Home / ಕವನ / ಕವಿತೆ / ಭಾರತ ತಪಸ್ವಿನಿ-ಕಸ್ತೂರಿಬಾಯಿ

ಭಾರತ ತಪಸ್ವಿನಿ-ಕಸ್ತೂರಿಬಾಯಿ

ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ
ಓ ಜಗತ್ಸಂಹಿನೀಂ – ಭಾರತತಪಸ್ವಿನೀ
ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ
ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು
ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು
ಸತ್ಯದರ್ಶನಮಾದ ತಾಯೇ
ಸೆರೆ ಕೊಳೆಯ ತೊಳೆದ ಧೀಯೇ.

ಅಮರ ತೇಜದಿ ಬೆಳಗಿ – ನಿತ್ಯದಲಿ ಬಯಲಾಗಿ
ಗಾಳಿಯಲಿ ಕೀರ್ತಿಪರಿಮಳ ಬಹುದು ಹಿರಿದಾಗಿ
ಹೃದಯವನೆ ತೀಡುತಿದೆ – ದುರ್ವಿಷಯಕರಿಯಾಗಿ
ನಿರ್ಮಲವ ಮಾಡುತಿದೆ – ಬಿಡುಗಡೆಗೆ ಅಣಿಯಾಗಿ
ಹೇ ಮಾತೆ ಪ್ರಖ್ಯಾತೆ – ನಮಿಸುವೆವು ಶಿರಬಾಗಿ.
ತೆರಸು ಬಾ ಕಣ್ಗಳನು – ದೇವೀ
ನಡೆಸು ಬಾ ಸತ್ಯದಲಿ – ಓವೀ.

ಗತಿದೊರೆದ ಭಾರತೀಯರ ಜನ್ಮ ಭಾಗ್ಯಸಿರಿ
ಮುಳುಗದಿರು ಕಣ್ಮರೆಯ ಮಾಡದಿರು ಸುಖಲಹರಿ
ಭಾರತಿಯ ಸತ್ಪುತ್ರಿ-ಮಕ್ಕಳನು ನೋಡು ಬಾ
ಮುಕ್ತಹಸ್ತವ ನೀಡಿ-ಬಡತನವ ಹರಿಸು ಬಾ
ಸೆರೆಮನೆಯನೊಡೆದು ಬಾ-ತಾಯೆ ಕಸ್ತೂರಿಬಾ
ಕರುಣವನು ಕರೆಯ ಬಾ-ತಾಯೆ
ಪೂಜೆಯನು ಕೊಳ್ಳು ಬಾ-ತಾಯೆ.

ನೀನೆಲ್ಲರೊಳು ಬೆರೆತು ನಿತ್ಯಾತ್ಮವಾಗಿರುವೆ
ನಿನ್ನಂತರಂಗವೇ- ಸ್ವಾತಂತ್ರರಣರಂಗ
ನಿನ್ನ ನುಡಿ ನಿನ್ನ ನಡೆ-ಎಮ್ಮನಿದೊ ಸಾಗಿಸಿವೆ
ಭಾರತಿಯ ಬಿಡುಗಡೆಗೆ-ಸಾಹಸವಗೈಸುತಿವೆ
ಎದ್ದೇಳು ನಿನ್ನವರ- ನೆನೆದು ಬಾ ಶ್ರೀ ವಧುವೆ

ಕರುಣದಲಿ ನಿಂದೊಮ್ಮೆ ನೋಡು
ಮುಗುಳು ನಗೆಯೊಂದನ್ನು ನೀಡು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...