Home / ಕವನ / ಕವಿತೆ / ಬನ್ನಿ ತಿರುವಳ್ಳುವರ್

ಬನ್ನಿ ತಿರುವಳ್ಳುವರ್

ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ
ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ.
ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು?
ಪಂಪ ರನ್ನರ ಬದಿಗೆ
ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ
ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು
ಎಲ್ಲ ಕಾಲಕ್ಕೂ
ತನ್ನೊಡಲ ಬಿಗಿದ ಕಾಮದ ಸರ್ಪಸುತ್ತಿಂದ
ಮುಕ್ತವಾಗುವುದನ್ನು ಆಡಿ ತೋರಿಸಿದ್ದೀರಿ,
ಧರ್ಮಾರ್ಥಕಾಮ ಸಂಗಮದ ಕ್ಷೇತ್ರಕ್ಕೆ ಕರೆಸಿ
ಮಿಂದು ಮಡಿಯಾಗಿ
ಎಂದು ಹರಸಿದ್ದೀರಿ.
ಭಾಷೆ ಯಾವುದೆ ಇರಲಿ, ಕಾಲ ಯಾವುದೆ ಇರಲಿ
ನೀವು ಹಚ್ಚಿದ ದೀಪ ಎಲ್ಲ ಗಡಿಯಾಚೆಗೂ
ಬೆಳಕ ಸುರಿವಂಥದು
ಕೋಟಿ ಯೋಜನದಾಚೆಯಿಂದ ಹಾಯ್ದರು ಸೂರ್ಯ-
ಕಿರಣ ಭೂಮಿಗೆ ಸೃಷ್ಟಿಶಕ್ತಿ ಕೊಡುವಂಥದು.

ನಿಮ್ಮ ಹೆಸರಲ್ಲಿ ಇಲ್ಲಿ ಏನೋ ಗದ್ದಲ ಧೂಳು ಎದ್ದದ್ದು ಕಂಡು
ನಿಮಗೆಷ್ಟು ವ್ಯಥೆಯೋ!
ತಿರುಳನೆಲ್ಲೋ ಚೆಲ್ಲಿ ಕರಟಕ್ಕೆ ಕಿತ್ತಾಟ
ನಿಮ್ಮ ಕವಿತೆಯ ಬಿಟ್ಟು ಕಲ್ಲ ಮೂರ್ತಿಯ ನಿಲ್ಲಿಸುವೆವೆಂಬ
ಮೂರ್ಖರಿಗೆ
ಏನು ಮತಿಯೋ!
ಬನ್ನಿ ತಿರುವಳ್ಳುವರ್ ನಿಮಗೆ ಪ್ರೀತಿಯ ನಮನ
ಕಲ್ಲಾಗಿ ಅಲ್ಲ ಸಿರಿಕವಿತೆಯಾಗಿ
ಯಾವ ಕಾವ್ಯಕ್ಕೆ ನಿಮ್ಮ ಸಾರವೆಲ್ಲವ ಧಾರೆಯೆರೆವಿರೋ
ಆ ಕೃತಿಯ ರೂಪವಾಗಿ.
ಬನ್ನಿ ತಿರುವಳ್ಳುವರ್, ಬನ್ನಿ ಕಾದಿದ್ದೇವೆ
ನಿಮ್ಮ ಕಾವ್ಯದ ಗಂಧಜಲದಲ್ಲಿ ಮೀಯಲು
ನಿಮ್ಮ ಲೋಕವಿವೇಕ ಪ್ರಭೆಗೆ ಮೈಯೊಡ್ಡಲು.
ಅಚ್ಚ ಕನ್ನಡದಲ್ಲಿ ಹೊಚ್ಚ ಹೊಸ ಮೈ ಪಡೆದು
ಅವತರಿಸುತಲೆ ಇರಲಿ ನಿಮ್ಮ ಕವಿತೆ,
ಕನ್ನಡದ ಕಾವ್ಯದೀಪಾವಳಿಯ ದೃಶ್ಯದಲಿ
ತಪ್ಪದೇ ಉರಿದಿರಲಿ ನಿಮ್ಮ ಹಣತೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...