ಬಡವ

ಬಗೆ ಬಗೆಯ ಬಯಕೆಗಳು
ಕಾಡದೇ ಇರಲಿಲ್ಲ
ಆದರೂ ನೇಚ್ಯ ನೀನೆಂದು
ಆಸೆ ಭರಣಿಗೆ ಮುಚ್ಚಳವ ಬಿಗಿದೆ

ಗೋರಿ ವಾಕ್ಯದ ಕೆತ್ತುವುದೆಂತು
ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ
ಸದ್ದಿಲ್ಲದೇ ಆವಾಹನ
ಹರೆಯದಲಿ ಹುಡುಗತನದಲಿ
ಹಾದಿ ವಿಪ್ಲವಗಳ ಮರೆತು
ಸೇತುವೆಯಾಗ ಬಯಸಿದೆ
ಒಂಟಿಗಂಭವಾಗುವುದ ಬಿಟ್ಟು

ಆದರೆ ಅತ್ತ ದರಿ ಇತ್ತ ಪುಲಿ
ಸ್ಥಿತ್ಯಂತರ ಸಾಧ್ಯವಾಗದೇ ತ್ರಿಶಂಕುವಾದೆ
ಸವಾಲು ಹಾಕದೆ ಸದ್ದಿಲ್ಲದೇ
ಸರಿಯಬಿಟ್ಟೆ

ಹದಿನಾರಾಣೆಯ ನ್ಯಾಯ
ಹುಡುಕಿದೆ, ಅಸಂಭವ ಎನಿಸಿ
ಸರಳ ರೇಖೆಯಾಗಿಬಿಟ್ಟೆ,
ಇನ್ನೊಂದನ್ನು ಸಂಧಿಸುವ
ಆಸೆ – ರಂಗೋಲಿಯಡಿಯಿಟ್ಟು

ಹಸಿದ ನಿನ್ನ ತೋಳುಗಳಿಗೆಲ್ಲಿ
ಮೇಲೆತ್ತುವ ದರ್ಪ
ಎತ್ತಿಕೊಂಡರೆ ಜೋಕೆ
ಸುತ್ತಿಕೊಳ್ಳಲು ಕಾದಿದೆ
ನಂಜೂರುವ ಸರ್ಪ


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...