ಇಲ್ಲದೆಯೆ ಇರಬೇಕು

ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ
ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ
ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು,
ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ
ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ,
ತೊರೆಯ ತೆಕ್ಕಗೆ ಸೆಳೆದು ತನ್ನದಾಗಿಸಬೇಕು;
ಒಮ್ಮೊಮ್ಮೆ ಮೈಬಿಚ್ಚಿ ದಡದಿನ್ನೆಗಳ ಕೊಚ್ಚಿ
ಹುಚ್ಚೇರಿ ಭೋರ್ಗರೆದು ಅಬ್ಬಾ! ಎನ್ನಿಸಬೇಕು;
ಎದುರು ಬರುವರು ಗಂಗೆ ಯಮುನೆ, ನಮ್ರತೆಯಿಂದ
ಬಾಗಿ, ಒಂದಾಗಿ ಸಾಗರಕೆ ಧಾವಿಸಬೇಕು;
ಅಷ್ಟೆಲ್ಲ ಕಂಡರೂ ಉಂಡರೂ ಹಮ್ಮುಗಳ
ತೊರೆದು, ಶರಧಿಯ ನೆರೆದು ಇಲ್ಲದೆಯೆ ಇರಬೇಕು.

ಹೀಗೆ ನೆಲ ಒಪ್ಪಿ ಬಾಳಿದ ಸತ್ವ ಮುಗಿಲಾಗಿ ಮೇಲಕೇರುವುದು
ಎಷ್ಟೆ ಮೇಲಿದ್ದರೂ ಮಳೆಯಾಗಿ ಕೆಳಗಿಳಿದು ನೆಲಕ್ಕೆ ಸೇರುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಧಿ
Next post ವಿಶ್ವ ಕೂಡಲ ಸಂಗಮಾ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…