Home / ಕವನ / ಕವಿತೆ / ಅಮ್ಮಾ ನಿನ್ನ ಕೈ ತುತ್ತು

ಅಮ್ಮಾ ನಿನ್ನ ಕೈ ತುತ್ತು

ಅಮ್ಮ ನಿನ್ನ ಕೈ ತುತ್ತು ತಿನ್ನೋ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಹಕ್ಕಿ ಗೂಡು ಸೇರಿ
ಮುದ್ದು ಮರಿಗೆ ಗುಟುಕು ಹಾಕುವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಅಂಬೆಗಾಲ ಇಟ್ಟ ಕಂದ
ಅಮ್ಮನ ಮಡಿಲ ಸೇರಿ ನಲಿವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಅಣ್ಣ ತಮ್ಮನ ಪ್ರೀತಿ
ಅಕ್ಕ ತಂಗೀರು ಜೋಗುಳ ಹಾಡುವ
ಹೊತ್ತು ಸ್ವರ್ಗದ ಬಾಗಿಲು ತರೆದಾಯ್ತು ||

ಗೆಳೆಯ ಗೆಳತೀರು ಕೂಡಿ
ಅಪ್ಪಾಳೆ ತಿಪ್ಪಾಳೆ ರತ್ತೊ ರತ್ತೋ ಆಡಿ ಕುಣಿವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಮುಂಗಾರ ಮಳೆಯಲ್ಲಿ
ಸಿಂಗಾರ ಹೊಲದಲಿ ನೇಸರ ಹೊಂಗಿರಣ ಬೀರುವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಸುಗ್ಗಿ ಕಾಲದ ಮುಂಜಾನೆ ಹರುಷ
ಹಸನಾದ ರೈತನ ಬಾಳಿನ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಹುಣ್ಣಿಮೆ ರಾತ್ರಿಯಲ್ಲಿ ಚೆಂದಾದ ಬೆಳಕಲ್ಲಿ
ಇಂಪಾದ ಗಾನ ಬೆರೆತಾದ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಹಸೆ ಮಣೆ ಏರಿದ ಮದುಮಗಳ ಮೊಗವು
ನಾಚಿದ ಅರಿಶಿನ ಕುಂಕುಮ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಜನನಿ ಜನ್ಮ ಭೂಮಿಯಲಿ
ಹುಟ್ಟಿ ಬೆಳದು ತಾಯ ಸೇವೆ ಮಾಡೋ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಅಮ್ಮಾ ನಿನ್ನ ಕೈ ತುತ್ತು ತಿನ್ನೋ ಹೊತ್ತು
ಸ್ವರ್ಗದ ಬಾಗಿಲು ತೆರೆದಾಯ್ತು ||
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...