Home / ಕವನ / ಕವಿತೆ / ಮೌನ ಕದಡಿದೆ

ಮೌನ ಕದಡಿದೆ

ಮೌನ ಕದಡಿದೆ
ಮಾತು ಹೊರಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ

ಲಜ್ಜೆ ಏತಕೋ
ಮಜ್ಜಿಗೆಯೊಳಗಿನ
ಬೆಣ್ಣೆಯಂತೆ ಕರಗಿದೆ
ಎನ್ನ ಮನದರಸಿ ನೀನಲ್ಲವೆ ಗೆಳತಿ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಕಣ್ಣನೋಟದಲ್ಲೆ
ನಿನ್ನ ಮಾತು ಮೌನ ತಳೆದಿದೆ
ಮತ್ತೆ ಒಲವಿನಾ ಕರೆಗೆ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಚಿತ್ತಾರ ಬರೆದ ಕುಂಚ
ನಿನ್ನ ರೂಪವ ನೋಡಿ
ನಾಚಿ ನನ್ನತ್ತ ಕಲೆಯ ಸಿರಿಯ ಹೊಗಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ||

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ
ಕಾಡುವೆ ಏಕೆ ಗಳತಿ?||ಽಽಽ

ಇಬ್ಬನಿ ಹನಿಯಲ್ಲಿ
ಕೆಂದಾವರೆ ಮೊಗದಲ್ಲಿ
ಚುಮು ಚುಮು ಮಾಗಿಯ ತಂಪು
ನಿನ್ನ ಕೆಳೆಯಲ್ಲಿಽಽಽ
ಎಲ್ಲಿ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡ ಬಾರದೆ ಒಮ್ಮೆ||ಽಽಽ

ಸಾಕು ಸಾಕಲೆ-
ಜಾಣೆ ಕೇಳೆ ನನ್ನಾಣೆ
ನಿನ್ನಲ್ಲಿಹುದೇ ನನ್ನ ಮನಸು
ಕಾಡುವೆ ಏಕೆ ಗೆಳತಿ?||ಽಽಽ

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||
ಎಲ್ಲಿ ನೋಡುತಿರುವೆ ಗೆಳತಿ||
ಇಲ್ಲಿರುವೆ ನಾನೆಂತು ಕೇಳಲೆ
ಕರುಣೆ ತೋರೆಲೆ ಗೆಳತಿ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||ಽಽಽ

ಸುರಿವ ಮಳೆಯ ನರ್‍ತನದಲಿ
ಗುಡುಗು ಸಿಡಿಲ ನಡುವೆ
ಮಿಂಚಾಗಿ ಬಂದೆ ನೀನು
ಮನದಾಳದ ಮಾತನರಿತು
ಮೆನಯ ಮಾಡಿ ನಿಂದೆ ನೀನು
ಕಾಡುವೆ ಏಕೆ? ಸುಮ್ಮನೆ ಇತ್ತ
ನನ್ನತ್ತ ನೋಡಬಾರದೆ ಒಮ್ಮೆ

ಯಾವ ಘಳಿಗೆಯೋ ತಿಳಿಯದು
ಬೆಳಕಾಗಿ ಬಂದೆ ನನ್ನ ರೂಪವೆ
ಮೈತಳೆದಿದೆ ನನ್ನಿ ಅಂಗಳ
ಕಾಡುವೆ ಏಕೆ ಸುಮ್ಮನೆ?
ಇತ್ತ ನನ್ನತ್ತ ನೋಡಬಾರದೆ ಒಮ್ಮೆ

ಗೆಳತಿ ನನ್ನ ಬಾಳಿನ ಒಡತಿ
ನಾನೆಂತು ಕೇಳಲೆ ಬಳಿಗೆ ಬಾರದೆ
ಕರುಣೆ ತೋರದೆ ಎಲ್ಲಿ ನೋಡುತಿರುವೆ
ನಾನಿರಲು ಇತ್ತ ನೀನಿರಲು ಅತ್ತ
ನಾನೆಂತು ಕೇಳಲೆ ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ಗೆಳತಿ
ನನ್ನ ಒಡತಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...