ಗುಜರಾತಿನ ಗಲಭೆಗೆ ದಶಕ

ಹೋಳಿ ಹಬ್ಬ ಬಂದಿದೆ
ರಕ್ತದೋಕುಳಿಯ ಚೆಲ್ಲುತ
ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ
ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ
ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ

ಅಂದು ಬಲಿಯಾದ ಬಸುರಿಯರು
ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು
ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ದೆವ್ವ ಕುಣಿತಕೆ ದಶಕ ಸಂದಿದೆ.

ಸತಿಯ ಚಿತೆಗೆ ನೂಕಿ ಸುಟ್ಟು
ಮಹಾಸತಿಯ ಗುಡಿ ಕಟ್ಟಿದ್ದಾರೆ
ಕನಸುಗಳ ಸುಟ್ಟ ಘಮಟು ವಾಸನೆ
ಗೊಬ್ಬರ ಸಾಲು ಸಸಿಗೆ ಪಾತಿ ಮಾಡಿ
ಒತ್ತೊತ್ತು ಕನಸು, ಮುಳ್ಳು ಬೇಲಿಗಳ ಕಿತ್ತು.

ಗುಜರಾತಿನ ಗಾಂಧಿಯ ಚರಕ
ನೂಲು ನೇಯುತ್ತಲೇ ಇದೆ ಇಂದಿಗೂ
ಶಾಂತಿ ಮಂತ್ರ ಜಪಿಸುತ್ತಲೇ ಇದೆ
ಪ್ರಗತಿಯ ಮಂತ್ರ ತಂತ್ರಗಳ ಹೇಳುತ್ತ
ನಿಷ್ಪಾಪಿಗಳ ಹತ್ಯೆ ಎಂತಹ ಸಾಧನೆ?

ಸತ್ಯ, ಶಾಂತಿ, ಅಹಿಂಸೆಯ ತತ್ತ್ವ
ಕೆಂಪುರಕ್ತದಲ್ಲಿ ಬಿದ್ದು ಒದ್ದೆಯಾಯ್ತು.
ಅಂಗಳದಲ್ಲಿ ಒಣಹಾಕಿ ಬೀಗಿದೆನು
ಎದುರಾಳಿಯ ಸೊಕ್ಕು ಮುರಿದೆನೆಂದುಕೊಂಡೆನು
ಮನುಜರಿಗೆ ಬೆಂಕಿಯಿಟ್ಟ ಪಾತಕಿಗಳು
ನಡೆದಾಡುತ್ತಿರುವರು ಆ ನಡುಬೀದಿಯಲ್ಲೇ.

ಗುಜರಾತಿನಲ್ಲಿ ಸುಟ್ಟ ಶವಗಳ ಬೂದಿ
ಘಮಟು ವಾಸನೆ ಉಬ್ಬಳಿಕೆ ಬರುತ್ತಿದೆ
ಕ್ರೌರ್ಯದ ಪರಮಾವಧಿಯೊಳಗೆ
ಹೂತು ಹೋಗಿರುವ ಮಾನವೀಯತೆ
ಕೆಂಡವಾರಿದ ಬೂದಿ ಎಲ್ಲಿ ಹಾಕಲಿ?
ಅದು ಕ್ರಾಂತಿ ಬೀಜವಾಗಿ ಮೊಳೆಯಬಹುದೆ?
ಸೈತಾನನ ಸೊಕ್ಕು ಮುರಿಯದಿದ್ದರೆ ನಾನು
ಸತ್ತವರ ಅತ್ಮಗಳ ಎದುರಿಸಲಿ ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಷ್ಟೊಂದು ಚಳಿ
Next post ಭಾರತ ತಪಸ್ವಿನಿ-ಕಸ್ತೂರಿಬಾಯಿ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…