ಮುಗಿಲಿಗೆ ದಿಗಿಲು ಬಡಿದಿದೆ

ಚಂದ್ರ ಅಣಕಿಸುವಾಗ
ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ
ಬಾಹುಗಳ ಬಂಧಿಸಿ ಬಿಗಿ
ಹಮ್ಮಿನಲಿ ಕುಳಿತುಕೊಳ್ಳುವುದು
ಸರಿಯೆಂದೇನು ಅನಿಸುತ್ತಿಲ್ಲ

ಚಳಿಹೊದ್ದ ರಾತ್ರಿಯಲಿ
ಎದುರಿಗೆ ಬೆಂಕಿಕಾಯಿಸುತ್ತ
ಎದುರು ಬದರು ಕುಳಿತು ಕೊಳ್ಳುವ ಬದಲು
ಮೈಗೆ ಮೈತಾಗಿಸಿ ಕೂಡ್ರಬಹುದಿತ್ತು
ಯಾವುದೋ ಸಂಪ್ರದಾಯಕೆ ಬೆಚ್ಚಿಬಿದ್ದದ್ದು ಸರಿಯಲ್ಲ

ಆ ರಾತ್ರಿಯಲ್ಲಿ ಮರದ ಆಸರೆ ಪಡೆದ ಹಕ್ಕಿಗಳು ಪ್ರಣಯಿಸುತ್ತಿರುವಾಗ
ಮನುಷ್ಯರಾದ ನಾವು
ಬಯಲ ಆಲಯದಲ್ಲಿ
ಅಹಂ ಹೊತ್ತು ಬೆರೆಯದೇ ಹೋದುದು ಸರಿಯೆನಿಸಲಿಲ್ಲ

ಹತ್ತಿರವಿದ್ದೂ ಎದುರಾದಾಗ
ನಾವು ಬಾಚಿತಬ್ಬಿಕೊಳ್ಳದೇ
ಪ್ರೇಮದ ಕನಸುಗಳ ಬಗೆಗೆ
ತುಟಿ ಬಿಚ್ಚದೇ ಹೋದುದ ಕಂಡು
ಮುಗಿಲಿಗೆ ದಿಗಿಲು ಬಡಿಯುವಂತೆ ಮಾಡಿದ್ದು
ಅಷ್ಟು ಸರಿಯಾದ ಕ್ರಮವಾಗಿರಲಿಲ್ಲ

ಜಾರುವ ಯೌವ್ವನವ ಕಟ್ಟಿಹಿಡಿಯಲಾಗದು
ಮೂರ್ಖ ಬಂಧನಗಳ ಮುರಿಯದೇ
ಕಾಲ ಕಳೆದುದು ಸರಿಯಾದ ನಿರ್ಧಾರವಾಗಿರಲಿಲ್ಲ

ಚಂದ್ರ ಚಂದ್ರಮ ಚಕೋರಿಯೇ
ನದಿಯಾಗುವ ಕಡಲಾಗುವ
ದಂಡೆಯಲ್ಲಿ ಕನಸಿನ ಗೂಡು ಕಟ್ಟುವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಂಡರ್
Next post ಮೊದಮೊದಲು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys