ಇರುವುದೊಂದೇ ಬಣ್ಣ ಅದು ಹೋಳಾದಾಗ ಕಾಣುವುದು ಏಳು
ಇದಕ್ಕೆ ಏನೇನೋ ಹೆಸರು
ಮಳೆಬಿಲ್ಲು, ಇಂದ್ರ ಧನಸ್ಸು,
ಸೂರೆಗೊಂಡಿದೆ ಇದು ಕವಿ ಜನರ ಮನಸ್ಸು
ಎಷ್ಟೊಂದು ಸುಮಧುರ ಎಂದ್ಯಾರೋ
ಅಂದಿದ್ದಕ್ಕೆ ಹೇಳಿದ ನಮ್ಮೂರ ಧುರಂಧರ
ಪಂಚಾಯ್ತಿ ಚೇರಮನ್;
ಅಯ್ಯೋ ಬಿಡಿ ನಮ್ಮೂರಲ್ಲಿ ಮಳೆ ಬಿಸಿಲು
ಜೋಡಿಯಾದಾಗ ಈ ಬಿಲ್ಲು ಬಹಳ ಕಾಮನ್.
*****