ಹಳ್ಳಿಯ ಜೀವನ

ಎತ್ತಿನ ಕತ್ತಿನ ಗೆಜ್ಜೆಯ ಸರವು
ಮೊರೆಯಿತು ಘಲ್ ಘಲ್ ಘಲ್ಲೆಂದು
ಹಳ್ಳಿಯ ಸರಳದ ಜೀವನ ನೆನೆದು
ಕುಣಿಯಿತು ಎನ್ನೆದೆ ಥೈ ಎಂದು

ಸೂರ್ಯನ ಅಸ್ತಮ ಸಮಯದ ಚೆಲುವು
ಪಚ್ಚೆಯ ಪಯಿರಿನ ನೋಟದ ಸುಖವು
ಹಕ್ಕಿಗಳೋಟದ ಗುಂಪಿನ ಸೊಗವು
ವಿಶ್ವವ ತುಂಬಿದ ಆಗಸವು

ಏರಿಯ ನೀರಿನ ಅಲೆಗಳ ತೆರೆಯು
ಗದ್ದೆಯ ಬದುವಿನ ಸಾಲಿಗೆ ಜನರು
ವನಿತೆಯರಾಡುವ ಶ್ರಾವ್ಯದ ಪದವು
ಶ್ರಮೆಯನು ಮರೆಸುವ ಆ ವಿಧವು

ಕಣ್ಣಿಗೆ ಬಣ್ಣದ ಕಾಮನಬಿಲ್ಲು
ಬಾಲಕರಾಡುವ ಚಿಣ್ಣಿಯ ಕೋಲು
ಮಲ್ಲಿಗೆ ಚಪ್ಪರ ಮನೆಗಳ ಮುಂದೆ
ಊರಿಗೆ ಮರಳುವ ತುರು ಮಂದೆ

ಮಾವಿನ ತೋಪಿನ ಮರಗಳ ತಂಪು
ಕೋಗಿಲೆ ಕೂಗುವ ಶಬ್ದದ ಇಂಪು
ತಾವರೆ ಪುಷ್ಪದ ಕೊಳಗಳ ತುಳುಕು
ಚಂದ್ರನ ಉದಯದ ಆ ಬೆಳಕು

ಊರಿನ ಮುಂದಿನ ದೇವರ ಗುಡಿಯು
ಬಕುತಿಯ ಪೂಜೆಯ ಗಂಟೆಯ ದನಿಯು
ಸ್ವಾಮಿಗೆ ಚಿಗುರಿನ ಉರುವೆಯ ಮೊರೆಯು
ಊರನು ಸುತ್ತುವ ಪಲ್ಲಕಿಯು

ಹೊರೆಗಳ ಕಣಗಳಿಗೊಯ್ಯುವ ಓಟ
ಗ್ರಾಮದಿ ರೈತರ ಮನೆಗಳ ಊಟ
ಥಾಕಿಟ ಥಾಕಿಟ ಶಬ್ದದ ಕೂಟ
ಝೋಕಿಲಿ ಹಾಕುವ ಕೋಲಾಟ

ಹಳ್ಳಿಯ ಜನಗಳ ಬೀಸುವ ಪದವು
ಬಿತ್ತಿದ ಹೊಲಗಳ ತೆನೆಗಳ ಕೊಯ್ಲು
ಕಣದಲಿ ರಾಶಿಯನಳೆಯುವ ಮುದವು
ಜನಕಜೆ ಮನಕದು ಬಲು ಹಿತವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾನೆಟ್…
Next post ಒಟ್ಟೆಷ್ಟಾಯಿತು ಕವಿತೆ?

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys