ಮರ

ಎಲೆ ಹಸಿರು ಹೂವು ಮುಡಿದು
ಆಳ ನಿರಾಳಕ್ಕಿಳಿದ ಬೇರುಗಳ
ಹರವಿ ಹರಡಿ ಹಾಸಿ ಬೀಸಿದ
ತಂಗಾಳಿ ಬಯಲ ಬಾನ ತುಂಬ
ತೇಲಿ ತೇಲಿಸಿದೆ ಹಾಸು ನಿಂತಮರ.

ಹನಿಸುತ್ತದೆ ವರ್ಷವೈಭವದ ಸೊಗಸು
ನಲಿದು ಒಲಿದು ಬಂದ ದುಂಬಿ ಝೇಂಕಾರ
ಗಂಧ ಸುಗಂಧ ಮೀರಿ ಮಂದಸ್ಮಿತ
ಬೀರಿಗಿಳಿದ ಪ್ರೀತಿ ಒಲವು ರೋಮಾಂಚನ
ಚಿಗುರು ಕುಸುಮಿತ ಪುಳಕಿತ ನನ್ನೊಳಗಿನ ಹಾಡು.

ಮೇಲೇರುತ್ತವೆ ಕಿರಣಗಳು ಹಿತ ಕನಸು
ಮೂಟೆಗಳು ಹೊತ್ತ ಮೋಡ ರಾಶಿ ಪ್ರಾಣ
ಶಕ್ತಿ ಜೀವರಸ ಹೀರಿ ಕಡಲು ತೇಲಿದ
ಶುಭ ಸಂದೇಶ ಅಲೆಗಳು ಬೀಸುಲಯ
ಘಮ್ಮೆಂದು ಚಿಗುರಿ ಸೂಸಿನಲಿದ ಭುವನದ ಭಾಗ್ಯ ನನ್ನ ಧಾಟಿ.

ಬೇರುಗಳಿಗಿಳಿದ ಜೀವ ರಸಗಾಳಿಜಲ
ಧಮನಿ ಧಮನಿಗಳಲಿ ಅರಳಿ ಸೌರಭಿ
ಗೂಡು ತುಂಬಾ ಚಿಲಿಪಿಲಿ ಗಾನ ಭಾಗ್ಯ
ಪ್ರಾಣ ಪರಿ ಒಡನಾಟ ಪರಿ ಬಿಚ್ಚಿ ಲಹರಿ
ನನ್ನಲ್ಲಿ ಒಂದಾದ ನಿಮ್ಮ ಬದುಕ ಪ್ರಾರ್ಥನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಮ್ಮದಿಗೂ ಬಿಡದ….
Next post ಸ್ನೇಹ ಹಸ್ತ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys