ಬೇಸಿಗೆ

ಕಡುಬಿಸಿಲ ಬೇಸಿಗೆಯ ರೌದ್ರರೂಪದ ಯುರಿಯು
ಝಳವಾಗಿ ಜುಳು ಜುಳನೆ ಇಳಿಯುತಿದೆ
ಜಲಧರನ ರಾಜ್ಯದಾಚೆಯಾ ಗಡಿಯ ರವಿಯು
ಸುರಿಸುವದೊ? ರಸವಲ್ಲ! ಬಿಸಿಲು ಉಸಿರಾಗಿದೆ

ಕೆಂಡದಾ ಹೂವೊಂದು ಟೊಂಗೆ ಗಿಡವಿಲ್ಲದೆಯೇ
ಅರಳಿಹುದು; ತಾಪದಾ ಪರಿಮಳವ ಸುರಿಸಿಹುದು
ತನ್ನ ಬಣ್ಣವ ನೋಡಬಂದಿಹ ಜಗದ ಕಣ್ಣು ನೋಡದೆಯೆ
ಹೊರಳಿಹುದು; ಅನಿತೊಂದು ಆಟೋಪ ಬೀರಿಹುದು

ಮೋಡ ಮಾತೆಯರೆಲ್ಲ ಕಿರಿಯ ಕೂಸುಗಳೊಡನೆ
ಓಟಕಿತ್ತಿಹರು ಕ್ಷಿತಿಜದಾಚೆಯಾ ಗಿರಿಗೆ
ನೆರಳಿಲ್ಲ, ನೆಲವಿಲ್ಲ. ಬಳಲುತೆ, ಪೊರೆವರನರಸುತೆ
ತಾವೇ ನೆರಳನಿತ್ತಿಹರು, ಬಸವಳಿಪ ಭೂದೇವಿಗೆ

ನೆಲ-ಕಲ್ಲು ಕಾದಿಹವು, ಗಿಡ-ಬಳ್ಳಿ ಬಾಯ್ಬಿಡುತಿಹವು
ಊರು-ದಾರಿಗಳೆಲ್ಲ ತಲೆತಿರುಗಿ ಬಿದ್ದಿಹವು
ಅರಿವಿಲ್ಲದಂತಿಹವು ಹಿರಿಕಿರಿಯ ಗಿರಿಗಳೆಲ್ಲವು
ನಲಿದು ನರ್ತಿಸಿದ ಭಂಗಗಳು ಮರೆಯರಸಿಹವು

ನಗೆ‌ಇಲ್ಲ, ನಲವಿಲ್ಲ ಉಲಿವಿಲ್ಲ, ಮೌನ ತುಂಬಿದೆ
ಅನ್ನ-ನೀರನು ಹಸಿದೊಡಲು ಹುಡುಕುತಿದೆ
ರಸಿಕ ರಸ ಸೃಷ್ಟಿ ಹರುಷ ಸುಖವೆಲ್ಲ ಆಳಿದಿದೆ
ಬಿಸಿಲ ಬೇಗೆಯ ನಾಟ್ಯ ಸುತ್ತು ನಡೆದಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಡಪಾಯಿ
Next post ಚಾಕಲೇಟ್

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…