ಈ ಮಾತು ಕೇಳರಿ ಐಸುರ

ಈ ಮಾತು ಕೇಳರಿ ಐಸುರ
ಮೊಹರಮ್ ರಿವಾಯತೋ || ಪ ||

ರಾಚಾಧಿರಾಜ ಸಮರ ಭೂಮಿ
ಕಂದಿ ಕುಂದಿತೋ || ೧ ||

ಮದೀನ ಮಕ್ಕಾ ಶಾರದಿ
ಮಹಾ ಕೌತುಕಾದೀತೋ
ಆ ದಿನದ ಕತ್ತಲ ಕಾಳಗ
ಕರ್ಬಲ ಶಹಾದತೋ || ೨ ||

ಕಿಲ್ಲೆಸುತ್ತವಾದಲಾವಿ
ಡೋಲಿ ಮೇಲಕೆದ್ದಿತೋ
ಭೂತಳದಿ ಭಾನುಕಿರಣಕೆ
ಧೂಮಕೇತು ಮೂಡಿತೋ || ೩ ||

ಕಸವಿಸಿಗೆ ಸೂರ್ಯಮಂಡಲ
ಹಸರಂಗಿ ತೊಟ್ಟಿತೋ
ಹೆಸರಾದ ಏಸುಕ್ರಿಸ್ತರಿಗೆ
ಪಟ್ಟಗಟ್ಟಿತೋ || ೪ ||

ಭೂನಾಥ ಶಿಶುವಿನಾಳಧೀಶಗೆ
ತಾನೇ ತೋರಿತೋ
ಶುಭನಾಮ ಸಂವತ್ಸರಾ
ಸೂಚನೆಗೆ ಸಾರಿತೋ || ೫ ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಾರಿ, ಕಣ್ಣು ತೆರೆ
Next post ಸಣ್ಣ ಬಾಲಕರೋ ಹನೀಪಸಾಹೇಬರೋ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys