Home / ಕವನ / ಕವಿತೆ / ಮೌನ ಕದಡಿದೆ

ಮೌನ ಕದಡಿದೆ

ಮೌನ ಕದಡಿದೆ
ಮಾತು ಹೊರಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ

ಲಜ್ಜೆ ಏತಕೋ
ಮಜ್ಜಿಗೆಯೊಳಗಿನ
ಬೆಣ್ಣೆಯಂತೆ ಕರಗಿದೆ
ಎನ್ನ ಮನದರಸಿ ನೀನಲ್ಲವೆ ಗೆಳತಿ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಕಣ್ಣನೋಟದಲ್ಲೆ
ನಿನ್ನ ಮಾತು ಮೌನ ತಳೆದಿದೆ
ಮತ್ತೆ ಒಲವಿನಾ ಕರೆಗೆ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಚಿತ್ತಾರ ಬರೆದ ಕುಂಚ
ನಿನ್ನ ರೂಪವ ನೋಡಿ
ನಾಚಿ ನನ್ನತ್ತ ಕಲೆಯ ಸಿರಿಯ ಹೊಗಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ||

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ
ಕಾಡುವೆ ಏಕೆ ಗಳತಿ?||ಽಽಽ

ಇಬ್ಬನಿ ಹನಿಯಲ್ಲಿ
ಕೆಂದಾವರೆ ಮೊಗದಲ್ಲಿ
ಚುಮು ಚುಮು ಮಾಗಿಯ ತಂಪು
ನಿನ್ನ ಕೆಳೆಯಲ್ಲಿಽಽಽ
ಎಲ್ಲಿ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡ ಬಾರದೆ ಒಮ್ಮೆ||ಽಽಽ

ಸಾಕು ಸಾಕಲೆ-
ಜಾಣೆ ಕೇಳೆ ನನ್ನಾಣೆ
ನಿನ್ನಲ್ಲಿಹುದೇ ನನ್ನ ಮನಸು
ಕಾಡುವೆ ಏಕೆ ಗೆಳತಿ?||ಽಽಽ

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||
ಎಲ್ಲಿ ನೋಡುತಿರುವೆ ಗೆಳತಿ||
ಇಲ್ಲಿರುವೆ ನಾನೆಂತು ಕೇಳಲೆ
ಕರುಣೆ ತೋರೆಲೆ ಗೆಳತಿ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||ಽಽಽ

ಸುರಿವ ಮಳೆಯ ನರ್‍ತನದಲಿ
ಗುಡುಗು ಸಿಡಿಲ ನಡುವೆ
ಮಿಂಚಾಗಿ ಬಂದೆ ನೀನು
ಮನದಾಳದ ಮಾತನರಿತು
ಮೆನಯ ಮಾಡಿ ನಿಂದೆ ನೀನು
ಕಾಡುವೆ ಏಕೆ? ಸುಮ್ಮನೆ ಇತ್ತ
ನನ್ನತ್ತ ನೋಡಬಾರದೆ ಒಮ್ಮೆ

ಯಾವ ಘಳಿಗೆಯೋ ತಿಳಿಯದು
ಬೆಳಕಾಗಿ ಬಂದೆ ನನ್ನ ರೂಪವೆ
ಮೈತಳೆದಿದೆ ನನ್ನಿ ಅಂಗಳ
ಕಾಡುವೆ ಏಕೆ ಸುಮ್ಮನೆ?
ಇತ್ತ ನನ್ನತ್ತ ನೋಡಬಾರದೆ ಒಮ್ಮೆ

ಗೆಳತಿ ನನ್ನ ಬಾಳಿನ ಒಡತಿ
ನಾನೆಂತು ಕೇಳಲೆ ಬಳಿಗೆ ಬಾರದೆ
ಕರುಣೆ ತೋರದೆ ಎಲ್ಲಿ ನೋಡುತಿರುವೆ
ನಾನಿರಲು ಇತ್ತ ನೀನಿರಲು ಅತ್ತ
ನಾನೆಂತು ಕೇಳಲೆ ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ಗೆಳತಿ
ನನ್ನ ಒಡತಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...