗೆಯಾಗಲಿ
ಕಂಬಳಿಯಿಲ್ಲದೆ ಹೋಗುವಂತಿಲ್ಲ

ಎಷ್ಟೊಂದು ಶೀತ ಈ ಬಸವನ ಹುಳಕೆ
ಮೈ ಕೈ ಶೀತ ಕೊಂಬುಗಳು ಶೀತ
ಯಾವಾಗಲೂ ನೆಗಡಿ-ಇದಕೆ
ಚಳಿಯಾಗಲಿ ಸೆಕೆಯಾಗಲಿ ನಡೆದಲ್ಲೆಲ್ಲಾ ನೆಗಡಿ

ಎಷ್ಟೊಂದು ಉರಿ ಈ ಬೆಂಕಿಯ ಹುಳಕೆ
ರಾತ್ರಿಯೆಲ್ಲಾ ಉರಿದೇ ಉರಿಯುವುದು
ಲೋಕಕೆ ತಾನೇ ಬೆಳಕು ಕೊಡುವ ಹಾಗೆ
ಮಿಣು ಮಿಣುಕಿಸಿ ಮಿನುಗುವುದು

ಎಷ್ಟೊಂದು ಮಧುರ ಈ ತುಂಬಿಗೆ
ರೆಕ್ಕೆಯಲ್ಲಿ ಸ್ವರ ತುಂಬಿ ಪಕ್ಕೆಯಲಿ ಪರಾಗ ತುಂಬಿ
ನಂದನ ವನದಲಿ ತಿರುಗಿಸಿ ಬಿಟ್ಟಂತೆ
ತಿರುಗಾಡುವುದಿದು ಉಲ್ಲಾಸ ತುಂಬಿ

ಎಷ್ಟೊಂದು ಬಣ್ಣ ಪಾತರಗಿತ್ತಿಗೆ
ಆ ಹೂವಿಗೆ ಈ ಹೂವಿಗೆ
ಕೊಟ್ಟೂ ಉಳಿಯಿತು ಇನ್ನೆಷ್ಟೊ
ಕೊಟ್ಟಂತೇ ಅದು ಮೆತ್ತಿಯುಕೊಂಡಿತು
ಆ ಹೂವಿಂದ ಅಷ್ಟು ಈ ಹೂವಿಂದ ಇಷ್ಟು

ಅಗಣಿತ ತಾರಾಗಣ ಅಂತರಿಕ್ಷಕೆ
ಎಲ್ಲ ಗಣಿಸಿದವರಿಲ್ಲ ಎಲ್ಲ ಗುಣಿಸಿದವರಿಲ್ಲ
ನೋಡುವ ಮನ ತನ್ಮಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿಯ ತಾಪದಿಂದ ತಟ್ಟಿಲಿರುವ ಅನಾಹುತಗಳು
Next post ಗುಜರಾತಿನ ಗಲಭೆಗೆ ದಶಕ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…