ಬಡವ

ಬಗೆ ಬಗೆಯ ಬಯಕೆಗಳು
ಕಾಡದೇ ಇರಲಿಲ್ಲ
ಆದರೂ ನೇಚ್ಯ ನೀನೆಂದು
ಆಸೆ ಭರಣಿಗೆ ಮುಚ್ಚಳವ ಬಿಗಿದೆ

ಗೋರಿ ವಾಕ್ಯದ ಕೆತ್ತುವುದೆಂತು
ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ
ಸದ್ದಿಲ್ಲದೇ ಆವಾಹನ
ಹರೆಯದಲಿ ಹುಡುಗತನದಲಿ
ಹಾದಿ ವಿಪ್ಲವಗಳ ಮರೆತು
ಸೇತುವೆಯಾಗ ಬಯಸಿದೆ
ಒಂಟಿಗಂಭವಾಗುವುದ ಬಿಟ್ಟು

ಆದರೆ ಅತ್ತ ದರಿ ಇತ್ತ ಪುಲಿ
ಸ್ಥಿತ್ಯಂತರ ಸಾಧ್ಯವಾಗದೇ ತ್ರಿಶಂಕುವಾದೆ
ಸವಾಲು ಹಾಕದೆ ಸದ್ದಿಲ್ಲದೇ
ಸರಿಯಬಿಟ್ಟೆ

ಹದಿನಾರಾಣೆಯ ನ್ಯಾಯ
ಹುಡುಕಿದೆ, ಅಸಂಭವ ಎನಿಸಿ
ಸರಳ ರೇಖೆಯಾಗಿಬಿಟ್ಟೆ,
ಇನ್ನೊಂದನ್ನು ಸಂಧಿಸುವ
ಆಸೆ – ರಂಗೋಲಿಯಡಿಯಿಟ್ಟು

ಹಸಿದ ನಿನ್ನ ತೋಳುಗಳಿಗೆಲ್ಲಿ
ಮೇಲೆತ್ತುವ ದರ್ಪ
ಎತ್ತಿಕೊಂಡರೆ ಜೋಕೆ
ಸುತ್ತಿಕೊಳ್ಳಲು ಕಾದಿದೆ
ನಂಜೂರುವ ಸರ್ಪ


Previous post ಪ್ರೀತಿ
Next post ಆಸನಗಳು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…