Home / ಕವನ / ಕವಿತೆ / ನೀನು

ನೀನು

ಎದೆಯ ಹೊಂಡದಲೆಲ್ಲ ಎಚ್ಚರದಿ ಕೈಯಾಡಿ
ಹುಡುಕಿ ಎತ್ತಿದ್ದೇನೆ ನಿನ್ನ,
ನಿನ್ನ ಮಲಗಿಸಿ ಮೈಯ ಅಂಗುಲಂಗುಲವನ್ನು
ದುರ್ಬೀನುಗಣ್ಣಿನಲ್ಲಿ ಬೆದಕಿ
ನೋಡಿದರೆ ಇದೇನು, ಎಲ ನೀನು
ಪ್ರತಿ ಕಣದಲೂ ಖುದ್ದು ನಾನು!

ಜವಳಿಯಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ
ಬಟ್ಟೆ ಹರಿಸುತ್ತಿರಲು ಪಕ್ಕದಲೆ ನೀನು
ಅದೆ ಬಟ್ಟೆಗಳ ತೊಟ್ಟು ನಿಂತಿರುವೆ ಅದಕೂ
ಒಂದೆರಡು ಕಡೆ ಹರಕು;
ಎಂದೊ ಹೊಲಿಸಿದ್ದೆ ಬಿಡು ಇದನು ಎಂಬಂತೆ
ಮುಖದಲ್ಲಿ ಒಂದು ನಗೆ ಪಲುಕು;
ನನಗೊ, ಬದುಕು ಎಲ್ಲ ಥರದಲು ಹೊಸದು ಬೇಕು.

ಒಳಗೆ ಆಳದಲೆಲ್ಲೊ ತೇಲಿಬಂದರೆ
ಒಂದು ತುಣುಕು,
ಬಹಳ ಸಡಗರದಲ್ಲಿ ಎತ್ತಿ
ಕುಕ್ಕಿ, ಇದು ಗಟ್ಟಿ
ಹೊಸ ಮಾತಿನಲ್ಲಿ ಹೆಕ್ಕಿ ತರುವೆನೆನ್ನುತ್ತೇನೆ;
ಆದರಗೊ ಅಲ್ಲಿ,
ತಲೆಯ ಮೇಲೇ ಕಂಡ ಹಾಗೆ ಹೆಣ್ಣಿಗೆ ಹಲ್ಲಿ,
ಊರ ಹೆಬ್ಬಾಗಿಲಿನ ಮೇಲೆ ನಿಂತು
ಅದನೆ ಸಾರುತಲಿರುವೆ ಗಂಟೆಗೊರಳಲ್ಲಿ.
ಬೆವರುತ್ತೇನೆ ನಾನು ಎತ್ತಿ ಬೀಸುತ್ತೇನೆ ಕತ್ತಿ
ನೀನೋ,
ನಗುವೆ ಥಣ್ಣಗೆ ಎಗ್ಗೆ ಇರದೆ, ಮಿಣ್ಣಗೆ ನನ್ನ ಹೂಳಿ
ನನ್ನ ಮಾತ್ಸರ್ಯವೇ ಪ್ರತಿಬಿಂಬಿಸುತ್ತಿರುವ ನಿನ್ನೆ ಗೆಲುವಲ್ಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...