ಗಾಂಧಾರಿ, ಕಣ್ಣು ತೆರೆ

ಕಣ್ಣಿಲ್ಲದಿರುವುದಕ್ಕೆ
ಇದ್ದೂ ಇಲ್ಲವಾಗುವುದಕ್ಕೆ
ಬಹಳ ವ್ಯತ್ಯಾಸ
ಗಾಂಧಾರಿ, ಕಣ್ಣು ತೆರೆ
ನೂರು ಕಣ್ಣಿನ ಕ್ಷತಿಜ-
ದಾಟದೂಟಕ್ಕೆ ನೀನೂ ಬೆರೆ

ಈ ಕಣ್ಣುಪಟ್ಟಿ ಕಿತ್ತೆಸೆ
ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ
ಕಣ್ಣಾರೆ ನೋಡು
ಭ್ರಮೆಯ ಭವ್ಯವನ್ನೆಲ್ಲ
ದೃಷ್ಟಾಂತ ಅನುಭವಿಸು

ತಾಯೀ ಕಣ್ಣು ತೆರೆದಾಗ
ನೀನು ಬಹುತೇಕ ನೋಡುವುದು ಕುರುಡರನ್ನು
ಅಥವಾ
ನೀನು ನೋಡುವವರಲ್ಲಿ ಕುರುಡರು ಜಾಸ್ತಿ
ಈ ಕಣ್ಣಿರುವ ಕುರುಡರು
ಕುರುಕುಲದ ಆಸ್ತಿ

ಬಹುಕಾಲ ಕಣ್ಣು ಮುಚ್ಚಿದ ನಿನಗೆ
ಬೆಳಕು ಅಸಹ್ಯವಾದೀತು
ಒಪ್ಪಲೇ ಬೇಕಾದ ಬದುಕಿನ ಸತ್ಯ
ಕಠೋರವೂ ಅನಿಸೀತು
ಆದರೂ ಆ ತುತ್ತು
ನುಂಗುವುದು ಅನಿವಾರ್ಯ

ದೇವರ ಮುಂದಿನ ಸೊಡರಿನ ತುಪ್ಪ
ಖಾಲಿಯಾಗುತ್ತ ಬಂತು
ನೆಣೆ ಕಪ್ಪಾಯಿತು ನೋಡು
ಇನ್ನು ತುಪ್ಪ ಹಾಕಿದರೂ ಉರಿಯುವುದು ಕಷ್ಟ

ಅದೇ ಸೊಡರಿಗೆ ಇನ್ನೊಂದು ನೆಣೆ
ಇನ್ನಷ್ಟು ತುಪ್ಪ
ಹಾಕಿ ಉರಿಸುವುದು ಅನಾಯಸದ ಕೆಲಸ
ಅಷ್ಟೆಲ್ಲ ಮಾಡುವ ಮೊದಲು
ನೀನು ಕಣ್ಣು ತೆರೆಯಲೇಬೇಕು

ತೆರೆದರೂ ಮುಚ್ಚುವುದುಂಟಲ್ಲ-
ಉರಿದರೂ ಆರುವುದುಂಟಲ್ಲ-
ಕೂಡಿದರೂ ಕಳೆಯುವುದುಂಟಲ್ಲ-
ಅದು ಬೇರೆ ಮಾತು
ಬೇರೆ ಸಂದರ್ಭ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೀನ ಖೇಲ ಮದೀನದಲಾವಿ ನೋಡ
Next post ಈ ಮಾತು ಕೇಳರಿ ಐಸುರ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys