ಪ್ರಕೃತಿ ಜನ್ಯ

ವೀರಪಂಡಿತ ಶಾಸ್ತ್ರಕಾರರೆ
ಜ್ಞಾನನಿಧಿ ಋಷಿವರ್ಯರೆ,
ಹಿಂದೆ ಗತಿಸಿದ ಯೋಗಪುರುಷರೆ
ನಿಮ್ಮ ಕಷ್ಟವ ನೆನೆವೆನು

ನಿಬಿಡವಾಗಿದೆ ನೀವು ರಚಿಸಿದ
ಗ್ರಂಥರಾಶಿಯು ಧರೆಯೊಳು
ಸೃಷ್ಟಿಯಂತ್ರವ ಭೇದಿಸುವ ಘನ
ಮಥನ ರವವಿದೆ ಅದರೊಳು

ಬಂದು ಇಲ್ಲಿಗೆ ಭ್ರಾಂತರಾದಿರೊ
ಏನಿದೆನ್ನುತ ಕುಳಿತಿರೋ
ದೀರ್ಘಯೋಚನೆ ಗೆಯ್ದು ಶೋಧಿಸಿ
ಸಾಧ್ಯವಲ್ಲಿದು ಎಂದಿರೊ

ಸುಂದರದ ಈ ಕೃತಿಯ ಪರಿಕಿಸಿ
ಹಿಗ್ಗಿ ಸಂತಸಗೊಂಡಿರೊ
ಮುಂದೆ ನಡೆಯುತ ಸೋತಿರೋ, ಆ-
ನಂದವನೆ ಸವಿದುಂಡಿರೊ

ಸಿಹಿಯನುಂಡಿರೊ ಕಹಿಯನುಂಡಿರೊ
ಮೂಲವರಿಯದೆ ನೊಂದಿರೊ
ಗೆಯ್ದ ಗೆಮ್ಮೆಯ ಫಲವ ಕಾಣುವ
ಮೊದಲಿಗೇ ಮರೆಯಾದಿರೊ

ಯಾರು ಬಲ್ಲರು ನಿಮ್ಮ ಕಷ್ಟವ
ಸಾಧ್ಯವೇನದು ತಿಳಿಯಲು
ಪ್ರಕೃತಿಜನ್ಯವಿದಿಂತು ಸಾಗಿರೆ
ಜನಕಜೆಯು ಏಗೆಯ್ವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ಬಾ ಓ ಬೆಳಕೇ
Next post ಮರದ ವ್ಯಥೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…