Home / ಲೇಖನ / ವಿಜ್ಞಾನ / ರಾಷ್ಟ್ರ ಪಕ್ಷಿ: ನವಿಲು

ರಾಷ್ಟ್ರ ಪಕ್ಷಿ: ನವಿಲು

ನವಿಲು ನಮ್ಮ ರಾಷ್ಟ್ರಪಕ್ಷಿ. ನವಿಲು ತನ್ನ ಸೌಂದರ್‍ಯ, ಬಣ್ಣ ಹಾಗೂ ನಡೆಗಳಿಗೆ ಪ್ರಸಿದ್ಧಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಸುಂದರವಾದ ಪಕ್ಷಿ.

ಹೆಣ್ಣು ನವಿಲಿಗಿಂತ ಗಂಡು ನವಿಲು ಹೆಚ್ಚು ಸುಂದರ. ಹಾಲು ಬಣ್ಣದ ಹೊಳಪಿನ ಮುಖ, ನೀಲಿಬಣ್ಣದ ತಲೆ, ಅದರ ಮೇಲೆ ರಾಜಠೀವಿ ಮೆರೆಸುವ ತುರಾಯಿ, ಕೆಂಪುಮಿಶ್ರಿತ ನಸುಹಳದಿ ಬಣ್ಣದ ರೆಕ್ಕೆ, ಬೆನ್ನಮೇಲಿನ ಹಸಿರು, ನೀಲಿ ಬಣ್ಣದ ಉದ್ದದ ಗರಿಗಳು, ಆ ಗರಿಗಳ ಮೇಲೆ ಕಣ್ಣಿನ ಹಾಗೆ ಕಾಣುವ ದುಂಡಾಕಾರದ ಚುಕ್ಕೆಗಳು.

ಹೆಣ್ಣು ನವಿಲು ಗಂಡು ನವಿಲಿಗಿಂತ ಚಿಕ್ಕದಾಗಿರುತ್ತದೆ. ಬಣ್ಣವೂ ಕೂಡ ಮಸುಕಾಗಿರುತ್ತದೆ. ಗಂಡು ನವಿಲು ಒಂದೂವರೆ ಮೀಟರ್‍ ಉದ್ದವಾಗಿದ್ದರೆ, ಹೆಣ್ಣು ನವಿಲಿನ ಉದ್ದ ಒಂದು ಮೀಟರ್‌ಗಿಂತ ಕಡಿಮೆ ಹಾಗೂ ಗಂಡು ನವಿಲು ೫ ಕೆ.ಜಿ. ಭಾರವಿದ್ದರೆ ಹೆಣ್ಣು ನವಿಲಿನ ಭಾರ ೫ ಕೆ.ಜಿ.ಗಿಂತ ಕಡಿಮೆ. ಸಾಮಾನ್ಯವಾಗಿ ನವಿಲುಗಳು ೨೦ ವರ್‍ಷಗಳವರೆಗೆ ಬದುಕುತ್ತವೆ.

ಹೆಣ್ಣು ನವಿಲು ಮೊಟ್ಟೆಯಿಡುವ ಕಾಲ ಫೆಬ್ರುವರಿಯಿಂದ ಆಗಸ್ಟ್‌ ತಿಂಗಳವರೆಗೆ. ಈ ಕಾಲದಲ್ಲಿ ಹೆಣ್ಣು ನವಿಲು ನೆಲದಲ್ಲಿ ಗೂಡು ಕಟ್ಟಿ ೧೦ ಬಿಳಿಯ ಮೊಟ್ಟೆಗಳನ್ನಿಡುತ್ತದೆ. ಅದು ೮ ತಿಂಗಳವರೆಗೆ ತನ್ನ ಮರಿಗಳನನ್ನು ಪೋಷಿಸುತ್ತದೆ. ನವಿಲುಮರಿಗೆ ತನ್ನ ಮೂರನೆಯ ವರ್‍ಷದಲ್ಲಿ ಗರಿ ಬೆಳೆಯಲಾರಂಭಿಸುತ್ತದೆ.

ಥೈಲೆಂಡ್, ಜಾವಾ, ಬರ್‍ಮಾ ಮತ್ತು ಮಲಯ ದೇಶಗಳಲ್ಲಿರುವ ನವಿಲುಗಳು ನಮ್ಮ ದೇಶದ ನವಿಲಿಗಿಂತ ಭಿನ್ನ. ಅವುಗಳ ಬಣ್ಣ ಹಸಿರು, ಉದ್ದವಾದ ಕಾಲುಗಳು ಅವುಗಳಿಗಿರುತ್ತವೆ.

ಮಳೆಗಾಲದ ಮೋಡಗಳನ್ನು ನೋಡಿ ನವಿಲಿಗೆ ಬಹಳ ಸಂತೋಷವಾಗುತ್ತದೆ. ಆಗ ಅದು (ಗಂಡು ನವಿಲು) ಹೆಣ್ಣು ನವಿಲಿನ ಮುಂದೆ ಕುಣಿಯಲು ಅನುವಾಗುತ್ತದೆ. ತನ್ನ ಬಣ್ಣ ಬಣ್ಣದ ಗರಿಗಳನ್ನು ಬಿಲ್ಲಿನಾಕಾರದಲ್ಲಿ ಕೆದರಿಕೊಂಡು ತನ್ನ ಸೌಂದರ್‍ಯವನ್ನು ಪ್ರದರ್‍ಶಿಸುತ್ತದೆ. ಗರಿಗಳನ್ನು ಪಟಪಟನೆ ಬಡಿದು ಅವುಗಳನ್ನು ಇನ್ನಷ್ಟು ಹರವಿ ಹೆಣ್ಣು ನವಿಲಿನಮನಸ್ಸನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತದೆ. ಈ ಮಯೂರ ನೃತ್ಯ ಮಧ್ಯ ಜನವರಿಯಿಂದ ಡಿಸೆಂಬರ್‌ವರೆಗೆ ನಡೆಯುತ್ತದೆ. ನವಿಲಿನ ಈ ನೃತ್ಯ ೧೫ ರಿಂದ ೩೫ ನಿಮಿಷಗಳವರೆಗೂ ಸಾಗಬಹುದು.

