Home / ಲೇಖನ / ಇತರೆ / ಕಾಕಾ ಕಾಕಾ ಪರಾರಿಗೋ….

ಕಾಕಾ ಕಾಕಾ ಪರಾರಿಗೋ….

ನಮ್ಮೆಲ್ಲರ ಬದುಕಿನ ಅತ್ಯಂತ ಹಳೆಯ ನೆನಪುಗಳಿಗೆ ಕೋಟಿ ರೂಪಾಯಿ ಬೆಲೆ!

ಇಂದಿನ ಐಟಿ-ಬಿಟಿ-ಮೊಬೈಲ್-ಇಂಟರ್ನೆಟ್-ಟೀವಿ-ಠೀವಿ ಯುಗದಲ್ಲಿ… ಟೆನ್ಶನ್ನಿನ ತಿಪ್ಪವ್ವ… ರಕ್ತದೊತ್ತಡದ ರಂಗವ್ವ… ಸಕ್ಕರೆ ಕಾಯಿಲೆಯ ಅಕ್ಕರೆಯ ಜೋಕುಮಾರಪ್ಪ… ಇವರೆಲ್ಲ ನಮ್ಮ ಅಂತರಂಗದ ಆತ್ಮೀಯ ಸಂಗಾತಿಗಳಾಗಿ ಬಿಟ್ಟಿದ್ದಾರೆ!

ತಂಪೊತ್ತಿನಲ್ಲಿ ತಣ್ಣಗೆ ನೆನೆಯಬೇಕಾದ ಬೆಳದಿಂಗಳ ನೆನಪುಗಳು ಮಳೆಬಿದ್ದು ಗೂಡು ಸೇರಿ ಬಿಟ್ಟಿವೆ. ಸ್ಯಾಟಲೈಟ್ ಕನೆಕ್ಷನ್ ಸಂಪರ್ಕ ರಾಕ್ಷಸ ಅವತಾರ ತಾಳಿ ಬಂದ ನಂತರ… ಶಾಂತಿಯ ಸೋಬಾನೆ ದೇವತೆ ನಮ್ಮ ಹಳೆಯ ನೆನಪುಗಳೊಂದಿಗೆ ಶಾಶ್ವತವಾಗಿ ಓಡಿಯೇ ಹೋದಳು ಎಂದು ದುಃಖವಾಗುತ್ತದೆ!

ಜಂಗುತಿಂದ ಮುರುಕು ಟ್ಯಾಂಕಿನಲ್ಲಿ ಚಂದ್ರ ಚಕೋರಿ ರಾಜಕುಮಾರಿಯನ್ನು ಕವುದಿಯಲ್ಲಿ ಸುತ್ತಿ ಮುಚ್ಚಿಟ್ಟಂತೆ, ಕೆಲವರು ಹುಚ್ಚರು ತಮ್ಮ ಬದುಕಿನ ಇಂಥ ಪ್ರಾಚೀನ ನೆನಪುಗಳನ್ನು ಬಚ್ಚಿ ಇಟ್ಟಿರುತ್ತಾರೆ! ಅಂತ ಹಾಳುಹಳೇ ತಿರುಕಾರಾಮರಲ್ಲಿ ನಾನೂ ಒಬ್ಬ!

ಹಾಂ… ಬಹುಶಃ ಇಂಥ ಸವಿನೆನಪುಗಳು ಹಳ್ಳಿಯ ಗಂವ್ವಾರನಿಂದ ಹಿಡಿದು ಅಮೇರಿಕಾ ಪ್ರೆಸಿಡೆಂಟ್ ವರೆಗೂ ಒಂದೇ ಥರ ಅಂತ ಚೂರು ಜಂಬದಿಂದ ಹೇಳಲೂ ಬಹುದು!

ನೆನಪುಗಳಿಗೆ ಜಾತಿ ಇಲ್ಲ!
ನೆನಪುಗಳಿಗೆ ಅಂತಸ್ತು ಇಲ್ಲ!

ಹೌದು… ನಾನಿನ್ನೂ ಅಮ್ಮನ ಟೊಂಕದಲ್ಲಿ ಕುಂತು ಹೋಗುತ್ತಿದ್ದ ಮೂರು ವರ್ಷಗಳ ಕುನ್ನಿ ಮರಿ ಆಗಿದ್ದೆ!

ನನಗೆ ಸುಂದರವಾದ ಜರಿ ಟಪ್ಪಿಗೆ ಇತ್ತು. ನಮ್ಮಣ್ಣ ಕೊಟ್ಟ ಮುರುಕು ಹ್ಯಾಟು ಇತ್ತು. ಅಷ್ಟೇ ಅಲ್ಲ ನನ್ನ ಎರಡೂ ಕಿವಿಗಳಲಿ ಬಂಗಾರದ ಎರಡು ಸುಂದರವಾದ ಬೆಲೆಬಾಳುವ ಮುರುವುಗಳೂ ಇದ್ದವು!

