ಹಳ್ಳಿಯ ಜೀವನ

ಎತ್ತಿನ ಕತ್ತಿನ ಗೆಜ್ಜೆಯ ಸರವು
ಮೊರೆಯಿತು ಘಲ್ ಘಲ್ ಘಲ್ಲೆಂದು
ಹಳ್ಳಿಯ ಸರಳದ ಜೀವನ ನೆನೆದು
ಕುಣಿಯಿತು ಎನ್ನೆದೆ ಥೈ ಎಂದು

ಸೂರ್ಯನ ಅಸ್ತಮ ಸಮಯದ ಚೆಲುವು
ಪಚ್ಚೆಯ ಪಯಿರಿನ ನೋಟದ ಸುಖವು
ಹಕ್ಕಿಗಳೋಟದ ಗುಂಪಿನ ಸೊಗವು
ವಿಶ್ವವ ತುಂಬಿದ ಆಗಸವು

ಏರಿಯ ನೀರಿನ ಅಲೆಗಳ ತೆರೆಯು
ಗದ್ದೆಯ ಬದುವಿನ ಸಾಲಿಗೆ ಜನರು
ವನಿತೆಯರಾಡುವ ಶ್ರಾವ್ಯದ ಪದವು
ಶ್ರಮೆಯನು ಮರೆಸುವ ಆ ವಿಧವು

ಕಣ್ಣಿಗೆ ಬಣ್ಣದ ಕಾಮನಬಿಲ್ಲು
ಬಾಲಕರಾಡುವ ಚಿಣ್ಣಿಯ ಕೋಲು
ಮಲ್ಲಿಗೆ ಚಪ್ಪರ ಮನೆಗಳ ಮುಂದೆ
ಊರಿಗೆ ಮರಳುವ ತುರು ಮಂದೆ

ಮಾವಿನ ತೋಪಿನ ಮರಗಳ ತಂಪು
ಕೋಗಿಲೆ ಕೂಗುವ ಶಬ್ದದ ಇಂಪು
ತಾವರೆ ಪುಷ್ಪದ ಕೊಳಗಳ ತುಳುಕು
ಚಂದ್ರನ ಉದಯದ ಆ ಬೆಳಕು

ಊರಿನ ಮುಂದಿನ ದೇವರ ಗುಡಿಯು
ಬಕುತಿಯ ಪೂಜೆಯ ಗಂಟೆಯ ದನಿಯು
ಸ್ವಾಮಿಗೆ ಚಿಗುರಿನ ಉರುವೆಯ ಮೊರೆಯು
ಊರನು ಸುತ್ತುವ ಪಲ್ಲಕಿಯು

ಹೊರೆಗಳ ಕಣಗಳಿಗೊಯ್ಯುವ ಓಟ
ಗ್ರಾಮದಿ ರೈತರ ಮನೆಗಳ ಊಟ
ಥಾಕಿಟ ಥಾಕಿಟ ಶಬ್ದದ ಕೂಟ
ಝೋಕಿಲಿ ಹಾಕುವ ಕೋಲಾಟ

ಹಳ್ಳಿಯ ಜನಗಳ ಬೀಸುವ ಪದವು
ಬಿತ್ತಿದ ಹೊಲಗಳ ತೆನೆಗಳ ಕೊಯ್ಲು
ಕಣದಲಿ ರಾಶಿಯನಳೆಯುವ ಮುದವು
ಜನಕಜೆ ಮನಕದು ಬಲು ಹಿತವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾನೆಟ್…
Next post ಒಟ್ಟೆಷ್ಟಾಯಿತು ಕವಿತೆ?

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…