ಪಲ್ಲಟ

ಸೂರ್ಯ ಸೃಷ್ಠಿ ದೃಷ್ಠಿಯಲಿ ಬಿಂಬ
ಎಳಸು ಹಾಸುಬೀಸು ಕೊನರಿದ ಮಿಂಚು
ಸಂಚಾರ ನರನಾಡಿಗಳಲ್ಲಿ ಕೆಂಪು ಕಿರಣಗಳು
ಎಲ್ಲೆಲ್ಲೂ ಹರಿದ ಆನಂದ ಶಾಶ್ವತ
ಮರಳು ರಾಶಿಯಲ್ಲೂ ಮರೀಚಿಕೆ.

ಸದ್ದುಗದ್ದಲ ಇಲ್ಲದೇ ಆತ ಬಂದಾಗ
ಎದೆಯ ಗೂಡಿನಲಿ ಹಕ್ಕಿ ಚಿಲಿಪಿಲಿ
ತೇಲಿ ತೇಲಿ ಮುಗಿಲ ಮೇಲೆ ಗಿಳಿವಿಂಡು
ಮನಸ್ಸು ಅರಳಿದ ಮುಂಜಾನೆ ಎಲ್ಲಾ
ವ್ಯವಹಾರಗಳು ಸೋಲು ಕೂಡಾ ಹೊಸಪಾಟ.

ನದಿ ಹಳ್ಳಕೊಳ್ಳ ಹರಿದ ಜೀವಜಲ ಫಳಫಳ
ಹನಿಹನಿಗಳ ಸೆಳತ ಬಯಕೆ ಚಲನೆ
ಸುತ್ತಲೂ ನೆರೆದ ಜಗದ ಜಾತ್ರೆ ಎಲ್ಲೆಲ್ಲೂ
ಹೆರಿಗೆ ಮನೆ ಕೆಂಪು ನೀರು ಹರಿದು
ಭಾನು ಸೇರಿ ಸುತ್ತಿ ಸುಳಿದ ಕಪ್ಪುಮೋಡಗಳಾಟ.

ಸುಂದರ ಸೃಷ್ಠಿಗೆ ರಾಹುಕೇತುಗಳಕಾಟ
ರಾತ್ರಿ ಕತ್ತಲೆ ಸರಿದು ಬೆಳಕಿನಾಟ
ಬಂಗಾರದ ಬಯಲು ತುಂಬ ಹಸಿರು
ಉತ್ಸಾಹದ ಉರುಟಣಿಗೆ ದುಂಬಿಯ ಹಾಡು
ಉಗಾದಿಯ ನವ ಉಲ್ಲಾಸ ಎಲ್ಲರ ಅಂಗಳಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸ್ತೆ
Next post ಮೌನಕ್ಕೆ ಭಾಷೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys