Home / ಕವನ / ಕವಿತೆ / ಮೌನ ಕದಡಿದೆ

ಮೌನ ಕದಡಿದೆ

ಮೌನ ಕದಡಿದೆ
ಮಾತು ಹೊರಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ

ಲಜ್ಜೆ ಏತಕೋ
ಮಜ್ಜಿಗೆಯೊಳಗಿನ
ಬೆಣ್ಣೆಯಂತೆ ಕರಗಿದೆ
ಎನ್ನ ಮನದರಸಿ ನೀನಲ್ಲವೆ ಗೆಳತಿ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಕಣ್ಣನೋಟದಲ್ಲೆ
ನಿನ್ನ ಮಾತು ಮೌನ ತಳೆದಿದೆ
ಮತ್ತೆ ಒಲವಿನಾ ಕರೆಗೆ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಚಿತ್ತಾರ ಬರೆದ ಕುಂಚ
ನಿನ್ನ ರೂಪವ ನೋಡಿ
ನಾಚಿ ನನ್ನತ್ತ ಕಲೆಯ ಸಿರಿಯ ಹೊಗಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ||

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ
ಕಾಡುವೆ ಏಕೆ ಗಳತಿ?||ಽಽಽ

ಇಬ್ಬನಿ ಹನಿಯಲ್ಲಿ
ಕೆಂದಾವರೆ ಮೊಗದಲ್ಲಿ
ಚುಮು ಚುಮು ಮಾಗಿಯ ತಂಪು
ನಿನ್ನ ಕೆಳೆಯಲ್ಲಿಽಽಽ
ಎಲ್ಲಿ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡ ಬಾರದೆ ಒಮ್ಮೆ||ಽಽಽ

ಸಾಕು ಸಾಕಲೆ-
ಜಾಣೆ ಕೇಳೆ ನನ್ನಾಣೆ
ನಿನ್ನಲ್ಲಿಹುದೇ ನನ್ನ ಮನಸು
ಕಾಡುವೆ ಏಕೆ ಗೆಳತಿ?||ಽಽಽ

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||
ಎಲ್ಲಿ ನೋಡುತಿರುವೆ ಗೆಳತಿ||
ಇಲ್ಲಿರುವೆ ನಾನೆಂತು ಕೇಳಲೆ
ಕರುಣೆ ತೋರೆಲೆ ಗೆಳತಿ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||ಽಽಽ

ಸುರಿವ ಮಳೆಯ ನರ್‍ತನದಲಿ
ಗುಡುಗು ಸಿಡಿಲ ನಡುವೆ
ಮಿಂಚಾಗಿ ಬಂದೆ ನೀನು
ಮನದಾಳದ ಮಾತನರಿತು
ಮೆನಯ ಮಾಡಿ ನಿಂದೆ ನೀನು
ಕಾಡುವೆ ಏಕೆ? ಸುಮ್ಮನೆ ಇತ್ತ
ನನ್ನತ್ತ ನೋಡಬಾರದೆ ಒಮ್ಮೆ

ಯಾವ ಘಳಿಗೆಯೋ ತಿಳಿಯದು
ಬೆಳಕಾಗಿ ಬಂದೆ ನನ್ನ ರೂಪವೆ
ಮೈತಳೆದಿದೆ ನನ್ನಿ ಅಂಗಳ
ಕಾಡುವೆ ಏಕೆ ಸುಮ್ಮನೆ?
ಇತ್ತ ನನ್ನತ್ತ ನೋಡಬಾರದೆ ಒಮ್ಮೆ

ಗೆಳತಿ ನನ್ನ ಬಾಳಿನ ಒಡತಿ
ನಾನೆಂತು ಕೇಳಲೆ ಬಳಿಗೆ ಬಾರದೆ
ಕರುಣೆ ತೋರದೆ ಎಲ್ಲಿ ನೋಡುತಿರುವೆ
ನಾನಿರಲು ಇತ್ತ ನೀನಿರಲು ಅತ್ತ
ನಾನೆಂತು ಕೇಳಲೆ ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ಗೆಳತಿ
ನನ್ನ ಒಡತಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...