ನವಿಲು ತನ್ನ ಶತ್ರುಗಳ ನಡುವೆ ಸಿಕ್ಕಿಹಾಕಿಕೊಂಡಾಗಲೂ ಕ್ರೋಧದಿಂದ ಕುಣಿದು ವೈರಿಯನ್ನು ತಲ್ಲಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಸಮಯ ಸಾಧಿಸಿ ಅಪಾಯದಿಂದ ಪಾರಾಗುತ್ತದೆ. ಅದೂ ಅಲ್ಲದೆ ನವಿಲು ತನ್ನ ಮಕ್ಕಳ ಹಾಗೂ ತನ್ನ ಗೂಡಿನ ಗಡಿಯ ರಕ್ಷಣೆಗಾಗಿ ಸಮಯ ಬಂದಾಗ ಗರಿಹರವಿ ನರ್‍ತಿಸುತ್ತದೆ.

ನವಿಲುಗಳು ಅಡವಿಯಲ್ಲಿ ಗುಂಪು-ಗುಂಪಾಗಿ ವಾಸಿಸುತ್ತವೆ. ಅವು ರಾತ್ರಿಗಳನ್ನು ಮರಗಳ ಮೇಲೆ ಕಳೆಯುತ್ತವೆ.

ಕ್ರಿಮಿ ಕೀಟಗಳು, ಬೀಜ ಧಾನ್ಯಗಳು, ಹಾವು, ಉರಗಗಳು, ಹಲ್ಲಿಗಳು, ಮಿಡತೆಗಳು ಮತ್ತು ಕಂಬಳಿಹುಳಗಳು ನಿವಿಲಿನ ಆಹಾರಗಳಾಗಿವೆ.

ನವಿಲು ಬಹಳ ಉಪಯುಕ್ತ ಪ್ರಾಣಿ. ಅದರ ರೆಕ್ಕೆಗಳಿಂದ ನಿರ್‍ಮಿತವಾದ ಬೀಸಣಿಗೆಗಳು ಅತ್ಯಂತ ಆಕರ್‍ಷಕ. ನವಿಲು ಬೆಳೆಗಳನ್ನು ನಾಶ ಮಾಡುವ ಕ್ರಿಮಿಕೀಟಗಳನ್ನು ತಿಂದು ಬೆಳೆಗಳ ರಕ್ಷಣೆ ಮಾಡುತ್ತದೆ.

ನವಿಲು ಮಾಂಸವನ್ನು ಕೆಲ ಜನರು ತಿನ್ನುತ್ತಾರೆ; ಅಲ್ಲದೆ ಅದು ಔಷಧಕ್ಕೂ ಉಪಯುಕ್ತ. ಈ ಎಲ್ಲ ಉಪಯುಕ್ತತೆಯಿಂದಾಗಿ ಕೆಲವರು ನವಿಲುಗಳ ಕಳ್ಳ ಬೇಟೆಯಲ್ಲಿ ತೊಡಗಿದ್ದಾರೆ. ಆದ್ದರಿಂದಾಗಿ ನವಿಲುಗಳ ಸಂತತಿ ನಶಿಸಿ ಹೋಗುವ ಹಂತದಲ್ಲಿದೆ. ಗುಂಪು-ಗುಂಪಾಗಿದ್ದ ಸ್ಥಳಗಲ್ಲಿ ಈಗ ಒಂದೋ-ಎರಡೋ ನವಿಲುಗಳು ಕಾಣಿಸುತ್ತಿವೆ. ಪರಿಣಾಮವಾಗಿ ನಮ್ಮ ನಿಸರ್‍ಗದ ಚೆಲುವಿಗೆ ಭಂಗ ಬರಗೊಡಗಿದೆ. ಹುಳುಹುಪ್ಪಟೆಗಳ ನಿರ್‍ಮೂಲನೆಯಲ್ಲಿ ನಮ್ಮ ರೈತರಿಗಾಗುತ್ತಿದ್ದ ಸಹಾಯಕ್ಕೆ ಈಗ ಸಂಚಕಾರ ಒದಗುತ್ತಿದೆ. ಇದನ್ನೆಲ್ಲ ಗಮನಿಸಿಯೇ ಸರ್‍ಕಾರ ಅವುಗಳ ಬೇಟೆಯನ್ನು ಅಪರಾಧವೆಂದು ಸಾರಿದೆ. ರಾಷ್ಟ್ರೀಯ ಪಕ್ಷಿ ನವಿಲನ್ನು ರಕ್ಷಿಸುವುದು ನಮ್ಮೆಲ್ಲರ ಕರ್‍ತವ್ಯವಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...