ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ

Hrudayaಪ್ರಿಯ ಸಖಿ,
ನಮ್ಮ ಸಮಾಜದಲ್ಲಿದ್ದ ಉನ್ನತ ಮೌಲ್ಯಗಳು ನಿರಂತರವಾಗಿ ಅಧೋಗತಿಗಿಳಿಯುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇನು? ಹುಡುಕಹೊರಟರೆ ಸಾವಿರಾರು ಕಾರಣಗಳು ಸಿಕ್ಕಬಹುದು. ಆದರೆ ಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಹೊಳೆದಿರುವ ಒಂದೇ ಒಂದು ಮುಖ್ಯ ಕಾರಣ ನೋಡು.

ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಕವಿಯ ಭಾವನೆ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲವೇ ಸಖಿ? ನಮ್ಮಗಳ ನಡುವೆ ಪ್ರೀತಿ ಇಲ್ಲದಿರುವುದೇ ಈ ಎಲ್ಲ ಅಧೋಗತಿಗೆ ಕಾರಣವಲ್ಲವೇ ಪ್ರೀತಿಯೊಂದಿದ್ದರೆ ಬೇರೆಲ್ಲವನ್ನು ಮಾಫಿ ಮಾಡಬಹುದು ಎಂತಹ ಕಷ್ಟವಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೃದಯ ವಿಶಾಲವಾಗುತ್ತಾ ಹೋಗಿ ಎಲ್ಲೆಡೆಯೂ ಪ್ರೀತಿಯನ್ನೇ ತುಂಬಬಹುದು. ಆದರೆ ……… ಅದೇ ಇಲ್ಲದಿದ್ದರೇ? ಮನುಷ್ಯನಾಗಿದ್ದು ಏನು ಪ್ರಯೋಜನ?

ಕವನದ ಕೊನೆಯಲ್ಲಿ ಕವಿ ಅತ್ಯಂತ ಮಾರ್ಮಿಕವಾಗಿ ನಮ್ಮ ಮುಂದೆ ಪ್ರಶ್ನೆಗಳನ್ನಿಡುತ್ತಾರೆ.
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ,
ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿಮತಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ ?
ಹೌದಲ್ಲವೇ ಸಖಿ? ಪ್ರೀತಿ-ಸ್ನೇಹಗಳಿಲ್ಲದೇ ನಮ್ಮ ಹೃದಯ ಬೆಂಗಾಡಾಗುವುದನ್ನು ತಪ್ಪಿಸುವದು ಹೇಗೆ? ಬರೀ ಸ್ವಾರ್ಥ, ಸಂಕುಚಿತ ಮನೋಭಾವ, ದ್ವೇಷ, ಅಸೂಯೆಗಳನ್ನೇ ತುಂಬಿಕೊಂಡು ಬರಡಾಗುತ್ತಿರುವ ನಮ್ಮೆಲ್ಲರ ಹೃದಯಗಳಲ್ಲೂ ಪ್ರೀತಿಯು ಚಿಗುರೊಡೆಯಬೇಕು. ಮರವಾಗಿ ಬೆಳೆಯಬೇಕು. ದಿಗಂತಕ್ಕೇರಿ ನಿಂತು ವಿಶ್ವವ್ಯಾಪಿಯಾಗಬೇಕು. ಆಗ ನಾವೆಲ್ಲರೂ ನಿಜವಾದ ಅರ್ಧದಲ್ಲಿ ಮಾನವರಾಗುತ್ತೇವೆ. ಇಲ್ಲದಿದ್ದರೆ ಭಾವನೆಗಳಿಲ್ಲದ ಬರಿಯ ಯಂತ್ರ ಮಾನವರಾಗುತ್ತೇವೆ! ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮಾ ಅಮ್ಮಾ ಒಂದೇ ಒಂದು
Next post ಕವಿಯ ಕಣ್ಣು ತೆರೆಯುತಿತ್ತು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys