ನಾವೆಲ್ಲ ಒಂದೇ

ನಾವೆಲ್ಲ ಒಂದೇ
ನಾಡೆಲ್ಲ ನಮದೇ
ವೇಷ ಭಾಷೆ ಬೇರೆ ಬೇರೆ
ಹರಿಯುವ ನೀರು
ಬೀಸೋ ತಂಬೆಲರು
ಕೇಳುತಿಹವು ಹೇಗೆ ಬೇರೆ?

ಜಾತಿ ಮತಗಳು
ಆರಾಧ್ಯ ದೈವಗಳು
ಹೇಗಿದ್ದರೇನು? ದೇವರೊಂದೇ
ಶಾಲೆ ನೂರಾರು
ಒಂದೇ ನಮ್ಮ ಗುರು
ಬೋಧನೆಯು ಮಾತ್ರ ಒಂದೇ

ಹಿರಿಯರ ಭಿನ್ನಮತ
ಅರಸಿದರೆ ದಡ್ಡತನ
ಮೆರೆಯಲಿ ಮಕ್ಕಳಲಿ ಹಿರಿತನ
ಸೋದರ ಭಾವನೆ
ಹುಟ್ಟಲಿ ಕಾಮನೆ
ಹರಡಲಿ ಭವ್ಯ ಪರಂಪರೆಯನ್ನು

ಸೂರ್ಯ ಚಂದ್ರರು
ಗ್ರಹಗಳು ಹತ್ತಾರು
ಎಲ್ಲರಿಗೂ ಸರಿಸಮಾನವಲ್ಲವೇ?
ಮಾಡುವ ಕೆಲಸ
ಹೊಮ್ಮುವ ಉಲ್ಲಾಸ
ಮನದ ಭಾವನೆಗಳು ಏಕವಲ್ಲವೇ?

ಏನೇ ಇರಲಿ
ಭಿನ್ನತೆಯಲ್ಲೂ
ದೇಶ ನಮ್ಮದೆಂಬ ಭಾವ ಬೆಳೆಯಲಿ
ಪಾಕ ಕೆದಕಲಿ
ಚೀನಾ ಹಣುಕಲಿ
ಕೆಚ್ಚೆದೆ ಪ್ರತ್ಯುತ್ತರ ನಮ್ಮದಾಗಿರಲಿ

ನಮ್ಮಯ ಬಾಳಿಗೆ
ದೇಶದ ಏಳಿಗೆ
ಎಂಬ ಭಾವ ಜೇನು ಗೂಡು ಕಟ್ಟಲಿ
ವಿಶ್ವದಿ ನಮ್ಮಯ
ದೇಶ ಪ್ರಥಮ
ವಾಗಲೆಂಬ ಧ್ಯೇಯ ನಮ್ಮದಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ತಪಸ್ವಿನಿ-ಕಸ್ತೂರಿಬಾಯಿ
Next post ಡಾ. ವೀಣಾ ಶಾಂತೇಶ್ವರ – ಹೊಸತನದ ಪ್ರತಿಭೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys