ಬನ್ನಿ ತಿರುವಳ್ಳುವರ್

ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ
ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ.
ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು?
ಪಂಪ ರನ್ನರ ಬದಿಗೆ
ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ
ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು
ಎಲ್ಲ ಕಾಲಕ್ಕೂ
ತನ್ನೊಡಲ ಬಿಗಿದ ಕಾಮದ ಸರ್ಪಸುತ್ತಿಂದ
ಮುಕ್ತವಾಗುವುದನ್ನು ಆಡಿ ತೋರಿಸಿದ್ದೀರಿ,
ಧರ್ಮಾರ್ಥಕಾಮ ಸಂಗಮದ ಕ್ಷೇತ್ರಕ್ಕೆ ಕರೆಸಿ
ಮಿಂದು ಮಡಿಯಾಗಿ
ಎಂದು ಹರಸಿದ್ದೀರಿ.
ಭಾಷೆ ಯಾವುದೆ ಇರಲಿ, ಕಾಲ ಯಾವುದೆ ಇರಲಿ
ನೀವು ಹಚ್ಚಿದ ದೀಪ ಎಲ್ಲ ಗಡಿಯಾಚೆಗೂ
ಬೆಳಕ ಸುರಿವಂಥದು
ಕೋಟಿ ಯೋಜನದಾಚೆಯಿಂದ ಹಾಯ್ದರು ಸೂರ್ಯ-
ಕಿರಣ ಭೂಮಿಗೆ ಸೃಷ್ಟಿಶಕ್ತಿ ಕೊಡುವಂಥದು.

ನಿಮ್ಮ ಹೆಸರಲ್ಲಿ ಇಲ್ಲಿ ಏನೋ ಗದ್ದಲ ಧೂಳು ಎದ್ದದ್ದು ಕಂಡು
ನಿಮಗೆಷ್ಟು ವ್ಯಥೆಯೋ!
ತಿರುಳನೆಲ್ಲೋ ಚೆಲ್ಲಿ ಕರಟಕ್ಕೆ ಕಿತ್ತಾಟ
ನಿಮ್ಮ ಕವಿತೆಯ ಬಿಟ್ಟು ಕಲ್ಲ ಮೂರ್ತಿಯ ನಿಲ್ಲಿಸುವೆವೆಂಬ
ಮೂರ್ಖರಿಗೆ
ಏನು ಮತಿಯೋ!
ಬನ್ನಿ ತಿರುವಳ್ಳುವರ್ ನಿಮಗೆ ಪ್ರೀತಿಯ ನಮನ
ಕಲ್ಲಾಗಿ ಅಲ್ಲ ಸಿರಿಕವಿತೆಯಾಗಿ
ಯಾವ ಕಾವ್ಯಕ್ಕೆ ನಿಮ್ಮ ಸಾರವೆಲ್ಲವ ಧಾರೆಯೆರೆವಿರೋ
ಆ ಕೃತಿಯ ರೂಪವಾಗಿ.
ಬನ್ನಿ ತಿರುವಳ್ಳುವರ್, ಬನ್ನಿ ಕಾದಿದ್ದೇವೆ
ನಿಮ್ಮ ಕಾವ್ಯದ ಗಂಧಜಲದಲ್ಲಿ ಮೀಯಲು
ನಿಮ್ಮ ಲೋಕವಿವೇಕ ಪ್ರಭೆಗೆ ಮೈಯೊಡ್ಡಲು.
ಅಚ್ಚ ಕನ್ನಡದಲ್ಲಿ ಹೊಚ್ಚ ಹೊಸ ಮೈ ಪಡೆದು
ಅವತರಿಸುತಲೆ ಇರಲಿ ನಿಮ್ಮ ಕವಿತೆ,
ಕನ್ನಡದ ಕಾವ್ಯದೀಪಾವಳಿಯ ದೃಶ್ಯದಲಿ
ತಪ್ಪದೇ ಉರಿದಿರಲಿ ನಿಮ್ಮ ಹಣತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೪೬
Next post ಕಾಕಾ ಕಾಕಾ ಪರಾರಿಗೋ….

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys