Home / ಕವನ / ಕವಿತೆ / ಗುಜರಾತಿನ ಗಲಭೆಗೆ ದಶಕ

ಗುಜರಾತಿನ ಗಲಭೆಗೆ ದಶಕ

ಹೋಳಿ ಹಬ್ಬ ಬಂದಿದೆ
ರಕ್ತದೋಕುಳಿಯ ಚೆಲ್ಲುತ
ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ
ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ
ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ

ಅಂದು ಬಲಿಯಾದ ಬಸುರಿಯರು
ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು
ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ದೆವ್ವ ಕುಣಿತಕೆ ದಶಕ ಸಂದಿದೆ.

ಸತಿಯ ಚಿತೆಗೆ ನೂಕಿ ಸುಟ್ಟು
ಮಹಾಸತಿಯ ಗುಡಿ ಕಟ್ಟಿದ್ದಾರೆ
ಕನಸುಗಳ ಸುಟ್ಟ ಘಮಟು ವಾಸನೆ
ಗೊಬ್ಬರ ಸಾಲು ಸಸಿಗೆ ಪಾತಿ ಮಾಡಿ
ಒತ್ತೊತ್ತು ಕನಸು, ಮುಳ್ಳು ಬೇಲಿಗಳ ಕಿತ್ತು.

ಗುಜರಾತಿನ ಗಾಂಧಿಯ ಚರಕ
ನೂಲು ನೇಯುತ್ತಲೇ ಇದೆ ಇಂದಿಗೂ
ಶಾಂತಿ ಮಂತ್ರ ಜಪಿಸುತ್ತಲೇ ಇದೆ
ಪ್ರಗತಿಯ ಮಂತ್ರ ತಂತ್ರಗಳ ಹೇಳುತ್ತ
ನಿಷ್ಪಾಪಿಗಳ ಹತ್ಯೆ ಎಂತಹ ಸಾಧನೆ?

ಸತ್ಯ, ಶಾಂತಿ, ಅಹಿಂಸೆಯ ತತ್ತ್ವ
ಕೆಂಪುರಕ್ತದಲ್ಲಿ ಬಿದ್ದು ಒದ್ದೆಯಾಯ್ತು.
ಅಂಗಳದಲ್ಲಿ ಒಣಹಾಕಿ ಬೀಗಿದೆನು
ಎದುರಾಳಿಯ ಸೊಕ್ಕು ಮುರಿದೆನೆಂದುಕೊಂಡೆನು
ಮನುಜರಿಗೆ ಬೆಂಕಿಯಿಟ್ಟ ಪಾತಕಿಗಳು
ನಡೆದಾಡುತ್ತಿರುವರು ಆ ನಡುಬೀದಿಯಲ್ಲೇ.

ಗುಜರಾತಿನಲ್ಲಿ ಸುಟ್ಟ ಶವಗಳ ಬೂದಿ
ಘಮಟು ವಾಸನೆ ಉಬ್ಬಳಿಕೆ ಬರುತ್ತಿದೆ
ಕ್ರೌರ್ಯದ ಪರಮಾವಧಿಯೊಳಗೆ
ಹೂತು ಹೋಗಿರುವ ಮಾನವೀಯತೆ
ಕೆಂಡವಾರಿದ ಬೂದಿ ಎಲ್ಲಿ ಹಾಕಲಿ?
ಅದು ಕ್ರಾಂತಿ ಬೀಜವಾಗಿ ಮೊಳೆಯಬಹುದೆ?
ಸೈತಾನನ ಸೊಕ್ಕು ಮುರಿಯದಿದ್ದರೆ ನಾನು
ಸತ್ತವರ ಅತ್ಮಗಳ ಎದುರಿಸಲಿ ಹೇಗೆ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...