Home / ಕವನ / ಕವಿತೆ / ಬಾ ಬಾ ಹೊಸ ಗಾಳಿಯೆ

ಬಾ ಬಾ ಹೊಸ ಗಾಳಿಯೆ

ಬಾನು ರೆಪ್ಪೆ ಮುಚ್ಚುತಿದೆ
ಇರುಳು ಸೆರಗ ಹೊಚ್ಚುತಿದೆ
ತಾರೆ ಚಂದ್ರ ತೀರದಲ್ಲಿ
ನಕ್ಕು ಹರಟೆ ಕೊಚ್ಚುತಿವೆ.
ಮಾತಾಡದೆ ಸಡಗರದಲಿ
ತೇಕಾಡಿದೆ ಮುಗಿಲು,
ಹಾಡಲು ಶ್ರುತಿ ಹೂಡುತ್ತಿದೆ
ಬೆಳಂದಿಂಗಳ ಕೊರಳು.
ದಡವ ಕೊಚ್ಚಿ ಹರಿಯುತ್ತಿದೆ
ನದಿಗೆ ಮಹಾಪೂರ,
ಗಡಿಯ ದಾಟಿ ಹಬ್ಬುತ್ತಿದೆ
ಪಾರಿಜಾತ ಸಾರ,
ಹಳತನೆಸೆದು ಹೊಸ ರೂಪಕೆ
ತಡಕುತ್ತಿದೆ ಜೀವ,
ತಳಮಳಿಸುತ ಅನುಭವಿಸಿದೆ
ಹೊಸಸೃಷ್ಟಿಯ ನೋವ.

ಬಂತು ಹೇಗೆ, ಯಾವುದು ಈ
ಕೊಳಲಿನ ಮಧುನಾದ ?
ಗೆಜ್ಜೆ ಕಟ್ಟಿ ನರ್ತಿಸಲು
ತವಕಿಸುತಿದೆ ಪಾದ.
ಜೊಂಪಿನ ತಳದಿಂದ ಚಿತ್ತ
ಮೇಲೆ ತೇಲಿ ಬರುತಿದೆ,
ಮಿಂಚ ನೇಯ್ದ ಬಸಿರಿ ಮುಗಿಲ
ಸಂಚು ಹೂಡಿ ಕಾದಿದೆ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ.
ಒಣಗಿದೆಲೆಯ ಕೆಳಚಿ ನಿಂತ
ಮೈಯ ತೂರಿ ಬಾ
ಮಳೆಗಾಲದ ನವನೀರದ
ಹರಸುವಂತೆ ಬಾ,
ಬತ್ತಿಹೋದ ಚಿತ್ತದಲ್ಲಿ
ಜಲ ಚಿಮ್ಮಿಸು ಬಾ.

ಉದಾಸೀನ ಜೀವಹೀನ-
ವಾದುವೆಲ್ಲ ಈ
ಕೊನೆಯಿರುಳಿನ ಕಣ್ಣೀರಲಿ
ತೇಲಿ ಹೋಗಲಿ

ಸೃಷ್ಟಿಶಕ್ತಿ ಆರಿಹೋದ
ವಸ್ತುವೆಲ್ಲವೂ
ತನ್ನೊಡಲನು ನವಸೃಷ್ಟಿಗೆ
ತೆರವು ಮಾಡಲಿ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ,
ಸರಿದುಹೋದ ಹರಯವನ್ನು
ಮರಳಿ ನೆಲಕೆ ತಾ.
ಪ್ರಾಣವೀಣೆಯನ್ನು ದನಿಸಿ
ಕರಣಗಳಿಗೆ ಕಿಚ್ಚನುಣಿಸಿ
ಕಾಯದ ಕಣಕಣವ ಕುಣಿಸಿ
ಸಾವನೊದ್ದು ಬಾ,
ಚೈತ್ರದ ಹೊಸ ಮೈತ್ರಿಯಲ್ಲಿ
ಜಗವನದ್ದು ಬಾ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...