Home / ಕವನ / ಕವಿತೆ / ಮರದ ವ್ಯಥೆ

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ
ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ
ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ.

ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ
ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ
ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು.
ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು
ನೋಡುತ್ತಾ ಆಟ ಆಡುತ್ತಾ,
ಮೈಲಿಗೆ ಅಸಮಾನತೆ ಅನಿಸಿತೋ
ಕೈ ಕತ್ತರಿಸಿದ್ದೀರಿ
ಪೋಲಿ ಹುಡುಗರು ಮತ್ತೊಂದು ಕೈ ಮುರಿದರು.
ಆದರೂ ಮತ್ತೆ ಚಿಗುರಿ ಮರವಾಗಿ ಬೆಳೆದು
ನೆರಳು ಕೊಡುವ ಕನಸುಕಣ್ಣಿನ ಮರ ನಾನು.

ನಾಯಿಹಂದಿಗಳ ಕಚ್ಚಾಟದ ನಡುವೆ
ವಿಷಹೊಗೆಯ ಒದೆತಗಳು ತಿನ್ನುತ
ಬೆಳೆಯುತ್ತಿದ್ದೇನೆ ಇಕ್ಕಟ್ಟಾದ ರಸ್ತೆಯ ಎಡಬಲಕೆ.

ಆದರೇನು!-
ವಿದ್ಯುತ್ ಇಲಾಖೆಯವ ಕಠಿಣ ಹೃದಯಿ
ಕೆಳಗೆ ಕೆಬಲ್‌ಗೆಂದು ಕಾಲುಬೆರಳುಗಳು ಕತ್ತರಿಸಿ
ಮೇಲೆ ತೋಳು ತೋಳುಗಳೂ ಕತ್ತರಿಸಿದ
ಹೃದಯವಂತ ಭಕ್ತರೂ ಕೂಡಾ
ಗಣೇಶ ಮೆರವಣಿಗೆಯ ಲಾರಿಗೆ
ಅಡ್ಡ ಎಂದು ಮತ್ತೆ ಮತ್ತೆ ಮುರಿದು ಎಸಿಯುವದೆ?

ಉರುವಲಕೆ ಲಟಲಟನೆ
ಮುರಿಯುವ ಕೆಲವರ ಖುಷಿಯೊಳಗೆ
ನನ್ನುಸಿರ ಸುಡುವುದು ಗೊತ್ತಾದೀತೆ?

ಈಗ,
ಬಳಲಿ ಬಳಲಿ ಕೃಶವಾಗಿ
ಆಕಾಶಕ್ಕೆ ಮೊರೆಯಿಡುತ್ತ ಮೇಲೇರುತ್ತಿದ್ದರೆ
ಅಲ್ಲಿಯೂ ಗಾಳಿದೇವನ ಹೊಡೆತವೆ?
ಎಷ್ಟೊಂದು ಸಹಿಸಲಿ ನಾನು?
ನಿಮ್ಮ ಮನೆಯ ಮೇಲೆ
ಸ್ಕೂಟರ್ ಕಾರ್ ಕಂಪೌಂಡುಗಳ ಮೇಲೆ
ಬಿದ್ದದ್ದು ನಿಮಗೂ ಒಂದಿಷ್ಟು ಪೆಟ್ಟು ಕೊಟ್ಟದ್ದು
ನನಗೂ ವ್ಯಥೆ, ಹೇಳಿ ಏನು ಮಾಡಲಿ ನಾನು
ನೀವೇ ಮಾಡಿದ್ದು
ಮಾಡಿದ್ದುಣ್ಣೋ ಮಹಾರಾಯಾ.

ಒಂದೈದು ನಿಮಿಷ ಬನ್ನಿ ಬನ್ನಿ
ನಿಮ್ಮ ಕಂಪೌಂಡಿಗೆ, ಸುಂದರ ಟೆರಸ್ಸಿಗೂ
ಅಂಗಾಂಗ ಕೊಚ್ಚಿ ಕೊಚ್ಚಿ ಹಾಕಿ
ಮೊಂಡು ಮಾಡಿದ ಈ
ಕುಷ್ಟರೋಗಿಯನ್ನೋ ಕುಂಟನನ್ನೋ ನೋಡಲು.
ಕಾಡಿನಲಿ ಹುಟ್ಟಿಬೆಳೆದರೂ
ಬಿಡುವುದಿಲ್ಲ ಬಿಡಿ ನೀವು
ಬೆಂಕಿ ಹಚ್ಚುವದು, ಬೇರು ಸಮೇತ ಉರುಳಿಸಿ
ನಿಮ್ಮ ಮನೆಗೆ ಬಾಗಿಲುಮಾಡಿ
ನೀವು ಭಧ್ರವಾಗಿದ್ದು
ನಮ್ಮನ್ನು ಅಭಧ್ರವಾಗಿಸುವವರು.

ದೇವರೇ ಕ್ಷಮಿಸು ಮನುಷ್ಯರನು
ಕಲಿಸು ಪ್ರೀತಿ ಶಾಂತಿ ಸಹನೆ!
————————
‘ಹಿಂದೆ ಬಂದರೆ ಒದಯಬೇಡಿ ಮುಂದೆ ಬಂದರೆ ಹಾಯಬೇಡಿ’- ಗೋವಿನ ಹಾಡು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...