ಮುಗಿಲಿಗೆ ದಿಗಿಲು ಬಡಿದಿದೆ

ಚಂದ್ರ ಅಣಕಿಸುವಾಗ
ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ
ಬಾಹುಗಳ ಬಂಧಿಸಿ ಬಿಗಿ
ಹಮ್ಮಿನಲಿ ಕುಳಿತುಕೊಳ್ಳುವುದು
ಸರಿಯೆಂದೇನು ಅನಿಸುತ್ತಿಲ್ಲ

ಚಳಿಹೊದ್ದ ರಾತ್ರಿಯಲಿ
ಎದುರಿಗೆ ಬೆಂಕಿಕಾಯಿಸುತ್ತ
ಎದುರು ಬದರು ಕುಳಿತು ಕೊಳ್ಳುವ ಬದಲು
ಮೈಗೆ ಮೈತಾಗಿಸಿ ಕೂಡ್ರಬಹುದಿತ್ತು
ಯಾವುದೋ ಸಂಪ್ರದಾಯಕೆ ಬೆಚ್ಚಿಬಿದ್ದದ್ದು ಸರಿಯಲ್ಲ

ಆ ರಾತ್ರಿಯಲ್ಲಿ ಮರದ ಆಸರೆ ಪಡೆದ ಹಕ್ಕಿಗಳು ಪ್ರಣಯಿಸುತ್ತಿರುವಾಗ
ಮನುಷ್ಯರಾದ ನಾವು
ಬಯಲ ಆಲಯದಲ್ಲಿ
ಅಹಂ ಹೊತ್ತು ಬೆರೆಯದೇ ಹೋದುದು ಸರಿಯೆನಿಸಲಿಲ್ಲ

ಹತ್ತಿರವಿದ್ದೂ ಎದುರಾದಾಗ
ನಾವು ಬಾಚಿತಬ್ಬಿಕೊಳ್ಳದೇ
ಪ್ರೇಮದ ಕನಸುಗಳ ಬಗೆಗೆ
ತುಟಿ ಬಿಚ್ಚದೇ ಹೋದುದ ಕಂಡು
ಮುಗಿಲಿಗೆ ದಿಗಿಲು ಬಡಿಯುವಂತೆ ಮಾಡಿದ್ದು
ಅಷ್ಟು ಸರಿಯಾದ ಕ್ರಮವಾಗಿರಲಿಲ್ಲ

ಜಾರುವ ಯೌವ್ವನವ ಕಟ್ಟಿಹಿಡಿಯಲಾಗದು
ಮೂರ್ಖ ಬಂಧನಗಳ ಮುರಿಯದೇ
ಕಾಲ ಕಳೆದುದು ಸರಿಯಾದ ನಿರ್ಧಾರವಾಗಿರಲಿಲ್ಲ

ಚಂದ್ರ ಚಂದ್ರಮ ಚಕೋರಿಯೇ
ನದಿಯಾಗುವ ಕಡಲಾಗುವ
ದಂಡೆಯಲ್ಲಿ ಕನಸಿನ ಗೂಡು ಕಟ್ಟುವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಂಡರ್
Next post ಮೊದಮೊದಲು

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…