ನಾವೆಲ್ಲ ಒಂದೇ

ನಾವೆಲ್ಲ ಒಂದೇ
ನಾಡೆಲ್ಲ ನಮದೇ
ವೇಷ ಭಾಷೆ ಬೇರೆ ಬೇರೆ
ಹರಿಯುವ ನೀರು
ಬೀಸೋ ತಂಬೆಲರು
ಕೇಳುತಿಹವು ಹೇಗೆ ಬೇರೆ?

ಜಾತಿ ಮತಗಳು
ಆರಾಧ್ಯ ದೈವಗಳು
ಹೇಗಿದ್ದರೇನು? ದೇವರೊಂದೇ
ಶಾಲೆ ನೂರಾರು
ಒಂದೇ ನಮ್ಮ ಗುರು
ಬೋಧನೆಯು ಮಾತ್ರ ಒಂದೇ

ಹಿರಿಯರ ಭಿನ್ನಮತ
ಅರಸಿದರೆ ದಡ್ಡತನ
ಮೆರೆಯಲಿ ಮಕ್ಕಳಲಿ ಹಿರಿತನ
ಸೋದರ ಭಾವನೆ
ಹುಟ್ಟಲಿ ಕಾಮನೆ
ಹರಡಲಿ ಭವ್ಯ ಪರಂಪರೆಯನ್ನು

ಸೂರ್ಯ ಚಂದ್ರರು
ಗ್ರಹಗಳು ಹತ್ತಾರು
ಎಲ್ಲರಿಗೂ ಸರಿಸಮಾನವಲ್ಲವೇ?
ಮಾಡುವ ಕೆಲಸ
ಹೊಮ್ಮುವ ಉಲ್ಲಾಸ
ಮನದ ಭಾವನೆಗಳು ಏಕವಲ್ಲವೇ?

ಏನೇ ಇರಲಿ
ಭಿನ್ನತೆಯಲ್ಲೂ
ದೇಶ ನಮ್ಮದೆಂಬ ಭಾವ ಬೆಳೆಯಲಿ
ಪಾಕ ಕೆದಕಲಿ
ಚೀನಾ ಹಣುಕಲಿ
ಕೆಚ್ಚೆದೆ ಪ್ರತ್ಯುತ್ತರ ನಮ್ಮದಾಗಿರಲಿ

ನಮ್ಮಯ ಬಾಳಿಗೆ
ದೇಶದ ಏಳಿಗೆ
ಎಂಬ ಭಾವ ಜೇನು ಗೂಡು ಕಟ್ಟಲಿ
ವಿಶ್ವದಿ ನಮ್ಮಯ
ದೇಶ ಪ್ರಥಮ
ವಾಗಲೆಂಬ ಧ್ಯೇಯ ನಮ್ಮದಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ತಪಸ್ವಿನಿ-ಕಸ್ತೂರಿಬಾಯಿ
Next post ಡಾ. ವೀಣಾ ಶಾಂತೇಶ್ವರ – ಹೊಸತನದ ಪ್ರತಿಭೆ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…