ಗುಜರಾತಿನ ಗಲಭೆಗೆ ದಶಕ

ಹೋಳಿ ಹಬ್ಬ ಬಂದಿದೆ
ರಕ್ತದೋಕುಳಿಯ ಚೆಲ್ಲುತ
ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ
ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ
ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ

ಅಂದು ಬಲಿಯಾದ ಬಸುರಿಯರು
ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು
ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ದೆವ್ವ ಕುಣಿತಕೆ ದಶಕ ಸಂದಿದೆ.

ಸತಿಯ ಚಿತೆಗೆ ನೂಕಿ ಸುಟ್ಟು
ಮಹಾಸತಿಯ ಗುಡಿ ಕಟ್ಟಿದ್ದಾರೆ
ಕನಸುಗಳ ಸುಟ್ಟ ಘಮಟು ವಾಸನೆ
ಗೊಬ್ಬರ ಸಾಲು ಸಸಿಗೆ ಪಾತಿ ಮಾಡಿ
ಒತ್ತೊತ್ತು ಕನಸು, ಮುಳ್ಳು ಬೇಲಿಗಳ ಕಿತ್ತು.

ಗುಜರಾತಿನ ಗಾಂಧಿಯ ಚರಕ
ನೂಲು ನೇಯುತ್ತಲೇ ಇದೆ ಇಂದಿಗೂ
ಶಾಂತಿ ಮಂತ್ರ ಜಪಿಸುತ್ತಲೇ ಇದೆ
ಪ್ರಗತಿಯ ಮಂತ್ರ ತಂತ್ರಗಳ ಹೇಳುತ್ತ
ನಿಷ್ಪಾಪಿಗಳ ಹತ್ಯೆ ಎಂತಹ ಸಾಧನೆ?

ಸತ್ಯ, ಶಾಂತಿ, ಅಹಿಂಸೆಯ ತತ್ತ್ವ
ಕೆಂಪುರಕ್ತದಲ್ಲಿ ಬಿದ್ದು ಒದ್ದೆಯಾಯ್ತು.
ಅಂಗಳದಲ್ಲಿ ಒಣಹಾಕಿ ಬೀಗಿದೆನು
ಎದುರಾಳಿಯ ಸೊಕ್ಕು ಮುರಿದೆನೆಂದುಕೊಂಡೆನು
ಮನುಜರಿಗೆ ಬೆಂಕಿಯಿಟ್ಟ ಪಾತಕಿಗಳು
ನಡೆದಾಡುತ್ತಿರುವರು ಆ ನಡುಬೀದಿಯಲ್ಲೇ.

ಗುಜರಾತಿನಲ್ಲಿ ಸುಟ್ಟ ಶವಗಳ ಬೂದಿ
ಘಮಟು ವಾಸನೆ ಉಬ್ಬಳಿಕೆ ಬರುತ್ತಿದೆ
ಕ್ರೌರ್ಯದ ಪರಮಾವಧಿಯೊಳಗೆ
ಹೂತು ಹೋಗಿರುವ ಮಾನವೀಯತೆ
ಕೆಂಡವಾರಿದ ಬೂದಿ ಎಲ್ಲಿ ಹಾಕಲಿ?
ಅದು ಕ್ರಾಂತಿ ಬೀಜವಾಗಿ ಮೊಳೆಯಬಹುದೆ?
ಸೈತಾನನ ಸೊಕ್ಕು ಮುರಿಯದಿದ್ದರೆ ನಾನು
ಸತ್ತವರ ಅತ್ಮಗಳ ಎದುರಿಸಲಿ ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಷ್ಟೊಂದು ಚಳಿ
Next post ಭಾರತ ತಪಸ್ವಿನಿ-ಕಸ್ತೂರಿಬಾಯಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…