ಹಾಂ… ಹಳೆ ಹುಬ್ಬಳ್ಳಿಯ ಸರಸೋತೆಮ್ಮ ಕಟ್ಟಿಮೇಲೆ ಆ ಕಾಕಾ ಆ ದಿನ ನನ್ನ ಹತ್ತಿರ ಬಂದ. ಅವನೇ ನನಗೆ… “ನಾ ನಿನ್ನ ಕಾಕಾ ಅದೇನೀ… ಬಾ…” ಅಂತ ಪ್ರೀತಿಯಿಂದ ತನ್ನ ಪರಿಚಯ ಹೇಳಿ ಎತ್ತಿಕೊಂಡು ತನ್ನ ತೊಡೆಯ ಮೇಲೆ ನನ್ನನ್ನು ಮಲಗಿಸಿ ನಂಬಿಗೆ ಹುಟ್ಟಿಸಿಯೇ ಬಿಟ್ಟ. ಅಲ್ಲದೆ ನನಗೆ…. ತಿನ್ನು…. ತಿನ್ನು…. ಅಂತ ಜುಲಿಮಿ ಮಾಡಿ ವಣಾಚುಮ್ಮರಿ, ಡಾಣಿ ತಿನ್ನಿಸಿದ. ಮೆಲ್ಲನೆ ರಮಿಸುತ್ತ ನನ್ನ ಕಿವಿಯಲ್ಲಿಯ ಎರಡೂ ಬಂಗಾರದ ಮುರುವುಗಳನ್ನು ಬಿಚ್ಚಿಕೊಂಡು ಒಂದು ದೊಡ್ಡ ತಾಮ್ರದ ದುಡ್ಡು ನನ್ನ ಕೈಯಲ್ಲಿಟ್ಟ… ಮನೆಗೆ ಹೋಗು… ಅಂದ!

ನನಗೆ ಖುಷಿಯೋ ಖುಷಿ. ಯಾಕೆಂದರೆ ಆ ಕಾಲದಲ್ಲಿ ಒಂದು ದುಡ್ಡಿಗೆ ಆರುಭಜಿ ಬರುತ್ತಿದ್ದವು!

ನಾನು ಮನೆಗೆ ಹೋಗಿ… ಅವ್ವ ಅಪ್ಪ ಅವರಿಗೆ… “ಕಾಕಾ ದುಡ್ಡು, ಕೊಟ್ಟಾ…” ಅಂತ ಕುಣಿದಾಡುತ್ತ ತೋರಿಸಿದೆ. ನನ್ನ ಅವ್ವ… “ಯಾ ಕಾಕಾ?” ಅಂತ ಕೇಳಿದಳು. ನಾನು… “ಕಾಕಾ… ಆ ಕಟೀ ಮ್ಯಾಲಿನ ಕಾಕಾ…” ಎಂದು ಹೇಳುತ್ತಾ, ನನ್ನ ಕಿವಿಯ ಬಂಗಾರದ ಮುರುವುಗಳನ್ನು ಕಾಕಾ ಬಿಚ್ಚಿಕೊಂಡು ಒಂದು ದುಡ್ಡು ಕೊಟ್ಟದ್ದನ್ನು ಖುಷಿಯಿಂದ ಕುಣಿದು ಹೇಳಿದೆ!

ತಕ್ಷಣವೇ ನನ್ನ ಅವ್ವ ಚಿಟ್ಟನೇ ಚೀರಿದಳು! ನನ್ನ ಅಕ್ಕ ಪಾರಕ್ಕೆ ಅವಳೂ ಚೀರಿದಳು! ನನ್ನ ಅಪ್ಪ ರೂಲ್‍ಕಟಿಗಿ ತೊಗೊಂಡು ಖಡಕ್ ರುದ್ರರಾಗಿ ಕಳ್ಳನನ್ನು ಹಿಡಿಯಲು ಎದ್ದರು! ಮನೆಯ ಹತ್ತಾರು ಜನರು ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಓಣಿಗಳ ಹತ್ತಾರು ದಿಕ್ಕಿನಲ್ಲಿ ನನ್ನನ್ನು ಹೊತ್ತುಕೊಂಡು ಓಡೋಡಿ ಹೋದರು! ಓಣಿಯ ಜನರೆಲ್ಲಾ ಹಿಂಡಿಗೆ ಹಿಂಡೇ ಓಡಾಡಿದರು!

ಆ ನನ್ನ ಪ್ರೀತಿಯ ಕಾಕಾ… ಕೌ… ಅಂತ ಹಾರಿ ಹೋಗಿ ಬಿಟ್ಟಿದ್ದ!

ಇನ್ನೆಲ್ಲಿ ಕಾಕಾ?

ಒಂದು ತಾಮ್ರದ ದುಡ್ಡು ಮಾತ್ರ ನನ್ನ ಕೈಯಲ್ಲಿ ಕಾಕನ ಕರುಣೆ ಕಾಣಿಕೆಯಾಗಿ ಉಳಿಯಿತು!
*****

Tagged:

One Comment

  • ಅರುಣ್ ಅದಿನರಾಯನ್ ಬಿಜ್ಜಳ ಇಳಕಲ್
    Reply

    ಬಹಳ ಸುಂದರವಾಗಿ ಮೂಡಿದೆ ಕಾಕನ ನೆನಪು, ಶೈಲಿ ಮಾತ್ರ ನನ್ನ ನೆಚ್ಚಿನ ಗುರುಗಳದು, ಹಿಂದಿನ ನೆನಪು ಬಿಚ್ಚಿ ಅಚ್ಚಲಿಯದಂತೆ ತಾವು ಬರೆದಿದ್ದೀರ ಯಿಂದಿನ tv mobile ಯುಗದಲ್ಲಿ ಕೂಡ ಈ ಬರಹಗಳು ಮನಶಿನ್ಯಗ print ಆಗಿವೆ,
    Sir ಇನ್ನು ಮುಂದೆ ಕೂಡ ಯಿಂತಹ ಬರಹಗಳು ತಮ್ಮಿಂದ ನಿರಿಸ್ಕಿಸುತ್ತೆನೆ

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...