Home / ಕವನ / ಕವಿತೆ / ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಓ ನೋಡು ಕೋ ನೋಡು ಹೋ ನೋಡು ಹೈ ನೋಡು
ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ
ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ
ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ

ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ
ಹಕ್ಯಾಗಿ ಹಾರೇನೊ ಬುರ್ರನೆಂದೊ
ಓ ನೋಡು ಶಿವಶಿವಾ ಝಲ್ಲೆಂತೊ ನರನರಾ
ವಿಶ್ವಶಾಂತಿಯ ಭವನ ಝಗ್ಗನೆಂತೊ

ಓ ಕಂಡೆ ಹೋ ಕಂಡೆ ಮುರಳೀಯ ಪಡಕೊಂಡೆ
ಈಶ್ವರನ ಈ ತೇರು ಕಂಡೆ ಕಂಡೆ
ಸತ್ಯಯೋಗದ ಗುಡಿಯ ರಾಜಯೋಗದ ಎಡೆಯ
ಆದಿ ದೇವನ ಸಿರಿಯ ಸಾರಿ ಕಂಡೆ

ಯೋಗ ಯೋಗೇಶ್ವರರು ಕಾಲ ಕಾಲೇಶ್ವರರು
ಸಿದ್ಧ ಸಿದ್ಧರ ಗೆದ್ದ ನವ ಬುದ್ಧರು
ಜಗದ ಸೂರ್ಯರು ಇವರು ಯುಗದ ಸೂರ್ಯರು ಇವರು
ಕುಂಭಕರ್ಣರ ಕೊಂದ ಕಲಿರುದ್ರರು

ಇಲ್ಲಿ ಬಂದ ಮೇಲೆ ಎಲ್ಲಿ ಹೋಗಲು ಬೇಡ
ಗೊಲ್ಲ ಗೂಳಿಯ ಜನುಮ ಜಾರಿಹೋಯ್ತೊ
ಆ ಬುಟ್ಟಿ ಈ ಬುಟ್ಟಿ ಗುಳಬುಟ್ಟಿ ಎಣಿಬುಟ್ಟಿ
ನೂರು ಬುಟ್ಟಿಯ ಪೂಜಿ ತೀರಿಹೋತೊ

ಮುಳ್ಳು ಮಲ್ಲಿಗೆಯಾತು ಕಲ್ಲು ಕೇದಿಗೆಯಾತು
ಓ ಬಂತು ಬಂತೈಯ ಜಾತ್ರಿಕಾಲಾ
ಹುಚ್ಚಯ್ಯನಾ ತೇರು ಕಲಿತೇರು ಹೋತಯ್ಯ
ಬಂತೈ ಬಂತೈಯ ಸತ್ಯಕಾಲಾ

ರೈಲ್ಗಾಡಿ ಹತ್ತೈಯ್ಯ ಭಂವ್ವೆಂದು ಹೋಗಯ್ಯ
ಜೈಯ್ಯೆಂದು ಮುಟ್ಟಯ್ಯ ಮುಕ್ತಿಧಾಮಾ
ಬೈಲ್ಗಾಡಿ ಹತ್ತೈಯ ಬುರ್ರಂತ ಹಾರಯ್ಯ
ಸುರ್ರಂತ ಸಾರಯ್ಯ ಶಾಂತಿಧಾಮಾ

ಅಬ್ಬಯ್ಯ ಪರುವತ = ಆಬೂ ಪರ್ವತ (ರಾಜಸ್ಥಾನ), MT. ABU
ಅಪ್ಪಯ್ಯ = ಸರ್ವ ಆತ್ಮರ ತಂದೆಯಾದ ಪರಮಾತ್ಮ, God.
ಲಕ್ಕೀಕೊಳ್ಳಿ = ನಕ್ಕೀ ಸರೋವರ (Nakki Lake)ಅಬೂ ಪರ್ವತದ ಮೇಲಿನ ಸುಂದರ ಸರೋವರ.
ವಿಶ್ವ ಶಾಂತಿ ಭವನ= Universal Peace Hall. ೩೦೦೦ ಸುಖಾಸನಗಳನ್ನು ಹೊಂದಿದ, ಜಗತ್ತಿನ ಒಂಬತ್ತು ಭಾಷೆಗಳಿಗೆ ಭಾಷಣಗಳನ್ನು
ಭಾಷಾಂತರಿಸಿ ಕೇಳಿಸುವ ಹೇಡ್ ಫೋನ್ ಸೌಕರ್ಯವುಳ್ಳ ಹಾಗೂ ಸ್ಥಳದಲ್ಲಿಯೇ T V, ಪ್ರಸಾರದ ಸೌಲಭ್ಯ ಹೊಂದಿದ ಅತ್ಯಾಧುನಿಕ ಯೋಗದ ಹಾಲ್. ಇದರಲ್ಲಿ ಪ್ರತಿವರ್ಷ World Peace Conference ಜರಗುತ್ತದೆ.
ಅಪ್ಪಯ್ಯನ ರಥ = ಶಿವನ ಸಂದೇಶಕ್ಕೆ ಮಾಧ್ಯಮವಾಗಿರುವ ಶರೀರರಥ. Shiva Baba’s Chariot
ಆದಿದೇವ = ಶಿವನ ಜ್ಞಾನವಾಹನ ಬ್ರಹ್ಮ ಅಥವಾ ಬ್ರಹ್ಮಾ ಬಾಬಾ
ಮುಕ್ತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನಲೆ
ಶಾಂತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನೆಲೆ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...