Home / ಕವನ / ಕವಿತೆ / ಹಳ್ಳಿಯ ಜೀವನ

ಹಳ್ಳಿಯ ಜೀವನ

ಎತ್ತಿನ ಕತ್ತಿನ ಗೆಜ್ಜೆಯ ಸರವು
ಮೊರೆಯಿತು ಘಲ್ ಘಲ್ ಘಲ್ಲೆಂದು
ಹಳ್ಳಿಯ ಸರಳದ ಜೀವನ ನೆನೆದು
ಕುಣಿಯಿತು ಎನ್ನೆದೆ ಥೈ ಎಂದು

ಸೂರ್ಯನ ಅಸ್ತಮ ಸಮಯದ ಚೆಲುವು
ಪಚ್ಚೆಯ ಪಯಿರಿನ ನೋಟದ ಸುಖವು
ಹಕ್ಕಿಗಳೋಟದ ಗುಂಪಿನ ಸೊಗವು
ವಿಶ್ವವ ತುಂಬಿದ ಆಗಸವು

ಏರಿಯ ನೀರಿನ ಅಲೆಗಳ ತೆರೆಯು
ಗದ್ದೆಯ ಬದುವಿನ ಸಾಲಿಗೆ ಜನರು
ವನಿತೆಯರಾಡುವ ಶ್ರಾವ್ಯದ ಪದವು
ಶ್ರಮೆಯನು ಮರೆಸುವ ಆ ವಿಧವು

ಕಣ್ಣಿಗೆ ಬಣ್ಣದ ಕಾಮನಬಿಲ್ಲು
ಬಾಲಕರಾಡುವ ಚಿಣ್ಣಿಯ ಕೋಲು
ಮಲ್ಲಿಗೆ ಚಪ್ಪರ ಮನೆಗಳ ಮುಂದೆ
ಊರಿಗೆ ಮರಳುವ ತುರು ಮಂದೆ

ಮಾವಿನ ತೋಪಿನ ಮರಗಳ ತಂಪು
ಕೋಗಿಲೆ ಕೂಗುವ ಶಬ್ದದ ಇಂಪು
ತಾವರೆ ಪುಷ್ಪದ ಕೊಳಗಳ ತುಳುಕು
ಚಂದ್ರನ ಉದಯದ ಆ ಬೆಳಕು

ಊರಿನ ಮುಂದಿನ ದೇವರ ಗುಡಿಯು
ಬಕುತಿಯ ಪೂಜೆಯ ಗಂಟೆಯ ದನಿಯು
ಸ್ವಾಮಿಗೆ ಚಿಗುರಿನ ಉರುವೆಯ ಮೊರೆಯು
ಊರನು ಸುತ್ತುವ ಪಲ್ಲಕಿಯು

ಹೊರೆಗಳ ಕಣಗಳಿಗೊಯ್ಯುವ ಓಟ
ಗ್ರಾಮದಿ ರೈತರ ಮನೆಗಳ ಊಟ
ಥಾಕಿಟ ಥಾಕಿಟ ಶಬ್ದದ ಕೂಟ
ಝೋಕಿಲಿ ಹಾಕುವ ಕೋಲಾಟ

ಹಳ್ಳಿಯ ಜನಗಳ ಬೀಸುವ ಪದವು
ಬಿತ್ತಿದ ಹೊಲಗಳ ತೆನೆಗಳ ಕೊಯ್ಲು
ಕಣದಲಿ ರಾಶಿಯನಳೆಯುವ ಮುದವು
ಜನಕಜೆ ಮನಕದು ಬಲು ಹಿತವು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...