Home / ಕವನ / ಕವಿತೆ / ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಓ ನೋಡು ಕೋ ನೋಡು ಹೋ ನೋಡು ಹೈ ನೋಡು
ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ
ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ
ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ

ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ
ಹಕ್ಯಾಗಿ ಹಾರೇನೊ ಬುರ್ರನೆಂದೊ
ಓ ನೋಡು ಶಿವಶಿವಾ ಝಲ್ಲೆಂತೊ ನರನರಾ
ವಿಶ್ವಶಾಂತಿಯ ಭವನ ಝಗ್ಗನೆಂತೊ

ಓ ಕಂಡೆ ಹೋ ಕಂಡೆ ಮುರಳೀಯ ಪಡಕೊಂಡೆ
ಈಶ್ವರನ ಈ ತೇರು ಕಂಡೆ ಕಂಡೆ
ಸತ್ಯಯೋಗದ ಗುಡಿಯ ರಾಜಯೋಗದ ಎಡೆಯ
ಆದಿ ದೇವನ ಸಿರಿಯ ಸಾರಿ ಕಂಡೆ

ಯೋಗ ಯೋಗೇಶ್ವರರು ಕಾಲ ಕಾಲೇಶ್ವರರು
ಸಿದ್ಧ ಸಿದ್ಧರ ಗೆದ್ದ ನವ ಬುದ್ಧರು
ಜಗದ ಸೂರ್ಯರು ಇವರು ಯುಗದ ಸೂರ್ಯರು ಇವರು
ಕುಂಭಕರ್ಣರ ಕೊಂದ ಕಲಿರುದ್ರರು

ಇಲ್ಲಿ ಬಂದ ಮೇಲೆ ಎಲ್ಲಿ ಹೋಗಲು ಬೇಡ
ಗೊಲ್ಲ ಗೂಳಿಯ ಜನುಮ ಜಾರಿಹೋಯ್ತೊ
ಆ ಬುಟ್ಟಿ ಈ ಬುಟ್ಟಿ ಗುಳಬುಟ್ಟಿ ಎಣಿಬುಟ್ಟಿ
ನೂರು ಬುಟ್ಟಿಯ ಪೂಜಿ ತೀರಿಹೋತೊ

ಮುಳ್ಳು ಮಲ್ಲಿಗೆಯಾತು ಕಲ್ಲು ಕೇದಿಗೆಯಾತು
ಓ ಬಂತು ಬಂತೈಯ ಜಾತ್ರಿಕಾಲಾ
ಹುಚ್ಚಯ್ಯನಾ ತೇರು ಕಲಿತೇರು ಹೋತಯ್ಯ
ಬಂತೈ ಬಂತೈಯ ಸತ್ಯಕಾಲಾ

ರೈಲ್ಗಾಡಿ ಹತ್ತೈಯ್ಯ ಭಂವ್ವೆಂದು ಹೋಗಯ್ಯ
ಜೈಯ್ಯೆಂದು ಮುಟ್ಟಯ್ಯ ಮುಕ್ತಿಧಾಮಾ
ಬೈಲ್ಗಾಡಿ ಹತ್ತೈಯ ಬುರ್ರಂತ ಹಾರಯ್ಯ
ಸುರ್ರಂತ ಸಾರಯ್ಯ ಶಾಂತಿಧಾಮಾ

ಅಬ್ಬಯ್ಯ ಪರುವತ = ಆಬೂ ಪರ್ವತ (ರಾಜಸ್ಥಾನ), MT. ABU
ಅಪ್ಪಯ್ಯ = ಸರ್ವ ಆತ್ಮರ ತಂದೆಯಾದ ಪರಮಾತ್ಮ, God.
ಲಕ್ಕೀಕೊಳ್ಳಿ = ನಕ್ಕೀ ಸರೋವರ (Nakki Lake)ಅಬೂ ಪರ್ವತದ ಮೇಲಿನ ಸುಂದರ ಸರೋವರ.
ವಿಶ್ವ ಶಾಂತಿ ಭವನ= Universal Peace Hall. ೩೦೦೦ ಸುಖಾಸನಗಳನ್ನು ಹೊಂದಿದ, ಜಗತ್ತಿನ ಒಂಬತ್ತು ಭಾಷೆಗಳಿಗೆ ಭಾಷಣಗಳನ್ನು
ಭಾಷಾಂತರಿಸಿ ಕೇಳಿಸುವ ಹೇಡ್ ಫೋನ್ ಸೌಕರ್ಯವುಳ್ಳ ಹಾಗೂ ಸ್ಥಳದಲ್ಲಿಯೇ T V, ಪ್ರಸಾರದ ಸೌಲಭ್ಯ ಹೊಂದಿದ ಅತ್ಯಾಧುನಿಕ ಯೋಗದ ಹಾಲ್. ಇದರಲ್ಲಿ ಪ್ರತಿವರ್ಷ World Peace Conference ಜರಗುತ್ತದೆ.
ಅಪ್ಪಯ್ಯನ ರಥ = ಶಿವನ ಸಂದೇಶಕ್ಕೆ ಮಾಧ್ಯಮವಾಗಿರುವ ಶರೀರರಥ. Shiva Baba’s Chariot
ಆದಿದೇವ = ಶಿವನ ಜ್ಞಾನವಾಹನ ಬ್ರಹ್ಮ ಅಥವಾ ಬ್ರಹ್ಮಾ ಬಾಬಾ
ಮುಕ್ತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನಲೆ
ಶಾಂತಿಧಾಮ = ಸಕಲ ಆತ್ಮರ ಮೂಲ ಚೈತನ್ಯ ನೆಲೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...