Home / ಕವನ / ಕವಿತೆ / ಭಾರತ ತಪಸ್ವಿನಿ-ಕಸ್ತೂರಿಬಾಯಿ

ಭಾರತ ತಪಸ್ವಿನಿ-ಕಸ್ತೂರಿಬಾಯಿ

ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ
ಓ ಜಗತ್ಸಂಹಿನೀಂ – ಭಾರತತಪಸ್ವಿನೀ
ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ
ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು
ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು
ಸತ್ಯದರ್ಶನಮಾದ ತಾಯೇ
ಸೆರೆ ಕೊಳೆಯ ತೊಳೆದ ಧೀಯೇ.

ಅಮರ ತೇಜದಿ ಬೆಳಗಿ – ನಿತ್ಯದಲಿ ಬಯಲಾಗಿ
ಗಾಳಿಯಲಿ ಕೀರ್ತಿಪರಿಮಳ ಬಹುದು ಹಿರಿದಾಗಿ
ಹೃದಯವನೆ ತೀಡುತಿದೆ – ದುರ್ವಿಷಯಕರಿಯಾಗಿ
ನಿರ್ಮಲವ ಮಾಡುತಿದೆ – ಬಿಡುಗಡೆಗೆ ಅಣಿಯಾಗಿ
ಹೇ ಮಾತೆ ಪ್ರಖ್ಯಾತೆ – ನಮಿಸುವೆವು ಶಿರಬಾಗಿ.
ತೆರಸು ಬಾ ಕಣ್ಗಳನು – ದೇವೀ
ನಡೆಸು ಬಾ ಸತ್ಯದಲಿ – ಓವೀ.

ಗತಿದೊರೆದ ಭಾರತೀಯರ ಜನ್ಮ ಭಾಗ್ಯಸಿರಿ
ಮುಳುಗದಿರು ಕಣ್ಮರೆಯ ಮಾಡದಿರು ಸುಖಲಹರಿ
ಭಾರತಿಯ ಸತ್ಪುತ್ರಿ-ಮಕ್ಕಳನು ನೋಡು ಬಾ
ಮುಕ್ತಹಸ್ತವ ನೀಡಿ-ಬಡತನವ ಹರಿಸು ಬಾ
ಸೆರೆಮನೆಯನೊಡೆದು ಬಾ-ತಾಯೆ ಕಸ್ತೂರಿಬಾ
ಕರುಣವನು ಕರೆಯ ಬಾ-ತಾಯೆ
ಪೂಜೆಯನು ಕೊಳ್ಳು ಬಾ-ತಾಯೆ.

ನೀನೆಲ್ಲರೊಳು ಬೆರೆತು ನಿತ್ಯಾತ್ಮವಾಗಿರುವೆ
ನಿನ್ನಂತರಂಗವೇ- ಸ್ವಾತಂತ್ರರಣರಂಗ
ನಿನ್ನ ನುಡಿ ನಿನ್ನ ನಡೆ-ಎಮ್ಮನಿದೊ ಸಾಗಿಸಿವೆ
ಭಾರತಿಯ ಬಿಡುಗಡೆಗೆ-ಸಾಹಸವಗೈಸುತಿವೆ
ಎದ್ದೇಳು ನಿನ್ನವರ- ನೆನೆದು ಬಾ ಶ್ರೀ ವಧುವೆ

ಕರುಣದಲಿ ನಿಂದೊಮ್ಮೆ ನೋಡು
ಮುಗುಳು ನಗೆಯೊಂದನ್ನು ನೀಡು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...