ನಾವೆಲ್ಲ ಒಂದೇ

ನಾವೆಲ್ಲ ಒಂದೇ
ನಾಡೆಲ್ಲ ನಮದೇ
ವೇಷ ಭಾಷೆ ಬೇರೆ ಬೇರೆ
ಹರಿಯುವ ನೀರು
ಬೀಸೋ ತಂಬೆಲರು
ಕೇಳುತಿಹವು ಹೇಗೆ ಬೇರೆ?

ಜಾತಿ ಮತಗಳು
ಆರಾಧ್ಯ ದೈವಗಳು
ಹೇಗಿದ್ದರೇನು? ದೇವರೊಂದೇ
ಶಾಲೆ ನೂರಾರು
ಒಂದೇ ನಮ್ಮ ಗುರು
ಬೋಧನೆಯು ಮಾತ್ರ ಒಂದೇ

ಹಿರಿಯರ ಭಿನ್ನಮತ
ಅರಸಿದರೆ ದಡ್ಡತನ
ಮೆರೆಯಲಿ ಮಕ್ಕಳಲಿ ಹಿರಿತನ
ಸೋದರ ಭಾವನೆ
ಹುಟ್ಟಲಿ ಕಾಮನೆ
ಹರಡಲಿ ಭವ್ಯ ಪರಂಪರೆಯನ್ನು

ಸೂರ್ಯ ಚಂದ್ರರು
ಗ್ರಹಗಳು ಹತ್ತಾರು
ಎಲ್ಲರಿಗೂ ಸರಿಸಮಾನವಲ್ಲವೇ?
ಮಾಡುವ ಕೆಲಸ
ಹೊಮ್ಮುವ ಉಲ್ಲಾಸ
ಮನದ ಭಾವನೆಗಳು ಏಕವಲ್ಲವೇ?

ಏನೇ ಇರಲಿ
ಭಿನ್ನತೆಯಲ್ಲೂ
ದೇಶ ನಮ್ಮದೆಂಬ ಭಾವ ಬೆಳೆಯಲಿ
ಪಾಕ ಕೆದಕಲಿ
ಚೀನಾ ಹಣುಕಲಿ
ಕೆಚ್ಚೆದೆ ಪ್ರತ್ಯುತ್ತರ ನಮ್ಮದಾಗಿರಲಿ

ನಮ್ಮಯ ಬಾಳಿಗೆ
ದೇಶದ ಏಳಿಗೆ
ಎಂಬ ಭಾವ ಜೇನು ಗೂಡು ಕಟ್ಟಲಿ
ವಿಶ್ವದಿ ನಮ್ಮಯ
ದೇಶ ಪ್ರಥಮ
ವಾಗಲೆಂಬ ಧ್ಯೇಯ ನಮ್ಮದಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ತಪಸ್ವಿನಿ-ಕಸ್ತೂರಿಬಾಯಿ
Next post ಡಾ. ವೀಣಾ ಶಾಂತೇಶ್ವರ – ಹೊಸತನದ ಪ್ರತಿಭೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…