Home / ಕವನ / ಕವಿತೆ / ಗಾಂಧಾರಿ, ಕಣ್ಣು ತೆರೆ

ಗಾಂಧಾರಿ, ಕಣ್ಣು ತೆರೆ

ಕಣ್ಣಿಲ್ಲದಿರುವುದಕ್ಕೆ
ಇದ್ದೂ ಇಲ್ಲವಾಗುವುದಕ್ಕೆ
ಬಹಳ ವ್ಯತ್ಯಾಸ
ಗಾಂಧಾರಿ, ಕಣ್ಣು ತೆರೆ
ನೂರು ಕಣ್ಣಿನ ಕ್ಷತಿಜ-
ದಾಟದೂಟಕ್ಕೆ ನೀನೂ ಬೆರೆ

ಈ ಕಣ್ಣುಪಟ್ಟಿ ಕಿತ್ತೆಸೆ
ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ
ಕಣ್ಣಾರೆ ನೋಡು
ಭ್ರಮೆಯ ಭವ್ಯವನ್ನೆಲ್ಲ
ದೃಷ್ಟಾಂತ ಅನುಭವಿಸು

ತಾಯೀ ಕಣ್ಣು ತೆರೆದಾಗ
ನೀನು ಬಹುತೇಕ ನೋಡುವುದು ಕುರುಡರನ್ನು
ಅಥವಾ
ನೀನು ನೋಡುವವರಲ್ಲಿ ಕುರುಡರು ಜಾಸ್ತಿ
ಈ ಕಣ್ಣಿರುವ ಕುರುಡರು
ಕುರುಕುಲದ ಆಸ್ತಿ

ಬಹುಕಾಲ ಕಣ್ಣು ಮುಚ್ಚಿದ ನಿನಗೆ
ಬೆಳಕು ಅಸಹ್ಯವಾದೀತು
ಒಪ್ಪಲೇ ಬೇಕಾದ ಬದುಕಿನ ಸತ್ಯ
ಕಠೋರವೂ ಅನಿಸೀತು
ಆದರೂ ಆ ತುತ್ತು
ನುಂಗುವುದು ಅನಿವಾರ್ಯ

ದೇವರ ಮುಂದಿನ ಸೊಡರಿನ ತುಪ್ಪ
ಖಾಲಿಯಾಗುತ್ತ ಬಂತು
ನೆಣೆ ಕಪ್ಪಾಯಿತು ನೋಡು
ಇನ್ನು ತುಪ್ಪ ಹಾಕಿದರೂ ಉರಿಯುವುದು ಕಷ್ಟ

ಅದೇ ಸೊಡರಿಗೆ ಇನ್ನೊಂದು ನೆಣೆ
ಇನ್ನಷ್ಟು ತುಪ್ಪ
ಹಾಕಿ ಉರಿಸುವುದು ಅನಾಯಸದ ಕೆಲಸ
ಅಷ್ಟೆಲ್ಲ ಮಾಡುವ ಮೊದಲು
ನೀನು ಕಣ್ಣು ತೆರೆಯಲೇಬೇಕು

ತೆರೆದರೂ ಮುಚ್ಚುವುದುಂಟಲ್ಲ-
ಉರಿದರೂ ಆರುವುದುಂಟಲ್ಲ-
ಕೂಡಿದರೂ ಕಳೆಯುವುದುಂಟಲ್ಲ-
ಅದು ಬೇರೆ ಮಾತು
ಬೇರೆ ಸಂದರ್ಭ
*****

 

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...