Home / ಕವನ / ಕವಿತೆ / ಕಣ್ಣು ಮುಚ್ಚಲು ತಾಯಿ ಕಣ್ಣು ಬಿಚ್ಚಲು ತಾಯಿ

ಕಣ್ಣು ಮುಚ್ಚಲು ತಾಯಿ ಕಣ್ಣು ಬಿಚ್ಚಲು ತಾಯಿ

ಬಾಳುವೆನು ಭಗವಂತನಾನಂದ ತೊಟ್ಟಿಲಲಿ
ಈ ಹಗಲು ರಾತ್ರಿಗಳ ತೂಗಿ ತೂಗಿ
ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ
ಜೋಕಂದ ಜೋಗುಳದ ನಾದವಾಗಿ

ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ
ಸಕ್ಕರೆಯ ಎದೆಹಾಲ ಪಾನಗೈವೆ
ವಿಶ್ವದೇವತೆ ತಾಯಿ ಹೆತ್ತಾಯಿ ನಲ್ದಾಯಿ
ಕೆನೆಹಾಲ ಗಲ್ಲದಲಿ ಆಟಗೈವೆ

ಕಣ್ಣೊಳಗ ಕಿವಿಯೊಳಗ ತಾಯಿ ತುಂಬಿದಳವ್ವಾ
ಎದಿಯೊಳಗ ಮನದೊಳಗ ಮುದ್ದು ತಾಯಿ
ಎಂಥ ಶಾಂತಿಯ ತಾಯಿ ಎಂಥ ಪ್ರೀತಿಯ ಆಯಿ
ಆನಂದ ಸಾಗರದ ದೇವಿ ತಾಯಿ

ಓ ಅವ್ವ ನನ್ನವ್ವ ಬೆಣ್ಣೆ ಸಕ್ಕರೆಯವ್ವಾ
ಅಂಜಿದೆನು ಈ ಬಾಳ ದೆವ್ವಗಳಿಗೆ
ಓ ಅವ್ವ ಬಾರವ್ವ ನೆತ್ತೀಯ ತಿಕ್ಕವ್ವಾ
ಹಸಿಯಾದೆ ಈ ಬೆಮರ ಬಟ್ಟೆಯೊಳಗೆ

ಕಣ್ಣು ಮುಚ್ಚಲು ತಾಯಿ ಕಣ್ಣು ಬಿಚ್ಚಲು ತಾಯಿ
ಅತ್ತಾಗ ನಕ್ಕಾಗ ತಾಯಿ ತಾಯಿ
ತೊಟ್ಟಿಲಲಿ ಇದ್ದಾಗ ನೆಲದಲ್ಲಿ ಬಿದ್ದಾಗ
ಎದ್ದಾಗ ನಿದ್ಯಾಗ ತಾಯಿ ತಾಯಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...